ಪುಟ:ಭವತೀ ಕಾತ್ಯಾಯನೀ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



--೨೨--

ಸಂಕಲ್ಪದಲ್ಲಿ ವಿಚಿತ್ರವಾದ ಶಕ್ತಿಯಿರುತ್ತದೆಂಬದು ಸಹಜವಾಗಿ ನಮಗೇ ತಿಳಿ, ಯುವಂತಿದೆ. ಉದಾಹರಣ, ಏಕಾದಶೀತಿಥಿಯಲ್ಲಿ ಇಡೀದಿವಸ ಬಾಯೊಳಗೆ ನೀರು ಹಾಕಲಿಕ್ಕಿಲ್ಲೆಂದು ಒಮ್ಮೆ ನಿಶ್ಚಯಿಸಿದರೆ,ಸಾಕು. ಅಂದಿನ ದಿವಸ ಆಹಾರದಮೆಲೆ ಅಫೇ ಕ್ಷೆಯೇ ಆಗುವದಿಲ್ಲ. ಇದು ಸರ್ವಾನುಭವಸಿದ್ಧವಾದದ್ದೇ ಇರುತ್ತದೆ. ಈ ವಿಷಯ ವಾಗಿ ಭಗವದ್ಗೀತೆಯಲ್ಲಿ "ಚಂಚಲುಹಿ ಮನಃ" ಎಂಬ ಶ್ಲೋಕದಿಂದ ಅರ್ಜುನನು ಭಗ ವಂತನಿಗೆ "ಶ್ರೀಕೃಷ್ಣಾ, ಮನಸ್ಸು ಚಂಚಲವಾಗಿ ಬಲಾಢ್ಯವಾಗಿರುವದರಿಂದ ಇದನ್ನು ನಿಗ್ರಹಿಸುವದೂ, ಗಾಳಿಯಮಟ್ಟೀಕಟ್ಟುವದೂ ಒಂದೇಇರುವವೆಂ"ದು ಪ್ರಶ್ನೆಮಾಡಲು, ಶ್ರೀಕೃಷ್ಣ ನು ಅರ್ಜುನನಿಗೆ--"ಅಭ್ಯಾಸೇನಚ ಕೌಂತೇಯ" ಎಂಬ ಶ್ಲೋಕದಿಂದ ಎಲೈ ಕೌಂತೇಯನೇ, ಇದಕ್ಕೆ ಇಷ್ಟೊಂದು ಯಾಕೆ ಯೋಚನೆ? ಮನಸ್ಸಿಗೆ ಅಭ್ಯಾಸ, ಮತ್ತು ವೈರಾಗ್ಯಗಳನ್ನು ಯೋಜಿಸಿದರೆ ಸಾಕು. ತಾನಾಗಿಯೇ ಆ ಮನಸ್ಸಿನ ನಿಗ್ರಹವಾಗು ವದೆಂದು ಹೇಳಿರುವನು. ಸಂಕಲ್ಪಾಭ್ಯಾಸಶಬ್ದಗಳೂ, ಯೋಗ-ವೈರಾಗ್ಯಶಬ್ದಗಳೂ ಒಂದೇ ಅರ್ಥದವಿರುವವೆಂದು ತಿಳಿಯಬೇಕು. ಹಿಂದಕ್ಕೆ ದುರ್ಮರಣವನ್ನು ಹೊಂದಿದ ತನ್ನ ಪಿತಾಮಹರಾದ ಅರವತ್ತುಸಾವಿರ ಸಗರರನ್ನುದ್ಧರಿಸುವದಕ್ಕೆ ಅವರ ವಂಶದ ಭಗೀರಥರಾಜನು ಮನಸ್ಸಿಗೆ ಸಂಕಲ್ಪಶಕ್ತಿಯನ್ನುಯೋಜಿಸಿ ಕಾರ್ಯದಲ್ಲಿ ತೊಡಗಿದಾಗ ಅವರನ್ನುದ್ಧರಿಸಿ ತಾನೂ ವಾರಾದನು. ಆತನ ಕಾರ್ಯಪ್ರಭಾವದಿಂದ ನಮಗೂಕೂಡ ಗಂಗಾಸ್ನಾನದ ಲಾಭವಾಗಹತ್ತಿದೆ. ಈ ಭಗೀರಥನ ಹಿಂದಿನವರ ಮನಸ್ಸಿನಲ್ಲಿ ಅವ ರನ್ನು ಉದ್ಧರಿಸಬೇಕೆಂಬ ಕಲ್ಪನೆಯಿದ್ದರೂ, ಅದಕ್ಕೆ ಸಂಕಲ್ಪವು ಕೂಡದ್ದರಿಂದ ಅವ ರಿಂದ ಕಾರ್ಯವಾಗಲಿಲ್ಲ. ಮನುಷ್ಯನ ಮನಸ್ಸಿನಲ್ಲಿ ಎಷ್ಟೋ ಕಲ್ಪನೆಗಳು ಉದಯಿ ಸುತ್ತವೆ; ಆದರೆ ಅವೆಲ್ಲ ಕಾರ್ಯಸಾಧಕವಾಗುವದಿಲ್ಲ. ಇನ್ನು ಇವುಗಳಲ್ಲಿ, ಯಾವ ಕಲ್ಪನೆಗೆ ಸಂಕಲ್ಪವು ಕೂಡಿಕೊಳ್ಳುವದೋ? ಅದೇ ಕಲ್ಪನೆಯು ಕಾರ್ಯವನ್ನು ಸಾಧಿ ಸಿಕೊಡುತ್ತವೆ. ಈಮಾತು ಸರ್ವರಿಗೂ ಗೊತ್ತಿರುತ್ತದೆ. ದೇವರು, ಯಾವಾಗಲೋ ಏನೋ? ಹಿಂದಕ್ಕೆ ಒಂದುಸಾರೆ ಸೂರ್ಯ-ಚಂದ್ರರಿಗೆ, ಗ್ರಹ-ನಕ್ಷತ್ರಗಳಿಗೆ ಅಪ್ಪಣೆ ಯನ್ನುಮಾಡಿ, ಗತಿಯನ್ನು ಕೊಟ್ಟಿರುವನು. ಆಗಿನಿಂದ ಅವರೆಲ್ಲ ಕಾಲಕಾಲಕ್ಕೆ ತಪ್ಪದೆ ತಮ್ಮ ತಮ್ಮ ಕೆಲಸವನ್ನು ಮಾಡುತ್ತಿರುವದರಿಂದ, ನಮಗೆಲ್ಲ ಬೇಗು ಬೆಳಗುಗಳೂ, ಮಳೆ-ಬೆಳೆಗಳೂ ಆಗುತ್ತವೆ. ಆ ಪರಮೇಶ್ವರನ ಅಪ್ಪಣೆಗನುಸರಿಸಿ ತಪ್ಪದೆ ಕೆಲಸಮಾ ಡುವಮಾತ್ರದಿಂದಲೇ ಆ ಸೂರ್ಯ,ಚಂದ್ರ ಮುಂತಾದವರು ನಮಗೆಲ್ಲ ವಂದ್ಯರಾಗಿರು ವರು. ನಾವಾದರೂ ಅವರಂತೆ ಪರಮೇಶ್ವರನ ಆಜ್ಞೆಯೆನಿಸಿಕೊಳ್ಳುವ ಶ್ರುತಿ-ಸ್ಕೃತಿ ಮುಂತಾದ್ದರಲ್ಲಿ ಹೇಳಿದಕರ್ಮವನ್ನು ಮಾಡಹತ್ತಿದರೆ, ಜಗತ್ತಿನಲ್ಲಿ ಪೂಜ್ಯರಾಗುವದು ಆಶ್ಚರ್ಯವೇನು? ಈಗಿನಕಾಲದಲ್ಲಿಯೂ, ಶಿವಾಜಿ ಮುಂತಾದವರು ರಾಷ್ಟ್ರಕಾರ್ಯದಲ್ಲಿ ತೊಡಗಿಕೊಂಡು ತಮ್ಮ ಹಿತಾಹಿತಗಳನ್ನೂ ಕೂಡ ನೋಡದೆ ಕಾರ್ಯಮಾಡಿದ್ದರಿಂದ ಇತಿಹಾಸಪ ಸಿದ್ಧರಾಗಿರುವರು. ಕರ್ತವ್ಯಶಾಲಿಯಾದ ಮನುಷ್ಯನು ಸಾಮಾನ್ಯನಲ್ಲ. ಮನಸ್ಮೃತಿಯಲ್ಲಿ "ಕರ್ತೃಷುಬ್ರಹ್ಮನೇದಿನ:" ಎಂಬ ವಾಕ್ಯದಲ್ಲಿ ಕರ್ತವ್ಯಶಾಲಿಯ