ಮಂಜರ ದೃಷ್ಟಿಯೊಳಗೆ ಚಂದ್ರಮನುದಯ

ವಿಕಿಸೋರ್ಸ್ದಿಂದ



Pages   (key to Page Status)   


ಮಂಜರ ದೃಷ್ಟಿಯೊಳಗೆ ಚಂದ್ರಮನುದಯ ನೋಡಾ. ಚಂದ್ರಮಂಡಲನೊಡೆದು ರವಿ ಮೂಡಲು ಮಂಜರ ಸತ್ತಿತ್ತು; ದೃಷ್ಟಿ ನಷ್ಟವಾಯಿತ್ತು. ಚಿಚ್ಚಂದ್ರ ಸೂರ್ಯರೊಂದಾಗಿ ಚಿದಾತ್ಮ ಲಿಂಗವಾದೆನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.