"ಕಾರ್ಮಿಕ ಹಿತೈಷಿಗಳು-ಅಂತ ಬರೆದಾಯ್ತು."
"ಐದು ಘಂಟಿಗೆ ಬರಲಾ ಹಾಗಾದರೆ?"
"ಆರು ಘಂಟೆಗೆ ಬನ್ನಿ."
ಚೆಲುವಯ್ಯ ಮತ್ತೊಮ್ಮೆ ಬಾಗಿ ನಮಿಸಿ, ನನಗೂ ಒಂದು ನಮ
ಸ್ಕಾರ ಕೊಟ್ಟು ಹೊರಟ.
"ಹ್ಯಾಗಿದಾನೆ ಚೆಲುವಯ್ಯ? ಎಂಥೆಂಥವರ ಸಂಪಾಧ್ಸಿಟ್ಟಿ
ದೀನಿ ನೋಡು!"
ನಗುತ್ತ ಹೇಳಿದೆ:
"ಚೀಪ್ ಅಸೋಸಿಯೆಟ್ ಎಡಿಟರ್ !"
"ಬಲು ಚೀಪ್.... ಆದರೆ ಬಡ್ಡ್ಡೀಮಗ ಚೆನ್ನಾಗಿ ಬರೀತಾನೆ
ಕಣೋ. ಒಂದೊಂದು ಮಾತು ಹ್ಯಾಗಿರತ್ತೆ ಅಂತೀಯಾ?"
ನಿಜವಾಗಿಯೂ ಅವನ ಶೈಲಿ ಶಕ್ತಿಪೂರ್ಣವಾಗಿತ್ತು. ಆ ಕರ
ಪತ್ರದ ಶಿರೋನಾಮೆ ಗುಡುಗುತಿತ್ತು:
"ಮಾಸ್ಕೋ ಗೂಢಚಾರರ ಫಿತೂರಿ!"
ಆ ಮೇಲೆ ವಿವರಣೆ: ದೇಶವನ್ನು ಪರರಿಗೆ ಮಾರಲೆತ್ನಿಸುವ
ಪಂಚಮದಳದವರು-ಮಹಾ ಧೂರ್ತರು. ಮಾಲೀಕರನ್ನು ಪ್ರತಿಭಟಸು ವುದರ ಮೂಲಕ, ಉಂಡ ಮನೆಗೆ ಎರಡೆಣಿಸುವ ಪಾಪಿಗಳು........
ಇನ್ನೊಂದು ಕರಪತ್ರ ಬಂತು.
"ಎಚ್ಚರ! ಕಾಲರಾ ನಿಮ್ಮ ಮನೆಗೆ ಬಂದು ಬಾಗಿಲು
ತಟ್ಟುತ್ತಿದೆ. ಎಚ್ಚರ!"
ಆ ಬಳಿಕ ಕೂಲಿಕಾರ ಮುಖಂಡರಲ್ಲಿ ಮುಖ್ಯರಾದವರನ್ನು
ಕುರಿತು ವೈಯಕ್ತಿಕ ನಿಂದೆ.
ಒಂದು ಕರ ಪತ್ರ ನಾರಾಯಣನನ್ನು ಬಲಿ ತೆಗೆದುಕೊಂಡಿತ್ತು.
ಅದರಲ್ಲಿ ಅವನ ವಿಷಯವಾಗಿಯೂ ಅವನ ಹೆಂಡತಿ ವಿಷಯವಾಗಿಯೂ ಆವಾಚ್ಯ ಮಾತುಗಳನ್ನು ಬರೆದಿದ್ದರು.
ಅದನ್ನು ಶ್ರೀಕಂಠನಿಗೆ ತೊರಿಸುತ್ತಾ ಕೇಳಿದೆ:
"ಇದಕ್ಕೂ ನೀನೆ ಪಾಯಿಂಟ್ಸ್ ಕೊಟ್ಟಿಯೋ?"