ಪುಟ:ಕರ್ನಾಟಕ ಗತವೈಭವ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧

೩ನೆಯ ಪ್ರಕರಣ – ಕರ್ನಾಟಕ-ವಿಸ್ತಾರ



೪ಾಡುತ್ತ ಬಿದ್ದಿದೆ!"

ನ್ನಡಿಗರೇ, ಇಂಥ ಮಹತ್ವದ ಶಿಲಾಲಿಪಿಯು ಬೆಳಕಿಗೆ ಬಂದು ಮೂರು ತಪಗಳಾಗಿ ಹೋದರೂ, ಅದು ಕನ್ನಡಿಗರಿಗೆ ಮಾತ್ರ ಕಾಣದಿರುವುದು ಯಾತರ ಹೆಗ್ಗುರುತು? ಈ ಶಿಲಾಲೇಖವನ್ನು ನೋಡಬೇಕೆಂಬ ಅಪೇಕ್ಷೆಯಿಂದ ನಾವು ಮುಂಬೈಯಲ್ಲಿ ನಾಲ್ಕು ದಿವಸಗಳ ವರೆಗೆ ಅದನ್ನು ಹುಡುಕಿದರೂ ಅದು ನಮಗೆ ದೊರೆಯದೇ ಹೋಯಿತು. ಆ ಸಂಸ್ಥೆಯ ಯಾದಿ (Catalogue) ಯಲ್ಲಿಯೂ ಅದರ ಹೆಸರು ಸೇರಿದಂತೆ ತೋರಲಿಲ್ಲ, ಸಂಶೋಧಕರು ಈ ವಿಷಯದಲ್ಲಿ ಹೆಚ್ಚು ಶ್ರಮಪಡಬೇಕೆಂದು ನಮ್ಮ ಪ್ರಾರ್ಥನೆ.
(೧೩) ಮೊನ್ನೆ ಮೇ ತಿಂಗಳಲ್ಲಿ ಈ ವಿಷಯವನ್ನೇ ತಲೆಯಲ್ಲಿ ತುಂಬಿಕೊಂಡು ಇತಿಹಾಸ ಭಕ್ತರಾದ ನಮ್ಮ ಕೆಲವು ಸ್ನೇಹಿತರನ್ನು ಕೂಡಿ ಕೊಂಡು ಕನ್ನಡಿಗರಿಗೆ ಅತ್ಯಂತ ಅಭಿಮಾನಾಸ್ಪದವಾದ ವೇರೂಳದ ಮೇಣಬಸ್ತಿಗಳನ್ನೂ, ಮೇಣ ಗುಡಿಗಳನ್ನೂ ನೋಡಲಿಕ್ಕೆ ಹೋಗಿದ್ದೆವು, ಆ ಕಾಲಕ್ಕೆ ಅಲ್ಲೇನಾದರೂ, ಕನ್ನಡ ಶಿಲಾಲಿಪಿಯು ದೊರೆಯುತ್ತದೇನು ಎಂದು ಹುಡುಕುತ್ತಿರಲು, ನಮಗೆ ೩೩ ನೆಯ ನಂಬರಿನ ಮೇಣಬಸ್ತಿಯ ಕಂಬದ ಮೇಲೆ ಕನ್ನಡ ಅಕ್ಷರದ *ಶಿಲಾಲಿಪಿಯೊಂದು ಕಣ್ಣಿಗೆ ಬಿದ್ದಿತು. ಆಗ ನನಗಾದ ಆನಂದವನ್ನು ಬಣ್ಣಿಸಲಳವಲ್ಲ. ವೇರೂಳ ಗ್ರಾಮವಿದ್ದ ತಾಲೂಕಿಗೆ 'ಕನ್ನಡ'ವೆಂಬ ಹೆಸರು. ಸಾರಾಂಶ:- ಇಂಥ ಶಿಲಾ ಲಿಪಿಗಳ ಶೋಧದಿಂದ ನಮ್ಮ ಕನ್ನಡ ಭಾಷೆಯು ಎಲ್ಲಿಯವರೆಗೆ ತನ್ನ ಕಾಲು ಚಾಚಿತ್ತೆಂಬುದು ವಾಚಕರ ಗಮನಕ್ಕೆ ಬಾರದಿರದು. ಆದರೆ ಆ ಕಾರ್ಯವು ಕನ್ನಡಿಗರಿಗಲ್ಲದೆ ಮತ್ತಾರಿಗೆ ಸಾಧ್ಯವು?
(೧೪) ಸಾತಾರೆಯ ಹತ್ತರ ಯವತೇಶ್ವರದಲ್ಲಿ ಜಕಣಾಚಾರ್ಯರ ಕಟ್ಟಿನದೊಂದು ಗುಡಿಯುಂಟು, ಆ ಗುಡಿಯ ಹತ್ತರ ಶಿಲಾಲೇಖವನ್ನು ಹುಡುಕುವಷ್ಟರಲ್ಲಿ ಸಮಿಾಪದ ಹೊಲದಲ್ಲೊಂದು 'ವೀರಗಲ್ಲು' ದೊರೆಯಿತು, ಮರಾಠರಿಗೆ ಈ ವೀರಗಲ್ಲು ಗಳ ಕಲ್ಪನೆಯಿಲ್ಲ,
ಬಗೆಯಾಗಿ ನಮಗೆ ಗೊತ್ತಾದ ಸಂಗತಿಗಳನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ಕೊಟ್ಟಿರುವೆವು. ಇವುಗಳಿಂದ ಯಾವ ನಿಶ್ಚಿತವಾದ ಸಿದ್ಧಾಂತವನ್ನೂ


* ಈ ಶಿಲಾಲೇಖವು ಇಲ್ಲಿಯವರೆಗೆ ಪ್ರವಾಸಿಕರ ಕಣ್ಣಿಗೆ ಬಿದ್ದಂತೆ ತೋರಲಿಲ್ಲ.