ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು

ವಿಕಿಸೋರ್ಸ್ದಿಂದ



Pages   (key to Page Status)   


ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು ವೇದ. ಉಳ್ಳಡೆ
ದಕ್ಷನ ಜನ್ನ ತಾನೆ ಹೇಳದೆ ? ಉಳ್ಳಡೆ ಕ್ರತುವನು ಕಾಯಲಾಗದೆ ? ಉಳ್ಳಡೆ ತಮ್ಮ ತಮ್ಮ ಶಿರಗಳ ಹೋಗಲಾಡಿಕೊಳಲೇಕೆ ? ಈ ಕ್ರತುಗಳಿಗೆ `ಶಿವನೇಕೋ ದೇವ' ಎಂದುದು ಋಗ್ವೇದ. `ಆವೋ ರಾಜಾನಮಧ್ವರಸ್ಯ ರುದ್ರಂ ಹೋತಾರಂ ಸತ್ಯಯಜುಂ ರೋದಸ್ಯೋಃ ಅಗ್ನಿಂ ಪುರಾತನಯಿತ್ನೋರಚಿತ್ತಾತ್ ಹಿರಣ್ಯರೂಪಮವಸೇ ಕೃಣುಧ್ವಂ _ಎಂದುದಾಗಿ ಇಂತೆಂಬ ಶ್ರುತಿಯಿದೆ. ಇದು ಕಾರಣ_ ಕೂಡಲಚೆನ್ನಸಂಗನಲ್ಲದಿಲ್ಲ; ನಿಲ್ಲು
ಮಾಣು.