ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ ಅರಸು
ತ್ರಿಗುಣವೆಂಬ ಪ್ರಧಾನರು
ವಶೀಕರಣವೆಂಬ ಸೇನಬೋವ ಸಂಚಲವೆಂಬ ತೇಜಿ
ಅಷ್ಟಮದವೆಂಬ ಆನೆ
ಈರೈದು (ಮನ್ನೆಯ) ನಾಯಕರು
ಇಪ್ಪತ್ತೈದು ಪ್ರಜೆ
ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ
ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_ ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು
ಅಜಾತನೆಂಬ ಶರಣ ಪ್ರಧಾನಿ ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು
ಅರಸು ಕೂಡಲಚೆನ್ನಸಂಗಯ್ಯನು
ಒಲಿದ ಕಾರಣ.