ಮಲದೊಡನೆ ಕೈದಂಡೆಯನಿಕ್ಕಿದಡೆ, ಮಾನಸಿಕೆ

ವಿಕಿಸೋರ್ಸ್ದಿಂದ



Pages   (key to Page Status)   


ಮಲದೊಡನೆ ಕೈದಂಡೆಯನಿಕ್ಕಿದಡೆ
ಮಾನಸಿಕೆ ಕೆಡದೆ ಮಾಣ್ಬುದೆ? ನಾಯ ಸರಸ ಸೀರೆಯ ಕೇಡು
ಮಾಯಾಸಂಗ ಹರಣದ ಕೇಡು. ಎಲೆ ಮಹಾಮಹೇಶ್ವರ ಶಿವನೇ ನಿನ್ನ ಸಂಗವಲ್ಲದೆ ಈ ದುಸ್ಸಂಗವೆಲ್ಲ ದುರ್ಗತಿಗೆ ಬೀಜ ಕಂಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.