ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hs4 ಶ್ರೀಮದಾನಂದ ರಥಯಣ ನ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು, ವಸ್ತ್ರ-ಭೂಷಣಗಳೇ ಮೊದಲಾದ ದಿವ್ಯ ವಸ್ತುಗಳನ್ನು ಧರಿಸಿ, ಪ್ರಯಾಣಕ್ಕೆ ಸಿದ್ದನಾದನು ಸೀತಾದೇವಿಯೂ ಪೂಜಾಸಾಮಗ್ರಿಗಳನ್ನು ಸಿದ್ಧ ಪಡಿಸಿಕೊಂಡು ಶ್ರೀ ರಾಮನೊಡನೆ ಹೊರಡಲು ಸಿ ದಳಾದಳು. ಶ್ರೀ ರಾಮನು ಗುರುಗಳಾದ ವಸಿಷ್ಠರ ಅಪ್ಪಣೆಯಂತೆ ವಿಶ್ವರ ನ ಪೂಜೆಯೇ ಮೊದಲಾದ ಸಮಸ್ತ ಮಂಗಳಕಾರ್ಯಗಳನ್ನೂ ನೆರವೇರಿಸಿ, ಪಂ ವಾರ ಸಮೇತನಾಗಿ ಹೊರಟನು. ಮತ್ತು ಅಗ್ನಿಹೋತ್ರವನ್ನೂ ಜೊತೆಯಲ್ಲೇ ತರುವಂತ ಲಕ್ಷಣನಿಗೆ ಆಜ್ಞಾಪಿಸಿದನು. ಬಳಿಕ ಕೌಸಿಯೇ ಮೊದಲಾದ ಸ ಮಸ್ತ ರಾಜಸ್ತ್ರೀಯರೂ ದಿವ್ಯ ವನ್ನಾಭರಣಗಳಿಂದ ಭೂಷಿತರಾಗಿ ಪುಷ್ಪಕವ ನೇರಿದರು. ಶ್ರೀ ರಾಮನೂ ಸೀತಾಸಮೇತನಾಗಿ ಪುಷ್ಪಕಾರೋಹಣ ಮಾ ಡಲು ರಾಜಗೃಹದಿಂದ ಹೊರಕ್ಕೆ ಬಂದನು. ಆ ಕಾಲದಲ್ಲಿ ದೇವದುಂದುಭಿಗಳು ಮೊಳಗಿದವು ವಾದ್ಯಗಳ ಶಬ್ದಗಳಿಂದ ಜನಗಳ ಕಿವಿಗಳು ಕೇಳದಂತಾದವ. ಶ್ರೀ ರಾಮನು ಪುಷ್ಟಕದ ಬಳಿಗೆ ಬಂದೊಡನೆ ಹೇ ಪ್ರಿಯೆ ಸೀತೆ, ನೀನು ಯಾವ ವಾಹನದ ಮೇಲೆ ಕುಳಿತುಕೊಳ್ಳುವೆ?” ಎಂದು ಕೇಳಿದನು. ಆಗ ಜಾನಕಿಯು ಗಜಾರೋಹಣ ಮಾಡಬೇಕೆಂಬ ತನ್ನ ಇಚ್ಛೆಯನ್ನು ಶ್ರೀ ರಾಮನಿಗೆ ಸೂಚಿಸಿದಳು ಆಗಲೆ ಆನೆಯು ಸಿದ್ಧವಾಗಿ ನಿಂತಿತ್ತು. ಸೀತೆಯು ಗುರುಹಿರಿಯರಿಗೆರಗಿ, ಶ್ರೀ ರಾಮನ ಅಪ್ಪಣೆಯನ್ನು ಪಡೆದು ಸಖಿಯರೊಡನೆ ಆ ಗಜವನ್ನು ಹತ್ತಿದಳು ಆಗ ಪರನಿವಾಸಿಗಳಾದ ಕನ್ಯಾ ಜನರು ಸೀತೆಯ ಮೇಲೆ ಇಷ್ಟವರ್ಷಣ ಮಾಡಿದರು. ಬಳಿಕ ಶ್ರೀ ರಾಮನು ಸುಮಂತ್ರನಿಗೆ ಅಯೋಧ್ಯೆಯ ಯೋಗಕ್ಷೇಮವನ್ನು ವಿಚಾ ರಿಸುತ್ತಾ ನಾನು ಬರುವ ವರೆಗೂ ಪ್ರಜೆಗಳಿಗೆ ಯಾವ ತೊಂದರೆಯೂ ಬರದಂತ ಕಾಪಾಡಿಕೊಂಡಿರೆಂದು ಆಜ್ಞಾಪಿಸಿ, ಪ್ರಯಾಣ ಕಾಲದ ವ್ಯವಸ್ಥೆಯನ್ನು ಯ ಇಂಯೋಗ್ಯ ಮರ್ಯಾದೆಗಳಿಂದ ನಡೆಸುವಂತೆ ಲಕ್ಷ್ಮಣನಿಗೆ ಸೂಚಿಸಿದನು. ಸೇನಾಜನವು ಲಕ್ಷಣನ ಆಜ್ಞೆಯಂತೆ ಸುವ್ಯವಸ್ಥೆಯಿಂದ ಪ್ರಯಾಣವೂಡ ಲಾರಂಭಿಸಿತು. ಬಳಿಕ ಸುಮಂತ್ರನಿಗೆ ಮತ್ತೂ ಸರರಕ್ಷಣೆಯ ವಿಷಯವಾಗಿ ಎ ಜ್ಞರ ಹೇಳಿ, ಶ್ರೀರಾಮನು ಲಕ್ಷ್ಮಣನ ಹಸ್ತವನ್ನು ಹಿಡಿದುಕೊಂಡು ಸಂತೋಷ ದಿಂದ ವಾಹನದ ಕಡೆಗೆ ಬಂದನು. ಆ ಗಜವನ್ನು ಪ್ರದಕ್ಷಣೆಗೂಡಿ ನಮಸ್ಕರಿಸಿ, ರಾಮ-ಲಕ್ಷ್ಮಣರು ಆರೋಹಣ ದೂಡಿದರು. ಆಗ ಪುಷ್ಪವೃಷ್ಟಿಯಾಯಿತು. ಬಂದಿಗಳು ಸ್ತುತಿಸಿದರು. ಪ್ರಜೆಗಳು ಜಯಜಯಕಾರ ಮಾಡಿದರು. ಸೇವಕ ರು ಶ್ರೀರಾಮನ ಸೇವೆಯಲ್ಲಿ ಸಿದ್ಧರಾದರು. ಈ ರೀತಿ ಸುವ್ಯವಸ್ಥಿತವಾದ ಸಂಗ