ಪುಟ:ಭವತೀ ಕಾತ್ಯಾಯನೀ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

_೬_

ವಿಚಾರಿಸಿ ನೋಡಿದರೆ ಈ ಮನಕ್ಕೆ ಸೂರ್ಯಪ್ರಕಾಶವುಕೂಡಹತ್ತುವದಿಲ್ಲ. ಯಾಕಂದರೆ, ಸೂರ್ಯಪ್ರಕಾಶಕ್ಕೆ ನಿಲುಕದ ಪ್ರದೇಶವನ್ನೂ ಮನವು ವ್ಯಾಪಿಸುವದು. ಸರ್ವ ಜ ರಾದ ನಮ್ಮ ಪ್ರಾಚೀನಋಷಿಗಳ ಯೋಗಸಿದ್ಧಮನಸ್ಸೇ ಇದಕ್ಕೆ ಉದಾಹರಣವೆಂದು ಹೇಳಬಹುದು. ಮನುಷ್ಯನು ಯೋಗೂಸ್ತ್ರವನ್ನು ಚನ್ನಾಗಿ ಅಭ್ಯಾಸ ಮಾಡಿದಕೂಡಲೆ ಯೋಗಜಜ್ಞಾನವೆಂಬದೊಂದು ಜಾ ನವು ಅವನಲ್ಲಿ ಹುಟ್ಟುತ್ತದೆ. ಅದು ವ್ಯವಹಾರ ಜ್ಞಾನಕ್ಕೂ, ಶಾಸ್ತ್ರಜ್ಞಾನಕ್ಕೂ ಭಿನ್ನವಾಗಿರುತ್ತದೆ. ವ್ಯವಹಾರಜ್ಞಾನ ಶಾಸ್ತ್ರಜ್ಞಾನ ಗಳಿಂದ ಪ್ರಾಪ್ತವಾಗದ್ದು, ಈ ಯೋಗಜಜ್ಞಾನದಿಂದ ಪ್ರಾಪ್ತವಾಗುತ್ತದೆ. ಉದಾಹ ರಣಾರ್ಥ ಸೌಭರಿಯೆಂಬಋಷಿಯು ಅಷಾ »ಂಗಯೋಗದಲ್ಲಿ ಪಾರಂಗತನಾಗಿದ್ದದ್ದು , ಪ್ರಸಿ ದ್ದವಾಗಿರುವದು. ಆತನು ತನ್ನ ಆ ಯೋಗಜಜಾ ನದ ಬಲದಿಂದ ವಿಚಾರಿಸಿನೋಡಲು, ಒಂದುಸಾವಿರ ಜನ್ಮಗಳು ಅತಿಕ್ರಮಿಸಿ ಹೋದಮೇಲೆ ತನಗೆ ಮುಕ್ತಿಯಾಗುವದೆಂಬ ಸಂಗತಿಯು ತಿಳಿದುಬಂದಿತು. ಆಗ ಅವನು ಇಷ್ಟೊಂದುಜನ್ಮಗಳನ್ನು ಹೇಗೆ ಕ್ರಮಿ ಸಲಿ, ಜನ್ಮವನ್ನು ತೆಗೆದುಕೊಂಡಮೇಲೆ ಸಹಜವಾಗಿಯೇ ದೇಹಬರುವದು, ದೇಹವನ್ನು ಧರಿಸಿದಮೇಲೆ ಪುಣ್ಯ , ಪಾಪಗಳ ಮಿಶ್ರಣದಿಂದ ಸುಖ, ದುಃಖಗಳೆರಡೂ ಸಂಭವಿಸು ವವು . ಸುಖವನ್ನನುಭವಿಸಬಹುದು ; ಆದರೆ ದುಃಖವನ್ನನುಭವಿಸುವದು ಬಹಳಕಷ್ಟ, ಎಂದು ಆಲೋಚಿಸಿ , ಮುನಿಯು ತನ್ನಯೋಗಾಭ್ಯಾಸದ ಪ್ರಭಾವದಿಂದ ಒಂದುಸಾವಿರ ಸೌಭರಿಖುಷಿಯ ದೇಹಗಳನ್ನು ತೆಗೆದುಕೊಂಡನು. ಹಲವು ವರ್ಷಗಳಮೇಲೆ ಕ್ರಮ ದಿಂದಾಗಲಿ, ಒಂದೇಕಾಲದಲ್ಲಾಗಲಿ ಆ ದೇಹಗಳೆಲ್ಲ ಬಿದ್ದುಹೋದಕೂಡಲೆ ಮುಕ್ತಿಯನ್ನು ಹೊಂದಿದನು . ಆಗ ಆ ಸಮಯದಲ್ಲಿದ್ದ ಮಹಾನುಭಾವರಾದ ಋಷಿಗಳೆಲ್ಲ ಕೂಡಿ ಆತ ನಿಗೆ ಯೋಗವ್ಯಾಘ್ರಾನೆಂಬ ಹೆಸರುಕೊಟ್ಟರು.

