ಪುಟ:ಭವತೀ ಕಾತ್ಯಾಯನೀ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



--೧೬--

ಮನಸ್ಸು ಯಾವ ಪದಾರ್ಥಗಳ ಎಷ್ಟೆಷ್ಟು, ಅಂಶಗಳನ್ನು ಕೂಡಿಕೊಂಡು ಪರಿಪೋಷ ವನ್ನು ಹೊಂದಿ ಕೆಲಸಮಾಡಲಿಕ್ಕೆ ಸಮರ್ಥವಾಗುತ್ತದೆಂಬದನ್ನು ಹೇಳಲಿಕ್ಕೆ ಬೇಕಾಗು ತ್ತದೆ. ಈ ಸಂಬಂಧದಿಂದ ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿದ್ದೇನಂದರೆ-

" ಅನ್ನಮಶಿತಂ ತ್ರೇಧಾವಿಧೀಯತೇ” ನಾವು ತಿಂದ ಅನ್ನದೊಳಗೆ ಮೂರುಭಾಗ ಗಳಾಗುತ್ತವೆ. ಒಂದು ಸ್ಥೂಲಭಾಗವು ಮಲವಾಗಿ ಹೋಗುತ್ತದೆ. ಮತ್ತೊಂದು ಮಧ್ಯಮಭಾಗವು ಮಾಂಸವಾಗುತ್ತದೆ, ಮೂರನೆಯ ಸೂಕ್ಷ್ಮ ಭಾಗವೇ ಮನಸ್ಸಾಗುತ್ತದೆ. ಇದೇ ಮೇರೆಗೆ ನಾವು ಕುಡಿದ ನೀರೊಳಗಾದರೂ ಮೂರುಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಮೂತ್ರವೂ. ನಡುವಿನ ಮಧ್ಯಮಭಾಗವು ರಕ್ತವೂ, ಮೂರನೆಯ ನ್ಸೂಕ್ಷ್ಮಭಾಗವು ಪ್ರಾಣವೂ ಆಗುತ್ತವೆ. ಇದರಂತೆ ನಾವು ತಿನ್ನುವ ತೇಜಸ್ಸಿನೊಳಗೆ ಮೂರು ಭಾಗಗಳಾಗಿ, ಮೊದಲನೆಯ ಸ್ಥೂಲಭಾಗವು ಎಲವೂ, ಎರಡನೆಯ ಮಧ್ಯಮ ಭಾಗವು ಮಜ್ಜೆ (ಎಲವಿನೊಳಗಿನ ರಸ) ಯೂ, ಮೂರನೆಯ ಸೂಕ್ಷ್ಮ ಭಾಗವು ವಾಣಿಯೂ ಆಗುತ್ತವೆ. ತೇಜಸ್ಸೆಂದರೆ ಘೃತ-ತೈಲ ಮುಂತಾದ ಸ್ನಿಗ್ಧವಸ್ತುವು, ಸೂರ್ಯ- ಚಂದ್ರ-ಅಗ್ನಿ ಮುಂತಾದವಲ್ಲ. ಈ ಸ್ನಿಗ್ಧ ಪದಾರ್ಥಗಳನ್ನು ಯಾವಾಗಲೂ ಉಪ ಯೋಗಿಸುವ ಜನರ ದೇಹದಲ್ಲಿ ಇವು ವಿಲಕ್ಷಣವಾದ ಪ್ರಕಾಶವನ್ನುಂಟುಮಾಡುತ್ತಿರುವದ ರಿಂದ, ಇವಕ್ಕೆ ತೇಜಸ್ಸೆಂಬ ಹೆಸರನ್ನು ನಮ್ಮ ಪ್ರಾಚೀನರು ಇಟ್ಟಿರುತ್ತಾರೆ. ಮತ್ತು "ಜ್ಯೋತಿಶ್ಚರಣಾಭಿಧಾನಾತ್ ” ಎಂಬ ಬ್ರಹ್ಮಸೂತ್ರದ ಭಾಷ್ಯದಲ್ಲಿ "ಮನೋಜ್ಯೋತಿ ರ್ಜುಷತಾಮಾಜ್ಯಂ" ಎಂಬ ವೇದವಾಕ್ಯವನ್ನು ಹಿಡಿದು ಅರ್ಥ ಮಾಡುವಾಗ ತುಪ್ಪ ವನ್ನು ತಿನ್ನುವವರ ಮನಸ್ಸು ಜ್ಯೋತಿರೂಪವಾಗುತ್ತದೆ; ಅಂದರೆ ಜ್ಯೋತಿಸ್ಸಿನಂತೆ ಬಹು ಪದಾರ್ಥಗಳನ್ನು ಪ್ರಕಾಶಿಸುತ್ತದೆ. ಎಂದು ಹೇಳಿರುತ್ತಾರೆ. ಹೀಗಿದ್ದ ಮೂಲಕ ವಾಗಿಯೇ ನಮ್ಮ ಪೂರ್ವಜರು ಹವ್ಯ-ಕವ್ಯ ಮುಂತಾದ ಕರ್ಮಗಳಲ್ಲಿಯೂ, ಹೋಮ ಹವನಾದಿ ಕರ್ಮಗಳಲ್ಲಿಯೂ ಭೋಜನ- ಪ್ರತಿಭೋಜನಗಳಲ್ಲಿಯೂ, ದೇವರದೀಪಗಳ ಲ್ಲಿಯೂ ತುಪ್ಪಕ್ಕೆ ಪ್ರಾಧಾನ್ಯವನ್ನು ಕೊಟ್ಟಿರುವರು. ತುಪ್ಪವಿಲ್ಲದ ಹೊರತು ಬ್ರಾಹ್ಮಣರ ಕ ಮ ೯ ವೇ ಸಾಗುವಂತಿಲ್ಲ. ಈ ಪ್ರಕಾರವಾಗಿ ಅನ್ನದಿಂದ ಮನಸ್ಸೂ , ನೀರಿನಿಂದ ಪ್ರಾಣವೂ, ತೇಜಸ್ಸಿನಿಂದ ವಾಣಿಯೂ ಹುಟ್ಟುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ಮೊಸರು ಹಾಕಿ ಕಡಗೋಲಿನಿಂದ ಕಡೆಯಹತ್ತಿದರೆ, ಮೇಲಕ್ಕೆ ಬೆಣ್ಣೆಯು ಬರುವದಷ್ಟೆ, ಆ ಬೆಣ್ಣೆಯನ್ನು ಕಾಸಿದರೆ ತುಪ್ಪವಾಗುತ್ತದೆ. ಇದರಲ್ಲಿ ಸ್ಥೂಲಭಾಗವು ಮಜ್ಜಿಗೆ, ಮಧ್ಯಮಭಾಗವು ಬೆಣ್ಣೆಯು, ಸೂಕ್ಷ್ಮ ಭಾಗವೇತುಪ್ಪವು. ಇದರಂತೆ ಮನಸ್ಸು ಮುಂತಾದ್ದ ರಲ್ಲಿಯೂ ಅನ್ನಪಾನಾದಿಗಳ ಮೂರುಭಾಗಗಳ ಸಂಬಂಧದಿಂದ ತಿಳಿದುಕೊಳ್ಳಬೇಕು.

ಮೂಲತಃ ಮನಸ್ಸು ಅಣುಮಾತ್ರವಾಗಿರುತ್ತದೆ. ಹದಿನೈದು ದಿನಗಳವರೆಗೆ ತಿಂದಅನ್ನದಿಂದ ಅದಕ್ಕೆ ಹದಿನೈದು ಅಂಶಗಳು ಕೂಡಿಕೊಳ್ಳುತ್ತವೆ. ಆಗ ಮನಸ್ಸು ಷೋಡಶಕಲಾತ್ಮಕವಾಗಿ ವ್ಯವಹಾರಚತುರವೂ ಕಾರ್ಯಕರಣಸಮರ್ಥವೂ ಆಗುತ್ತದೆ. ನಾವು ಹದಿನೈದು ದಿವಸಗಳವರೆಗೆ ಅನ್ನವನ್ನು ಮುಟ್ಟದೆ ಕೇವಲ ನೀರನ್ನೇ ಕುಡಿದು