ಪುಟ:ಕರ್ನಾಟಕ ಗತವೈಭವ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಕರ್ನಾಟಕ ಗತವೈಭವ



೫ನೆಯ ಪ್ರಕರಣ


ಸಾಧನ-ಸಾಮಗ್ರಿ


ವಾ

ಚಕರೇ, ಹಿಂದಿನ ಪ್ರಕರಣದಲ್ಲಿ, ಕರ್ನಾಟಕದೊಳಗೆ ಬಾಳಿದ ಬಲಾಢರಾದ ಅರಸರನ್ನೂ, ಧರ್ಮಸ್ಥಾಪಕರಾದ ಆಚಾರ್ಯರನ್ನೂ, ತೇಜೋಶಿಷ್ಟರಾದ ತತ್ವಜ್ಞಾನಿಗಳನ್ನೂ, ಪ್ರತಿಭಾ ಸಂಪನ್ನರಾದ ವರಕವಿಗಳನ್ನೂ, ಕವಯಿತ್ರಿಯರನ್ನೂ, ವೀರ್ಯವತಿಯರಾದ ವೀರಾಂಗನೆಯರನ್ನೂ, ನಾವು ಕಟ್ಟಿದ ಕಟ್ಟಡಗಳನ್ನೂ ಒಂದರ ಹಿಂದೊಂದು ನಿಮ್ಮ ಅವಲೋಕನಕ್ಕೆ ತಂದು ಕೊಟ್ಟೆವು. ಈ ನಾಮಾವಳಿಯು ನಿಮ್ಮ ನೆನಪಿನಲ್ಲಿರಬೇಕಾದರೆ ಅವರು ಯಾವಾಗ ಹುಟ್ಟಿದರು, ಯಾವಾಗ ಪ್ರಬಲ ಸ್ಥಿತಿಗೆ ಬಂದರು, ಇವೇ ಮುಂತಾದ ಸಂಗತಿಗಳ ಜ್ಞಾನವಿರುವುದು ಅವಶ್ಯವಿದೆ. ನಾವು ಹಿಂದೆ ಹೇಳಿದ ಸಂಗತಿಗಳಿಂದ ನಮ್ಮ ಕನ್ನಡಿಗರಲ್ಲಿ, ಕರ್ನಾಟಕದ ಬಗ್ಗೆ ಸಕೌತುಕವಾದ ಅಭಿಮಾನವೂ, ಕರ್ನಾಟಕ ಇತಿಹಾಸದ ಬಗ್ಗೆ ಜಿಜ್ಞಾಸೆಯೂ ಹುಟ್ಟಿರಬಹುದೆಂದು ಕಲ್ಪನೆ ಮಾಡಿದರೂ ಆ ಜಿಜ್ಞಾಸೆಯನ್ನೂ ತಣಿಸುವಂಥ ಇತಿಹಾಸವೆಲ್ಲಿದೆ? ಆ ತೆರನಾದ ಕನ್ನಡಿಗರ ಆದ್ಯಂತವಾದ ಇತಿಹಾಸವು ಹೊಸತಾಗಿ ಇನ್ನು ನಿರ್ಮಾಣವಾಗಬೇಕಾಗಿದೆ. ಕರ್ನಾಟಕದ ನಿಜವಾದ ಸ್ಥಿತಿಯನ್ನರಿತು, ಅಂಥದೊಂದು ಇತಿಹಾಸವನ್ನು ಬರೆಯುವುದೂ, ಅದು ಕರ್ನಾಟಕದ ಏಳಿಗೆಗೆ ಹೇಗೆ ಸಾಧನವಾಗುತ್ತದೆಂಬುದನ್ನು ಅರಿತುಕೊಳ್ಳುವುದೂ, ಇವೇ ಈಗ ಕನ್ನಡಿಗರ ಪ್ರಥಮ ಕರ್ತವ್ಯಗಳು. ಸದ್ಯಕ್ಕೆ 'ಕರ್ನಾಟಕ'ವೆಂಬ ಶಬ್ದವು ನನ್ನ ಕಿವಿಗೆ ಬಿದ್ದ ಕೂಡಲೆ ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಮಸಮಸಕಾದ ವಿಚಾರಗಳು ಮಾತ್ರ ತಲೆದೋರುತ್ತವೆ. ನಾವು 'ಕರ್ನಾಟಕರು' ಏಕೆ? 'ಕರ್ನಾಟಕ'೦ದೆನಿಸಿಕೊಳ್ಳುವುದರಲ್ಲಿ ನಾವೇಕೆ ಹೆಮ್ಮೆ ಪಡಬೇಕು? ಇವೇ ಮುಂತಾದ ಪ್ರಶ್ನೆಗಳಿಗೆ ನಮ್ಮ ಹತ್ತರ ಸರಿಯಾದ ಉತ್ತರವಿರುವುದಿಲ್ಲ. ಆದುದರಿಂದ, ನಮ್ಮ ಮನದಲ್ಲಿ ಈಗ ಮುಖ ಹಾಳಾಗಿ ನೆಲೆಗೊಂಡಿರುವ ಕಲ್ಪನೆಗಳು