ಪಂಚಾಮೃತದಲ್ಲಿ ಉಂಡರೇನು !

ವಿಕಿಸೋರ್ಸ್ದಿಂದ


Pages   (key to Page Status)   

ಪಂಚಾಮೃತದಲ್ಲಿ ಉಂಡರೇನು ! ಮಲಮುತ್ರ ವಿಷಯ ಘನವಕ್ಕು. ಭ್ರಾಂತು ಬೇಡ ಮರುಳೆ ಬೇಡದು ಕಾಯಗುಣ. ಆಸೆಯಾಮಿಷ ತಾಮಸ ಹಸಿವು ತೃಷೆ ವ್ಯಸನ ವಿಷಯಾದಿಗಳಲ್ಲಿ ಹಿರಿಯರು
ಗರುವರುಂಟೆ ! ಭ್ರಾಂತು ಬೇಡ ಮರುಳೆ ! ಬೇಡದು ಕಾಯಗುಣ. ಈ ಭೇದವ ಭೇದಿಸಬಲ್ಲಡೆ ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ ಶ್ರೀಗಂಧದಂತಿರಬೇಕು ಶರಣ.