ಪುಟ:Vimoochane.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ವಿಮೋಚನೆ

ಮರುದಿನ ಸತ್ಯಾಗ್ರಹಿಗಳನ್ನು ಸೆರೆಮನೆಗೆ ಒಯ್ಬರು. ನಮ್ಮನ್ನು
ಬಿಟ್ಟುಬಿಟ್ಟರು. ಪೋಲೀಸ್ ಅಧಿಕಾರಿಯ ದೃಷ್ಟಿಯಲ್ಲಿ ನಾವಿಬ್ಬರು
ಸಂಭಾವಿತರ ಹಾಗೆ ತೋರಿದೆವು. ಈ ಚಳವಳಿಗೂ ನಮಗೂ
ಸಂಬಂಧವಿಲ್ಲವೆಂದು ಇಂಗ್ಲಿಷಿನಲ್ಲಿ ನಾನು ವಿವರಿಸಿದ ಮೇಲೆ, ನಮ್ಮ
ಸ್ವಾತಂತ್ರ್ಯ ನಮಗೆ ದೊರೆಯಿತು.

ಕೊಠಡಿಗೆ ಬಂದ ಮೇಲೂ ಅಮೀರ, ಮೇಲಿನ ಕೆಳಗಿನ ಮಹ
ಡಿಯವರು ಗಾಬರಿಯಾಗುವ ಹಾಗೆ ಸಂತೋಷದಿಂದ ಕೂಗಾಡಿದ.

" ನಾವು ಲಾಕಪ್ಪಿನಲ್ಲಿ ಇದ್ದೆವು " ಎಂದು ನನ್ನ ಅತ್ತಿಗೆಗೆ
ಅವನು ಹೇಳಿದಾಗ, ಆಕೆ ಗಾಬರಿಯಾಗಿ ಅವನನ್ನು ಮೇಲಿನಿಂದ
ಕೆಳಗಿನವರೆಗೆ ಸೂಕ್ಷ್ಮವಾಗಿ ಪರೀಕ್ಷಿಸಿದಳು.

ಆದರೆ ಮುಂದೆ ಅವನು ವಿವರಿಸಿದ ಕತೆ ಕೇಳುತ್ತಾ ಅವಳೂ
ಬಿದ್ದು ಬಿದ್ದು ನಕ್ಕಳು. ಅದೊಳ್ಳೆಯ ತಮಾಷೆಯಾಗಿತ್ತು. ಜೇಬು
ಗಳ್ಳರಾದ ನಾವು, ದೇಶಪ್ರೇಮಿಗಳಾಗಿದ್ದೆವು. ದೇಶಪ್ರೇಮೀ ಜೇಬು
ಗಳ್ಳರಾಗಿದ್ದೆವು.

ಒಬ್ಬನೇ ಇದ್ದಾಗ ಮಾತ್ರ ಏನೇನೊ ವಿಚಾರಗಳು ನನ್ನನ್ನು
ಬಾಧಿಸುತ್ತಿದ್ದವು. ಪತ್ರಿಕೆ ಕೊಂಡುಕೊಂಡು ಓದುತ್ತಿದ್ದೆ. ದಿನ
ನಿತ್ಯದ ಗೋಳಿನ ಜೀವನಕ್ಕಿಂತ ಸ್ವಲ್ಪ ಭಿನ್ನವಾದುದು ಏನೋ
ನಡೆಯುತ್ತಿದ್ದಂತೆ ಭಾಸವಾಗುತ್ತಿತ್ತು. ವಾತಾವರಣದಲ್ಲಿ ಹೊಸದಾದು
ದ್ದೇನೊ ಸಂಚಾರ ಮಾಡುತ್ತಿತ್ತು. ನಮ್ಮನ್ನು ಆಳುತ್ತಿದ್ದವರು
ಬ್ರಿಟಿಷರು ನಿಜ. ಅವರು ಪರದೇಶೀಯರು. ನಮ್ಮನ್ನು ನಾಗರಿಕರಾಗಿ
ಮಾಡಲು ಅವರು ಬಂದಿರುವರೆಂಬುದು ಬರಿಯ ಬುರುಡೆ. ಅವರು
ಈ ದೇಶವನ್ನು ಬಿಟ್ಟು ಹೋಗಬೇಕು, ಎನ್ನುವುದರಲ್ಲಿ ಅರ್ಥವಿತ್ತು.

ಹಾಗೇಂದು ನಾನು ಅಮೀರ್ ಗೆ ವಿವರಿಸಿ ಹೇಳುತ್ತಿದ್ದೆ. ಆತನಿಗೆ
ಆ ವಿಷಯ ಸ್ಪಷ್ಟವಾಗುತ್ತಿತ್ತು. ಆದರೆ ಸತ್ಯಾಗ್ರಹಿಗಳ ಹೆಸರೆತ್ತಿದಾಗ
ಮಾತ್ರ ಅವನು ನಗುತ್ತಿದ್ದ.

" ನಿನಗೆ ಹುಚ್ಚು ಶೇಖರ್. ಬಡಕಲು ನಾಯಿ ಬೌ ಎಂದರೆ.