೭೦
ಯಶೋಧರ ಚರಿತೆ
ತಲೆಯಿಂ ಕುಕ್ಕೂಕೂ ಎಂ
ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ
ಲ್ಲುಲಿಯೆನೆ ಪಿಟ್ಟಿನ ಕೋಳಿಯ
ತಲೆಯಂ ಪಿಡಿವಂತಿರಟ್ಟೆ ಪಾರಿದುದಿನಿಸಂ೨೫
ಪೊಡೆಯೆ ಕೃಕವಾಕು ನಿನದಂ
ಬಿಡದುಣ್ಮುತಿರಲ್ಕೆ ಕಯ್ಯ ಬಾಳ್ ಬೀಳ್ತಿರೆ ಪೊಯ್
ವಡೆದಂತೆ ಪಂದೆಯಂ ಪಾ-
ವಡರ್ದಂತಾಗಿರೆ ಯಶೋಧರಂ ಬೆರಗಾದಂ೨೬
ಏಕೆ ಕನಸೆಂದು ನುಡಿದೆನಿ-
ದೇಕಂಬಿಕೆ ಬಲಿಯನೊಡ್ಡಿದಳ್ ಕೂಗಿದುದೇ-
ಕೀ ಕೃತಕತಾಮ್ರಚೂಡನಿ-
ದೇಕೆಂದಾರಿವರಯ್ಯ ವಿಧಿವಿಳಸನಮಂ೨೭
೨೫. ತಕ್ಷಣದಲ್ಲಿಯೇ ಆ ಹಿಟ್ಟಿನ ಕೋಳಿಯೂ ಕೊಕ್ಕೋಕೊ ಎಂದು ಕೂಗಿತು.
ಮುಂದೆ ಬರಲಿರುವ ಕಷ್ಟಗಳನ್ನೇ ಹೀಗೆ ಕೂಗಿ ಕರೆಯುವುದೋ ಎಂಬಂತಿತ್ತು
ಆ ಆಕ್ರಂದನ. ತುಂಡಾದ ತಲೆಯನ್ನು ಬಿಡಲಾರೆನೆನ್ನುವಂತೆ ಆ ಕೋಳಿಯ
ಶರೀರವು ಸ್ವಲ್ಪ ದೂರಕ್ಕೆ ಹಾರಿತು. ೨೬. ಖಡ್ಗ ಪ್ರಹಾರವಾದ ಕೂಡಲೇ
ಕೋಳಿಯ ಕೂಗು ಕೇಳಿಸಿದುದೇ ತಡ, ರಾಜನ ಕೈಯ ಕತ್ತಿ ಕೆಳಕ್ಕುರುಳಿತು.
ತನ್ನನ್ನ ಯಾರೋ ಕಡಿದಂತೆಯೂ, ಹೇಡಿಯ ಮೇಲೆ ಹಾವು ಹರಿದಂತೆಯೂ
ಅವನು ಬೆರಗಾದನು. ೨೭. “ಅಯ್ಯೋ! ಕನಸೆಂದು ನಾನೇಕೆ ಹೇಳಿದೆ? ನನ್ನ
ತಾಯಿಯಾದರೂ ಆ ರೀತಿ ಬಲಿಕೊಡಿಸಿದುದೇಕೆ? ಈ ಕೃತಕವಾದ ಕೋಳಿ
ಹೀಗೇಕೆ ಕೂಗಿಕೊಂಡಿತು? ಹೀಗಾದುದೇಕೆ೦ಬ ವಿಧಿ ವಿಲಾಸವನ್ನು ಯಾರು