ಯಶೋಧರ ಚರಿತೆ
೭೭
ಉರಗಿಯನೆಯ್ ಪಡಿದೊಡದಂ
ಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂ
ತಿರೆ ಪಿಡಿದುದು ಪರಚಿಂತಾ
ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ೪೬
ಮೀನಾದುದೆಯ್ಯಮೃಗಮು-
ಜ್ಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್
ತಾನಲ್ಲಿ ಮೊಸಳೆಯಾದ
ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ೪೭
ನದಿ ಕಣ್ದೆರೆದಂತೆ ಪೊಳಂ
ಕಿದ ಮೀನ೦ ಮೊಸಳೆ ಪಾಯೆ ನರಪತಿಯ ವಿನೋ-
ದದ ಗುಜ್ಜ ಸಿಕ್ಕೆ ಪಿಡಿದ-
ತ್ತದನಧಿಪತಿ ಜಾಲಗಾರರಿಂ ತೆಗೆಯಿಸಿದಂ೪೮
೪೬. ಹಾವನ್ನೆನೋ ಮುಳ್ಳು ಹಂದಿ ನುಂಗಿತು. ಅದನ್ನು ಮಾತ್ರ ಹುಲಿ ಹಿಡಿಯಿತು.
ಬೆಕ್ಕು ಕೊಕ್ಕರೆಯನ್ನು ಹಿಡಿಯುವುದೂ ಹೀಗೆಯೆ. ಪರರಿಗೆ
ದುಃಖವುಂಟುಮಾಡುವವನನ್ನ ವಿಧಿ ತನ್ನ ಬಳಿಗೆ ಕರೆಯುವುದು ಸಹಜವೇ
ಆಗಿದೆ. ೪೭. ಮುಳ್ಳು ಹಂದಿ ಉಜ್ಜಯಿನಿಯಲ್ಲಿ ಶೋಭಿಸುತ್ತಿದ್ದ ಸಿಂಪಾನದಿಯಲ್ಲಿ
ಮೀನಾಗಿ ಹುಟ್ಟಿತು. ಹಾವಾಗಿದ್ದುದು ಅದೇ ಹೊಳೆಯಲ್ಲಿ ಮೊಸಳೆಯ ಜನ್ಮವನ್ನು
ಪಡೆದು ಬೆಳೆಯುತ್ತ ಇತ್ತು. ೪೮. ಒಂದಾನೊಂದು ದಿನ ನದಿ ಕಣ್ಣು
ಮಿಟುಕಿಸಿತೆಂಬಂತೆ ಆ ಮೀನು ಪಳಕ್ಕನೆ ಮೇಲೆ ಚಿಮ್ಮಿತು. ಅದನ್ನು ಕಂಡು
ಮೊಸಳೆ ಅದರ ಕಡೆಗೆ ನುಗ್ಗಿತು. ಆಗ ಅಲ್ಲಿದ್ದ ಯಶೋಮತಿಯ ವಿದೂಷಕನಾದ
ಕುಳ್ಳನು ಅದಕ್ಕೆ ಸಿಕ್ಕಿಕೊ೦ಡನು. ರಾಜನು ಬಲೆಗಾರರಿಂದ ಆ ಮೊಸಳೆಯನ್ನು