ಹೀಗೆ ಮನಸ್ಸು ವೇಗಶಾಲಿಯಾಗಿರುವದಲ್ಲದೆ , ಅದು ಅತ್ಯಂತ ಉದ್ಯೋಗತತ್ಪರ

ವಾಗಿರುವದು . ಈ ಅಭಿಪ್ರಾಯವನ್ನು “ನಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಯತ್ಯಕ ರ್ಮಕೃತ್” "ಅಂದರೆ "ಮನುಷ್ಯನು ಒಂದುಕ್ಷಣವಾದರೂ ಸುಮ್ಮನಿರದೆ ಕೆಲಸಮಾಡುತ್ತಿ ರುವನೆಂ"ದು ಭಗವದ್ಗೀತೆಯು ಹೇಳುತ್ತದೆ. ಇಲ್ಲಿ ಕೆಲಸಮಾಡತಕ್ಕದ್ದೆಂದರೆ ಮನವೇ. ಆತ್ಮನಲ್ಲ. ಒಂದು ಬ್ರಾಹ್ಮಣಸಮಾರಾಧನದಲ್ಲಿ ಅಡಿಗೆಮುಂತಾದ ಕೆಲಸಗಳನ್ನು ಮಾಡತಕ್ಕವರು ಬೇರೆಯಿದ್ದು, ಯಜಮಾನನು ನೋಡುತ್ತ ಸುಮ್ಮನೆಇರುತ್ತಾನೆ; ಆದರೆ ಆ ಪ್ರಸವುಉತ್ತಮರೀತಿಯಾಗಿ ಜರುಗಿದ ಕೀರ್ತಿಯೂ , ಕೆಟ್ಟರೆ ಅಪಕೀರ್ತಿಯೂ ಏನೂ ಕೆಲಸಮಾಡದಿದ್ದ ಯಜಮಾನನಿಗೆ ಬರುತ್ತವೆ. ಯಾಕಂದರೆ ಆ ಯಜಮಾನನು ಆಕೆಲಸವು ತನ್ನದೆಂದು ಭಾವಿಸಿರುತ್ತಾನೆ. ಆದ್ದರಿಂದ ಅದರಿಂದುಂಟಾಗುವ ಕೀರ್ತಿಗೂ, ಅಪಕೀರ್ತಿಗೂ ಅವನು ಪಾತ್ರನಾಗುತ್ತಾನೆ. ಈ ದೃಷ್ಯಾಂತದ ಮೇಲಿಂದ ಮನ ಮುಂತಾದ ಪರಿವಾರವುಮಾಡಿದ ಕೆಲಸದಫಲವು ಆತ್ಮ ನಿಗೆ ಆಗುತ್ತದೆ. ಮಾಡತಕ್ಕದ್ದು ಪರಿವಾರವೇ. ಫಲವು ಯಜಮಾನನಿಗೆ. ಆದ್ದರಿಂದ ಮೇಲಿನ ಭಗವದ್ಗೀತೆಯವಾಕ್ಯವು ಫಲಾಭಿಪ್ರಾಯದಿಂದ ಜೀವಾತ್ಮವನ್ನುದ್ದೇಶಿಸಿದರೂ ಅದಕ್ಕೆ ಮನವೇಗೋಚರವಾದ್ದೆಂದು