ಪುಟ:ಕರ್ನಾಟಕ ಗತವೈಭವ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦

ಕರ್ನಾಟಕ ಗತವೈಭವ



ಶಿಲಾಶಾಸನವು ದೊರೆತಿದೆ. ಇದಲ್ಲದೆ, ಈ ವಿಷಯವನ್ನು ಕುರಿತು ನಾವು ವ್ಯಾಸಂಗ ಮಾಡುವಾಗ, ಕುಲಾಬಾ ಜಿಲ್ಲೆಯ 'ಚೌಲ' ಎಂಬ ಗ್ರಾಮದಲ್ಲಿ ಕನ್ನಡ ಶಿಲಾಲಿಪಿಯೊಂದು, ಸಿಂಕ್ಲೇಯರ ಸಾಹೇಬರಿಗೆ (W.S.Sinclair) ೧೮೭೪ನೆಯ ಫೆಬ್ರುವರಿಯಲ್ಲಿ ದೊರೆತಂತೆ ಇಂಡಿಯನ್ ಅಂಟಿಕ್ವೇರಿ(Indian Antiquary)ಯ ೭ನೆಯ ಸಂಪುಟದ ೨೩೪ ನೆಯ ಪುಟದಲ್ಲಿ ಉಲ್ಲೇಖವಿರುವುದಾಗಿ ನಾವು ಓದಿರುವೆವು, ವಾಚಕರ ಅವಲೋಕನಾರ್ಥವಾಗಿ ಅದರ ಕೆಲವು ಭಾಗವನ್ನು ಇಲ್ಲಿ ಕೊಡುತ್ತೇವೆ.

"Between the temples and cenotaph, the toddydrawers, were whetting their knives at the time of my visit upon a loose slab, bearing a Kanarese inscription, a thing of itself (philologically Speaking) very remarkable in so thoroughly Maratha country, as in north Konkan. A little money and a good deal of diplomacy ennabled me to place it in the collection of the Bombay Branch of the Royal Asiatic Society; where it has remained unheaded, from that day to this, upon a landing place, where scholars passed it every Week”
ಸಾರಾಂಶ:- “ನಾನು ಅಲ್ಲಿಗೆ ಹೋದಾಗ, ಅಲ್ಲಿರುವ ಗುಡಿ ಮತ್ತು ಸಮಾಧಿಗಳ ನಡುವೆ ಹೆಂಡತೆಗೆಯುವವರು ಒಂದು ಕಲ್ಲಿಗೆ ತಮ್ಮ ಚೂರಿಗಳನ್ನು ಮಸೆಯುತ್ತ ಕುಳಿತು ಕೊಂಡುದುದನ್ನು ಕಂಡೆನು. ನೋಡುವಷ್ಟರಲ್ಲಿ, ಆ ಕಲ್ಲು ಕನ್ನಡ ಶಿಲಾಲೇಖವಾಗಿತ್ತು !ಉತ್ತರ ಕೊಂಕಣದಂಥ ನಡು ಮಹಾರಾಷ್ಟ್ರದಲ್ಲಿ ಈ ತರದ ಕನ್ನಡ ಶಿಲಾಲೇಖವು ದೊರತುದು ಭಾಷಾಶಾಸ್ತ್ರದೃಷ್ಟಿಯಿಂದ ನಿಜವಾಗಿ ಮಹತ್ವದ ಸಂಗತಿಯಲ್ಲವೇ? ಸ್ವಲ್ಪ ಹಣವನ್ನೂ ಬಹಳ ಯುಕ್ತಿಯನ್ನೂ ವಿನಿಯೋಗಿಸಿ ನಾನು ಆ ಶಿಲಾಲೇಖವನ್ನು ಸಂಪಾದಿಸಿ ಅದನ್ನು ರಾಯಲ್ ಏಶಿಯಾಟಿಕ್ ಸೊಸಾಯಟಿಯ ಮುಂಬಯಿ ಶಾಖೆಯಲ್ಲಿರುವ ವಸ್ತು ಸಂಗ್ರಹಗಳಲ್ಲಿ ಇಟ್ಟೆನು. ಅಂದಿನಿಂದ ಇಂದಿನವರೆಗೆ ಅದು ಪಂಡಿತರು ಪ್ರತಿವಾರ ಹಾಯ್ದು ಹೋಗುವ ದಾರಿಯ ಹತ್ತಿರವೇ ಹೊರ