ಪುಟ:ಭವತೀ ಕಾತ್ಯಾಯನೀ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



-೩೦-

ಶ್ರವಣದಸಾರವೂ ಆಗಿರುತ್ತದೆ. ಇನ್ನು ಕೆಳಗೆ ಕೊಟ್ಟಿರುವ ಸಾಕಾಹಾರಗಳ ಪಟಿಯನ್ನು ವಾಚಕರು ಅವಲೋಕಿಸಿ, ಅವನ್ನು ಗ್ರಹಿಸುತ್ತ ಚಿತ್ತಶುದ್ಧಿಯನ್ನು ಪಡೆಯತಕ್ಕದ್ದು.

ಸಾತ್ವಿಕಾಹಾರಗಳ ಪಟ್ಟಿಯು-

೧ ಧಾನ್ಯಗಳು- ೧ ನೆಲ್ಲಕ್ಕಿ, ೨ ಜವೆಗೋದಿ, ೩ ಗೋದಿ, ೪ ಎಳ್ಳು, ೫ ಉದ್ದು,

೬ ಸಾವಿ. ೭ ನವಣಿ, ೮ ಹೆಸರು, ೯ ಸಾಸಿವಿ, ೧೦ ಕಡಲಿ (ವಿಕಲ್ಪ), ೧೧ ಜೋಳ(ವಿಕಲ್ಪ),೧೨ ಅವರಿ, ೧೩ ಬಟ್ಟಗಡಲೆ, ೧೪ ಬುಯಿಮೂಗು ಇತ್ಯಾದಿ.

೨ ಫಲಗಳು-೧ ಬಾಳೇಹಣ್ಣು,೨ ಮಾವಿನಹಣ್ಣು, ೩ ಹಲಸು, ೪ ಬೋರೆಹಣ್ಣು ,

೫ ನೇರಲಹಣ್ಣು, ೬ ಖರ್ಜೂರ, ೭ ಹುಣಸೇಹಣ್ಣು. ೮ ದ್ರಾಕ್ಷಿ, ೯ ದಾಳಿಂಬ, ೧೦ ಅಕ್ರೋಡದಹಣ್ಣು , ೧೧ ಕರಬೂಜಿಹಣ್ಣು, ೧೨ ತೆಂಗಿನಕಾಯಿ, ೧೩ ಲಿಂಬಿಯಹಣ್ಣು(ವಿಕಲ್ಪ)

೩ ಶಾಕಗಳು- ೧ಚವಳಿ, ೨ ಸೂರಣಗಡ್ಡಿ, ೩ ಸವತೀಕಾಯಿ, ೪ ಹೀರೇಕಾಯಿ,೫ ಕೊತ್ತುಂಬರಿ, ೬ ಪಡವಲಕಾಯಿ, ೭ ನೆಲ್ಲೀಕಾಯಿ, ೮ ಹಸಿಶುಂಠಿ, ೯ ಒಣಶುಂಠಿ ೧೦ ಮೂಲಂಗಿ, ೧೧ ಮೆಣಸಿನಕಾಯಿ, ೧೨ ಗೆಣಸು.

೪ ಸ್ನೇಹಗಳು-೧ ಆಕಳಹಾಲು, ೨ ಆಕಳಮೊಸರು, ೩ ಆಕಳತುಪ್ಪ, ೪ ಆಕಳ

ಮಜ್ಜಿಗಿ, ೫ ಎಮ್ಮೆಯತುಪ್ಪ, ೬ ಬೆಣ್ಣೆ ತೆಗೆಯದೆಯಿದ್ದ ಎಮ್ಮೆಯ ಮಜ್ಜಿಗೆ, ೭ ಸಕ್ಕರೆ ಕೂಡಿದ ಎಮ್ಮೆಯಹಾಲು ಇತ್ಯಾದಿ.

೫ ಇತರಪದಾರ್ಥಗಳು- ೧ ಕಬ್ಬು, ೨ ಸಕ್ಕರಿ, ೩ ಬೆಲ್ಲ, ೪ ಕಪ್ಪುರ, ೫ ಸಿಂಧು

ಲವಣ, ೬ ಸಮುದ್ರದ ಉಪ್ಪು, ೭ ಅಡಕಿ, ೮ ವೀಳೆಯದೆಲೆ, ೯ ಮೆಣಸು, ೧೦ ಜೇನು ತುಪ್ಪ ಇತ್ಯಾದಿ

ಒಟ್ಟಿಗೆ ಹೇಳತಕ್ಕದ್ದೇನಂದರೆ, ಮನಸ್ಸಿಗೂ-ಇಂದ್ರಿಯಗ

ಳಿಗೂ-ವಿಷಯಗಳಿಗೂ ಪರಸ್ಪರ ಅಪರಿತ್ಯಾಜ್ಯ ಸಂಬಂಧವಿರುವದರಿಂದ ಇವುಗಳವ್ಯವಹಾ ರವು ನಿತ್ಯವಿರುತ್ತದೆ; ಆದ್ದರಿಂದ ನಾವು ವಿಚಾರಪೂರ್ವಕವಾಗಿ ಮನಸ್ಸಿಗೆ ವಿಷಯಗಳ ಸಂಬಂಧವನ್ನು ಮಾಡಿಸತಕ್ಕದ್ದು. ವಿಷಯಗಳ ಪರಿಶೀಲನವೇ ಮನಸ್ಸಿನ ಶುದ್ಧಾಶುದ್ಧ ತೆಗಳಿಗೆ ಕಾರಣವಾಗಿರುವದರಿಂದ, ವಿಷಯಗಳಲ್ಲಿಯ ಗುಣ-ದೋಷಗಳ ಪರಿಜ್ಞಾನವನ್ನು ಮನಸ್ಸಿಗೆ ಅವಶ್ಯವಾಗಿ ಮಾಡಿಕೊಡತಕ್ಕದ್ದು. ಒಂದುಸಾರೆ ಮನಸ್ಸು “ಇವು ದುಷ್ಟ ಪದಾರ್ಥಗಳೆಂದು" ನಿಶ್ಚಯಿಸಿ, ಅವುಗಳಮೇಲೆ ಓಕರಿಸಿದರೆ ಸಾಕು. ಅಂಥ ದುಷ್ಟ ಪದಾರ್ಥಗಳ ಸಂಬಂಧಕ್ಕೆ ಅದು ಒಳಗಾಗುವದಿಲ್ಲ.

------------------

೫ ನೆಯ ಪ್ರಕರಣ-ಬಂಧವಿಮಾಚನ.

" यस्य देवे पराभाक्त यथादेवे तथागुरौ ।

तस्यैते कथिता ह्यथ:प्रकाशते महात्मनः ॥१||

ಹಿಂದಿನ ನಾಲ್ಕು ಪ್ರಕರಣಗಳಲ್ಲಿ, ಮನಸ್ಸು ಅತಿ ಚಂಚಲವಾಗಿದ್ದು ನಿಂತಲ್ಲಿನಿಲ್ಲದೆ

ಯಾವಾಗಲೂ ಕರ್ತವ್ಯಶಾಲಿಯಾಗಿರುವದರಿಂದ, ಅದು, ಇಂದ್ರಿಯಗಳೊಡನೆ ಹೇಯವಾ