ಪುಟ:ಕರ್ನಾಟಕ ಗತವೈಭವ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫ನೆಯ ಪ್ರಕರಣ - ಸಾಧನ-ಸಾಮಗ್ರಿ

೨೭


ಇದರ ಸತ್ಯತೆಯು, ನಮ್ಮಲ್ಲಿಯ ಮನೋಹರವಾದ ಅಸಂಖ್ಯ ದೇವಾಲಯಗಳನ್ನು ನೋಡಿದರೆ ಗೊತ್ತಾಗುವುದು, ಡಾ. ಫರ್ಗ್ಯುಸನ್ನರೆಂಬವರು ಈ ದೇಶವನ್ನೆಲ್ಲಾ ಸಂಚಾರಮಾಡಿ, ಈ ಕಟ್ಟಡಗಳ ಆಮೂಲಾಗ್ರವಾದ ಇತಿಹಾಸವನ್ನು ಬರೆದಿಟ್ಟದ್ದಾರೆ. ಇತ್ತಿತ್ತ ಬೆಂಗಳೂರಿನಲ್ಲಿಯೂ ಈ ಶಿಲ್ಪ ಕಲೆಯ ವಿಷಯವಾಗಿ 'ದಿ ಇಂಡಿಯನ್ ಆರ್ಕಿಟೆಕ್ಟರ್‌' (The Indian Architecture' ಎಂಬ ಮಾಸ ಪತ್ರಿಕೆಯು ಹೊರಡುತ್ತದೆ. ಈ ಕಟ್ಟಡಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಗುಡಿಯು ಸುಮಾರು ಇಂಥ ಅರಸನ ಆಳಿಕೆಯಲ್ಲಿಯೇ ಹುಟ್ಟಿತೆಂದು ನಿರ್ಧರಿಸಲಿಕ್ಕೆ ಬರುತ್ತದೆಂದು ಡಾ. ಫರ್ಗೂಸನ್ ಇವರು ಹೇಳುತ್ತಾರೆ. ಇದಲ್ಲದೆ, ಆ ಗುಡಿಗಳ ಮೇಲೆ ಕೊರೆದಿರುವ ಚಿತ್ರಗಳಿಂದ ಆ ಕಾಲದ ಜನರ ಕಲಾಕೌಶಲ್ಯ, ಉಡಿಗೆ ತೊಡಿಗೆ, ಸಮಾಜ ಸ್ಥಿತಿ, ಆಯುಧ, ವಾಹನ ಇವೇ ಮೊದಲಾದುವುಗಳು ತಿಳಿದುಬರುತ್ತವೆ. ಕರ್ನಾಟಕದ ಅರಸರನ್ನು ಒಂದು ವೇಳೆ ಮರೆಯಬಹುದು; ಕರ್ನಾಟಕ ವಿದ್ವನ್ಮಣಿಗಳು ಒಂದು ವೇಳೆ ನಮ್ಮ ಸ್ಮೃತಿಪಥದಿಂದ ದೂರವಾದಾರು; ಕರ್ನಾಟಕ ವಾಙ್ಮಯವು ಒಂದುವೇಳೆ ಹುಳು ತಿಂದು ಹಾಳಾಗಿ ಹೋದೀತು! ಆದರೆ ಗುಡ್ಡ ಬೆಟ್ಟಗಳ ಬಂಡೆಗಳಲ್ಲಿ ಕೊರೆಯಲ್ಪಟ್ಟ ಅಖಂಡವಾದ ಕೃತಿಮಗವಿಗಳೂ, ಅಲೌಕಿಕವಾದ ಕಲಾಕೌಶಲ್ಯದಿಂದ ಯುಕ್ತವಾದ ದೇವಾಲಯಗಳೂ ಮಾತ್ರ ನಮ್ಮ ಪ್ರಾಚೀನಕಾಲದ ವೈಭವವನ್ನೂ ಜಾಣ್ಮೆಯನ್ನೂ ಸಂಪತಿಯನ್ನೂ, ಜಗತ್ತಿಗೆಲ್ಲ ಪ್ರದರ್ಶಿಸುತ್ತ ಮಳೆಗಾಳಿಗಳ ಆಘಾತಗಳಿಗೆ ಮೈಗೊಟ್ಟು ಯುಗಾಂತ್ಯದವರೆಗೆ ನಿಲ್ಲುವದರಲ್ಲೇನೂ ಸಂದೇಹವಿಲ್ಲ.
ರನೆಯ ಸಾಧನವಾವುವೆಂದರೆ - ವಾಙ್ಮಯವು. ತಾಳೆಯೋಲೆಗಳನ್ನೇ ಆಗಿನ ಕಾಲಕ್ಕೆ ಬರಹಕ್ಕೆ ಬಳಸುತ್ತಿದ್ದುದರಿಂದ, ನಮ್ಮ ವಾಙ್ಮಯವೆಲ್ಲವೂ ತಾಳೆಯೋಲೆಗಳಲ್ಲಿ ಅಡಕವಾಗಿದೆ. ಆದರೆ ಆ ತಾಳೆಯೋಲೆಗಳು ಈಗ ದುರ್ಲಭವಾಗಿವೆ. ತಮ್ಮ ವಾಙ್ಮಯವನ್ನು ಸಮೃದ್ಧಿ ಪಡಿಸಬೇಕೆಂದು ಕುತೂಹಲವಳ್ಳನರಾಧ ಪಕ್ಷಕ್ಕೆ ಕನ್ನಡಿಗರು ಮೊದಲು ಆ ಹಳೆಯ ತಾಳೆಯೋಲೆಗಳನ್ನು ಗೆದ್ದಲು ಹುಳುಗಳ ಬಾಯಿಯಿಂದ ಬದುಕಿಸಬೇಕು, ಹಿಂದಿನಕಾಲದ ವಾಙ್ಮಯ ಸಂಪತ್ತೆಲ್ಲವೂ ಸುದೈವದಿಂದ ನಮ್ಮ ಕೈ ಸೇರಿದರೆ, ಅದರ ಆಧಾರದಿಂದ ಈಗಿನವರೆಗೆ ನಡೆದುಬಂದ ಕನ್ನಡ ಭಾಷೆಯ ಇತಿಹಾಸವನ್ನೂ ಅದರ ಬೆಳವಣಿಕೆಯನ್ನೂ