ಪುಟ:ಭವತೀ ಕಾತ್ಯಾಯನೀ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

 --೨೧--

ಗಿರುವ ವಿಷಯಗಳಮೇಲೆ ಧಾವಿಸುವದು. ಈ ವಿಷಯಗಳು ಆಕರ್ಷಕವಾಗಿರುವದರಿಂದ ಮನಸ್ಸನ್ನು ಕೂಡಲೆ ಕಟ್ಟಿಬಿಡುತ್ತವೆ. ಆಗ ಮನಸ್ಸು ವಿಷಯಪರವಶವಾಗಿ ಮನುಷ್ಯ ನನ್ನು ಸಂಸಾರದಲ್ಲಿ ಕೆಡವುತ್ತದೆ. ತಾನೂ ಈ ಜಡವಿಷಯಗಳ ಸಂಸರ್ಗದಿಂದ ಮಲಿನ ವಾಗಿ ಹೋಗುತ್ತದೆ. ಮನಸ್ಸಿಗೆ ವಿಷಯಗಳ ಸಂಬಂಧದ ಚಟವನು ಸಹಸಾ ಬಿಡಿಸುವದು ಯಾರಿಂದಲೂ ಆಗುವದಿಲ್ಲ. ಆದರೆ ವಿಷಯಗಳನ್ನು ಸಾತ್ವಿಕ, ರಾಜಸ, ತಾಮಸಗಳೆಂದು ಮೂರು ವರ್ಣಗಳಾಗಿ ವಿಂಗಡಿಸಿ ಇವುಗಳಲ್ಲಿ ಆ ಮನಸ್ಸಿಗೆ ಕೇವಲ ಸಾತ್ವಿಕವಿಷಯಗಳನ್ನೇ ಕೊಡುವದರಿಂದ ಮನಸ್ಸಿನ ಶುದ್ಧಿಯೆಂದರೆ ನಿರ್ಮಲತೆಯಾಗು ತ್ತದೆ. ಇದು ನಿರ್ಮಲವಾಗುವದರಿಂದ ಇದರಲ್ಲಿ ಹೆಚ್ಚಿನ ಸ್ಪುರಣಶಕ್ತಿಯು ಉತ್ಪನ್ನವಾ ಗುತ್ತದೆಂಬ ಸಂಗತಿಯನ್ನು ನಿರೂಪಿಸಿದೆವು. ಈ ಪ್ರಕಾರವಾಗಿ ಸುಪರಿಶುದ್ಧಗಳಾದ ಆಹಾರಗಳಿಂದ ಮನಸ್ಸು ನಿರ್ಮಲವಾದಮೇಲೆ ನಾವು ಮಾಡತಕ್ಕ ಕರ್ತವ್ಯವೇನು ?ಎಂಬ ಬಗ್ಗೆ ಈಗ ವಿಚಾರಮಾಡತಕ್ಕದ್ದು. ಈ ರೀತಿ ಮನಸ್ಸಿಗೆ ನೈರ್ಮಲ್ಯಬಂದರೂ ಅದರ ಚಂಚಲಸ್ವಭಾವವು ಹೋಗದಿದ್ದರೆ ಅದನ್ನು ಬಿಗಿದುಹಿಡಿಯುವದು ಹೇಗೆ ? ಅದು 'ನಮ್ಮ ಬಿಗಿಯಲ್ಲಿ ಸಿಗದಿದ್ದರೆ ನಾವು ಹೇಗೆ ಕರ್ತವ್ಯನಿಷ್ಠರಾಗುವೆವು ? ನಾವು ಕರ್ತವ್ಯನಿಷ್ಠರಾ ಗದಿದ್ದರೆ ನಮ್ಮ ಮೇಲೆ ಸದ್ಗುರುವಿನ ಅಂತಃಕರಣವಾಗುವದು ಹೇಗೆ ? ಸದ್ಗುರುವಿನ ಅಂತಃಕರಣದ ಹೊರತು ಯಾರಿಗೂ ಮುಕ್ತಿ ಇಲ್ಲವೆಂಬುದು ಸಿದ್ಧವಾದದ್ದೇ ಇರುತ್ತದೆ. ಹೀಗೆ ಮನಸ್ಸು ಚಾಂಚಲ್ಯಮಾತ್ರದಿಂದ ಫಲಕ್ಕೆ ದೂರಾಗುವ ಕಲ್ಪಕ್ಕೆ ಅದರ ಚಾಂಚಲ್ಯ ವನ್ನು ಪರಿಹರಿಸತಕ್ಕದ್ದು ಮೊದಲನೆಯ ಕರ್ತವ್ಯವಿರುತ್ತದೆ; ಆದ್ದರಿಂದ ಅದರ ಚಾಂಚ ಲ್ಯವನ್ನು ತೆಗೆದುಹಾಕುವ ವಿಷಯವನ್ನು ಕುರಿತು ವಿಚಾರಿಸುವಾ-

