ಪುಟ:KELAVU SANNA KATHEGALU.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



12

ನಿರಂಜನ: ಕೆಲವು ಸಣ್ಣ ಕಥೆಗಳು

"ಹಞ್. ಅದನ್ನು ಏನು ಮಾಡ್ಬೇಕು?”
“ಅಧಿಕಾರಿಗಳಿಗೆ ತೋರಿಸಿದರೆ ವ್ಯಾಪಾರಿಗೆ ಶಿಕ್ಷೆ.”
ಸಂಜೆ ಸೋಮ ಮತ್ತೆ ರಾಯರ ಭಂಡಸಾಲೆಗೆ ಹೋದ, ಬಾಟಲಿ
ಯೊಡನೆ.
ಅಲ್ಲಿ ಅಂದರು:
“ಬೆಳಗ್ಗೆ ಕೊಂಡು ಹೋಗಿದ್ದಿ, ಈಗ ಇಲ್ಲ!”
ಇದು ಮನೆಗೆ-ಎಂದರೆ ಅವರು ಕೇಳಬೇಕಲ್ಲ?
ಸ್ವಂತ ಉದ್ಯೋಗದ ಜೀವನದಲ್ಲಿ ಅದೇ ಮೊದಲ ಬಾರಿ ಇನ್ನೊಂದು
ಅಂಗಡಿಗೆ ಸೋಮ ಹೋದ. ಕಾಲು ಬಾಟಲಿಗೆ ೧ ಆಣೆ ೧ ಪೈ ಎಂದರು ಅಲ್ಲಿ!
ಥರಥರನೆ ನಡುಗುತ್ತ, ತಾನೇನು ಚಿಲ್ಲರೆಯವನಲ್ಲ ಎಂಬ ಭಾವನೆಯಿ೦ದ
ಸೋಮ, "ವೋಚ‌ರ್ ಕೊಡಿ" ಎಂದ.
ಸಾಹುಕಾರರು ಪಾದದಿಂದ ಹಿಡಿದು ತಲೆಯ ತನಕ ಸೋಮನನ್ನು
ನೋಡಿ, ವಿಕಟವಾಗಿಯೇ ನಕ್ಕು, "ಎಂಥ ವೌಚರ್?" ಎಂದು ಕೇಳಿದರು.
ಸೋಮನ ಸಿಟ್ಟೆಲ್ಲ ಒಮ್ಮಲೆ ಹೊರಬಂದು ಅವನು ಕೂಗಾಡಿದ:
ಪಾಪ ಕಟ್ಟಿಕೊಳ್ಳಬೇಡಿ! ಬಡವರನ್ನು ಕೊಲ್ಲಬೇಡಿ! ಸರಕಾರ ಶಿಕ್ಷೆ
ಕೊಟ್ಟೀತು! ದೇವರು ಶಾಸ್ತಿ ಮಾಡ್ತಾನೆ!”
ಸೋಮನ ಮಾತು ಮುಗಿಯುತ್ತಿದ್ದಂತೆಯೇ ಅಂಗಡಿಯ ಆಳು ಅವ
ನನ್ನು ಹೊರದಬ್ಬಿದ.
ಸಾಹುಕಾರರು ಧನವೇದಿಕೆಯ ಮೇಲಿಂದ, ವ್ಯಾಪಾರಕ್ಕೆ ಬಂದವರೊಡನೆ
ಹಿಟ್ಲರನ ಸಾಹಸಗಳನ್ನು ಬಣ್ಣಿಸತೊಡಗಿದರು.
...ಆಚೆ ಅಂಗಡಿಯವರಂತೂ ತಮ್ಮ ಆಳುಗಳ ನಗುವಿನ ಹಿಮ್ಮೇಳ
ದೊಂದಿಗೆ ಸೋಮನನ್ನು ಅವಮಾನಿಸಿದರು.
ಅಳುತ್ತಿದ್ದ ಮಗುವನ್ನೆತ್ತಿಕೊಂಡು ಅವನು ಮನೆಗೆ ಬಂದ.

****

ಮರುದಿನ ಅಕ್ಕಸಾಲಿಗ ಹೇಳಿದ: ಇತರ ಅ೦ಗಡಿಗಳ ಅವಸ್ಥೆ ಏನು ಅಂತ
ನೋಡಬಹುದಲ್ಲ?
ಸೋಮ ಹೊರಟ.
ವೌವ್‌ಚರ್ ಗಿವ್ ಚರ್ ಇಲ್ಲವೆಂದರು ಒಂದೆಡೆ.
ಸರಕಾರವೇ ಎಣ್ಣೆ ಕೊಟ್ಟೀತು, ಹೋಗು!-ಎಂದರು ಇನ್ನೊಂದೆಡೆ.
ಹೀಗೆಯೇ ಎಲ್ಲೆಲ್ಲೂ .