ಪುಟ:ಯಶೋಧರ ಚರಿತೆ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಯಶೋಧರ ಚರಿತೆ

ಜೀವದಯೆ ಜೈನಧರ್ಮಂ
ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ
ಭಾವಿತಮೆ ತಪ್ಪಿನುಡಿದಿರ್‌
ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ೧೯


ಆದೊಡೆ ಸಿಟ್ಟಿನ ಕೋಳಿಯ
ನಾದೊಡಮಿಂದೊಂದನಿಕ್ಕವೇಳ್ಪಿದು ಮಿಕ್ಕಂ
ದಾದೇವಿಗೆನ್ನನಿಕ್ಕಿಯು
ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ೨೦


ಎನೆ ತಾಯ ಮೋಹದಿಂದಂ
ಜನಪನೊಂಡಂಬಟ್ಟು ಮನದೊಳಿಂತೆಂದಂ ಭಾ
ವನೆಯಿಂದಮಪ್ಪು ದಾಸ್ರವ
ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೋ೨೧


ತೊಲಗಿಸುವುದಾದರೂ ಹೇಗೆ? ೧೯. ಜೀವದಯೆಯೇ ಜೈನಧರ್ಮ.
ಪ್ರತಿಯೊಂದು ಜೀವಿಗೂ ಹಿತವಾಗಬೇಕೆಂದು ನಂಬುವವರಿಗೆ ಹಿಂಸೆಯ
ಮೋಹವಾದರೂ ಎಣಿಕೆಗೆ ಬಂದೀತೆ? ನಿಮ್ಮ ಮಾತು ಸರಿಯೆನ್ನಿಸಲಾರದಮ್ಮ!
ಕಾಯುವವರೇ ಕಣೆ ಹಿಡಿಯುವುದಾದರೆ ತಡೆಯುವವರಾರಿದ್ದಾರೆ?” ತಾಯಿ
ಮತ್ತೆ ಹೇಳಿದಳು ; ೨೦. ಆದರೆ “ಹಿಟ್ಟಿನ ಕೋಳಿಯನ್ನಾದರೂ ಇಂದು
ಬಲಿಕೊಡಲೇಬೇಕು, ಕಂದ! ಇದನ್ನೂ ನೀನು ಮೀರಿದೆಯೆಂದಾದರೆ, ಆ ದೇವಿಗೆ
ನನ್ನನ್ನೇ ಆಹುತಿಯನ್ನಾಗಿ ಕೊಡುತ್ತೇನೆ. ಇದರಿಂದಲಾದರೂ ಇಂದು ಬಂದ
ಈ ದುರಿತವನ್ನು ಪರಿಹರಿಸದೆ ಇರಲಾರೆ, ಮಗನೆ!” ೨೧. ಇಷ್ಟು ಹೇಳಿದಾಗ
ಯಶೋಧರನಿಗೆ ತಾಯಿಯ ಮಾತನ್ನು ನಿರಾಕರಿಸುವುದಾಗಲಿಲ್ಲ. ಅವನು ಮಾತೆಯ
ಮೇಲಿನ ಮೋಹದಿಂದಾಗಿ ಅವಳ ಮಾತಿಗೆ ಒಪ್ಪಿಗೆಯನ್ನಿತ್ತನು. ಮನಸ್ಸು ಮಾತ್ರ
ವಿಚಾರಪರವಾಯಿತು. ಆಸ್ರವವುಂಟಾಗುವುದು ಮನಸ್ಸಿನ ಎಣಿಕೆಯಿಂದಲೇ.೪೯
ಇನ್ನು ನನಗೆ ಎಂತಹ ಪಾಪ ಎದುರಾಗುವುದೋ! ೨೨. ತಾಯಿ ಹೇಳಿದಂತೆ