ಅಭಯ
ಅಭಯಧಾಮದ ಮುಖವನ್ನೇ ಕಂಡಿರದ ಗಂಡಸೊಬ್ಬರು ಪ್ರಭಾಳ
ತಂದೆ - ಅಭಯಧಾಮದ ಬೆಳವಣಿಗೆಯ ವೆಚ್ಚಕಾಗಿ ಐದು ಸಾವಿರ ರೂಪಾಯಿಗಳಿಗೆ ಒ೦ದು ಚೆಕ್ ಕಳುಹಿಸಿಕೊಟ್ಟರು.
ಆ ವಿಷಯವನ್ನು ಕಾರ್ಯದರ್ಶಿನಿಯಿಂದ ಕೇಳಿ ತಿಳಿದ ಬಳಿಕ
ಸರಸಮ್ಮ ತುಂಗಮ್ಮನಿಗೆ ಹೇಳಿದರು.
"ನೋಡಿದಾ ತುಂಗ? ಹೀಗಿದೆ ಪ್ರಪಂಚ.”
“ಹೂಂ ದೊಡ್ಡಮ್ಮ.”
"ಈ ಹಣ ನಮಗೆ ಬೇಕೇ ಬೇಕು. ಬರೇ ಸರಕಾರದ ಒಂದಿಷ್ಟು
ದಾನದಿ೦ದಲೇ ಸಂಸ್ಥೆ ನಡೆಸೋದು ಸಾಧ್ಯವೆ.”
"ಆದರೆ ಅವಳು ಪ್ರಭಾ-”
"ಈಗ ಹೇಳ್ತೀನಿ ತುಂಗ. ಹುಡುಗರ ಜತೆ ಓಡಾಡೋದು ಅವಳಿಗೆ
ಆಟವಾಗಿತ್ತ೦ತೆ ಏನೂ ಆಗಬಾರದೆ೦ದು ಮು೦ಜಾಗ್ರತೆ ವಹಿಸಿಕೊ೦ಡಿದ್ಲು. ಆದರೂ ಹೀಗಾಯ್ತು. ಇ೦ಥವನೇ೦ತ ಹೇಳೋದಕ್ಕೂ ಅವಳ ಕೈಲಿ ಆಗ್ಲಿಲ್ವಂತೆ... ಇನ್ನು ಆ ಮಗು ಅನಾಥಾಶ್ರಮದು, ಅದರ ವಾಲಿ ಗೆ ತಂದೆಯೂ ಇಲ್ಲ ತಾಯಿಯೂ ಇಲ್ಲ. ಇನ್ನು ಆ ಪ್ರಭಾನೋ, ಆಕೆಯ ಮನಸ್ಸಿನಲ್ಲಿ ಪಶ್ಚಾತ್ತಾಪದ ಭಾವನೆ ಇದೇಂತ ಯಾವ ಆಧಾರದ ಮೇಲೆ ಹೇಳೋಣ?”
ಆ ಮಾತು ನಿಜವಾಗಿತ್ತು.
ಆ ಪ್ರಭಾ ತನ್ನ ಹಾಗೆ ಮೋಸಹೋಗಿರಲಿಲ್ಲ ಹಾಗಾದರೆ.
"ಶ್ರೀಮಂತರು ಎಲ್ಲ ಹುಡುಗೀರೂ ಹೀಗೆಯೇ ಇರ್ತಾರ ದೊಡ್ಡಮ್ಮ?”
"ಛೆ! ಛೆ! ಹಾಗಲ್ಲ ತುಂಗ, ಎಲ್ಲೋ ಕೆಲವರು ಹೀಗಿರಾರೆ ಅಷ್ಟೆ.
ಇವರು ಬದುಕೋ ರೀತಿಯೇ ಇ೦ಥಾದ್ದು . ಹಿ೦ದೆ ಇಲ್ಲಿ ಸುಲೋಚನಾ೦ತ ಒಬ್ಬಳಿದ್ಲು. ಶ್ರೀಮಂತರ ಹುಡುಗಿಯೇ... ಆದರೆ ಇಲ್ಲಿಗೆ ಬಂದ್ಮೇಲೆ ಹ್ಯಾಗೆ ಬದಲಾದ್ಲೂ೦ತ! ಎಲ್ಲರ ಜತೇಲಿ ಅನ್ಯೋನ್ಯವಾಗಿದ್ದು, ಎಲ್ಲರ ಪ್ರಿತಿಗೂ ಪಾತ್ರಳಾದ್ಲು, ಈಗ ನೋಡು, ಈ ಪ್ರಭಾ ಹೋದಾಗ ನಮ್ಮ ಹುಡುಗೀರಿಗೆ ಏನಾದರೂ ಬೇಸರವಾಯ್ತೆ? ಸುಲೋಚನಾ ಹೋದಾಗ ಹಾಗಲ್ಲ.... ಅವಳೂ