ಈ ಮನಸ್ಸಿನಚಾಂಚಲ್ಯವನ್ನು ತೆಗೆದುಹಾಕುವಉಪಾಯಗಳೆಂದರೆ ೧.ಸಂಕಲ್ಪವು,</p. ೨.ಯೋಗವು. ಇವೆರಡೂ ಕೂಡಿ ಮನಸ್ಸಿನ ಚಾಂಚಲ್ಯವನ್ನು ಪರಿಹರಿಸುತ್ತವೆ. ಮನ ಸ್ಸು, ಒಂದು ಕೆಲಸವನ್ನು ಮಾಡಲಿಕ್ಕೆ ಉಪಕ್ರಮಿಸಿತು, ಅದನ್ನು ಬಿಟ್ಟಿತು; ಮತ್ತೊಂದ ಕ್ಕೆ ಆರಂಭಿಸಿತು; ಅದನ್ನೂ ಬಿಟ್ಟಿತು. ಹೀಗೆ ಒಂದೂ ಕೆಲಸವನ್ನು ನಿರ್ಧಾರದಿಂದ ಮಾ. ಡದಿರುವದೇ ಮನಸ್ಸಿನ ಚಾಂಚಲ್ಯವು. ಉಪಕ್ರಮಿಸಿದ ಕಾರ್ಯವನ್ನು ತಪ್ಪದೆ ಮುಗಿ ಸುವ ಚಟಯನ್ನು ಕಲಿಸುವದೇ ಚಾಂಚಲ್ಯನಿವಾರಣೋಪಾಯವು. ಒಂದು ತಾಸಿನೊಳಗೆ ನೂರಾರು ಕಡೆಗೆ ಓಡಾಡುವ ಚಟಯು ಬಿದ್ದದ ರಿಂದ ಸಹಸಾ ಒಂದೇ ಕಾರ್ಯದಲ್ಲಿ ಮನಸ್ಸು ವ್ಯಾವ್ರತವಾಗಲಾರದೆಂಬುವದು ದೊಡ್ಡಮಾತ್ತಲ್ಲ; ಆದರೆ ತಿರುಗಿ-ಮುರುಗಿ ಅದೇಕೆಲಸಕ್ಕೆ ಹಚ್ಚೋಣ, ಅದನ್ನುಬಿಟ್ಟುಹಾರಿದರೆ ಮತ್ತು ಅದಕ್ಕೆ ತಂದುಹಚ್ಚೋಣ, ಹೀಗೆ ಸ್ವೀಕೃತ ಕಾರ್ಯದಕಡೆಗೆ ಮನಸ್ಸನ್ನು ನಿರ್ಧಾರದಿಂದ ಹಚ್ಚುವದಕ್ಕೆ ಸಂಕಲ್ಪವೆಂತಲೂ, ಅ ಭ್ಯಾ ಸ ವೆ ೦ ತ ಲೂ ಪರ್ಯಾಯಶಬ್ದಗಳನ್ನು ಉಪಯೋಗಿ ಸಬಹುದು. ಇನ್ನು "ಯೋಗಃ ಕರ್ಮಸು ಕೌಶಲಂ" ಎಂದರೆ ಕೌಶಲ್ಯದಿಂದ ಕರ್ಮ ಮಾಡುವದೇ ಯೋಗವೆಂದು ಹೇಳಿರುವದರಿಂದ, ಅತ್ಯಂತ ಕರ್ಮಾಸಕ್ತನು . ಸ್ವೀಕೃತಕಾ ರ್ಯದಲ್ಲಿ ತನ್ನನ್ನೇ ಮರೆತು ಬಿಡುವನಾದ್ದರಿಂದ, ನಿಜವಾದ ವೈರಾಗ್ಯವು ಆತನಲ್ಲಿಯೇ ಉತ್ಪನ್ನವಾಗುವಸಂಭವವಿರುತ್ತದೆ.