ಪುಟ:ಯಶೋಧರ ಚರಿತೆ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೭೩

ಆ ಪಕ್ವಾನ್ನಮೆ ಮೃತಿಗು-
ದ್ವೀಪನಪಿಂಡದವೊಲಾಗೆ ಅಘದಿಂ ಬೀಜಾ-
ವಾಪಮೆನೆ ಜನ್ಮಲತೆಗೆ ಕ-
ಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ೩೪


ಅಂತೊಗೆದು ಮೊಟ್ಟೆಯೊಡೆದ-
ಲ್ಲಿಂ ತೊಲಗದು ತುಪ್ಪುಳಿಡದು ಕಾಲ್ಬಲಿಯದು ಕ-
ಣ್ಣಂ ತೆರೆಯದೆಂಬ ಪದಕೆ ಕೃ-
ತಾಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ೩೫


ಬೇಡಂ ಹಿಳುಕೊತ್ತಿನ ತಾಯ್‌
ಓಡಲ್‌ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ
ಬೇಡಿತಿಗೆ ಸಲಹಲಿತ್ತೊಡೆ
ಗೊಡೊಳದು ಬಳೆದು ತಳೆದುದಂಗಚ್ಛವಿಯಂ೩೬


೩೪. ಯಶೋಧರನಿಗೆ ಅಲ್ಲಿ ಉಂಡ ಊಟವೇ ಮುರಣಕ್ಕೆ
ಉದ್ದೀಪನಪಿಂಡದಂತಾಯಿತು; ಮಾತ್ರವಲ್ಲ ಜನ್ಮಲತೆಗೆ ಅವನೆಸಗಿದ ಪಾಪವೇ
ಬೀಜವಾಗಿ ಪರಿಣಮಿಸಿತು. ಅವನು ಅಲ್ಲಿ ಸತ್ತು ವಿಂಧ್ಯದಲ್ಲಿ ಒಂದು ಹೆಣ್ಣು
ನವಿಲಿನ ಹೊಟ್ಟೆಯಲ್ಲಿ ಹುಟ್ಟಿಬಂದನು. ೩೫. ಹೀಗೆ ಹುಟ್ಟಿ ಮೊಟ್ಟೆಯೊಡೆದು
ಮರಿಯಾಯಿತು ಆ ಜೀವ. ಅಲ್ಲಿಂದ ಮುಂದೆ ಹರಿಯುವಷ್ಟೂ ಅದಕ್ಕೆ ಶಕ್ತಿ
ಯುಂಟಾಗಿರಲಿಲ್ಲ; ಎಳೆಯ ಗರಿಗಳೂ ಮೂಡಿರಲಿಲ್ಲ; ಕಾಲುಗಳಿಗೆ ಬಲವೂ
ಬಂದಿರಲಿಲ್ಲ; ಮರಿ ಸರಿಯಾಗಿ ಕಣ್ಣು ತೆರೆಯಲೂ ಇಲ್ಲ. ಈ ಅವಸ್ಥೆಯಲ್ಲಿದ್ದಾಗ
ಯಮನ ದೂತನಂತೆ ಬೇಡನೊಬ್ಬನು ಬೇಟೆಯಾಡುತ್ತ ಆ ಕಾಡನ್ನು ಮುತ್ತಿದನು.
೩೬. ಬಂದವನೇ ಆ ಬೇಟೆಗಾರನು ಮರಿಯೊಡನಿದ್ದ ತಾಯಿಯನ್ನು ಓಡಿಸಿಬಿಟ್ಟನು;
ಮರಿಯನ್ನು ಮಾತ್ರ ಬಿಡಲಿಲ್ಲ. ಅದನ್ನು ಹಿಡಿದು ತಂದು ತನ್ನ ಹೆಂಡತಿಯ
ಕೈಗಿತ್ತು ಸಾಕುವ೦ತೆ ಹೇಳಿದನು. ಅವಳು ಅದನ್ನು ಗೂಡಿನೊಳಗಿಟ್ಟು
ಪೋಷಿಸತೊಡಗಿದಳು. ಕ್ರಮೇಣ ಬೆಳೆದು ಅದಕ್ಕೆ ಸಹಜವಾದ ದೇಹಶೋಭೆ