ಮಾತಿನಲ್ಲಿ ಭವಿಯ ಬಿಟ್ಟರೇನೋ?

ವಿಕಿಸೋರ್ಸ್ದಿಂದ



Pages   (key to Page Status)   


ಮಾತಿನಲ್ಲಿ ಭವಿಯ ಬಿಟ್ಟರೇನೋ? ಕನಸಿನಲ್ಲಿ ಮನಸಿನಲ್ಲಿ ಆವರಿಸಿಪ್ಪ ಭವಿ ಭವಿಯೆಂಬ ಸಂದೇಹದ ಕೀಲಕಳೆದು ನಿಸ್ಸಂದೇಹ ನಿರ್ಲೇಪನಾಗಿರಬಲ್ಲರೆ ಶೀಲಸಂಪನ್ನರೆಂಬೆ. ಉಳಿದುದೆಲ್ಲ ಸೂತಕದ ಪಾತಕ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.