ಪುಟ:ಕಥಾ ಸಂಗ್ರಹ - ಭಾಗ ೨.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 17 ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕೊಸ್ಕರ ಸಂತೋಪಿಸಿ ಲೋಕಗಳೆಲ್ಲವೂ ಗಂಭೀರಧನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ' ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು; ಅಲ್ಲಿಂದ ಹೊರಟು ತೋಳೋಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲ ವೆಂದು ಆಲೋಚಿಸುತ್ತ, ಗಗನ ಮಾರ್ಗದಲ್ಲಿ ಬರುತ್ತಿರಲು; ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು; ಆ ಮುನೀಂದ್ರನು ಹರಸಿ-ಎಲೈ ಲಂಕಾಧೀಶನೇ, ನಿನಗೆ ಸೌಖ್ಯವೇ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ--ಈಗ ನಿನ್ನ ಶೌರ್ಯೋಿಕ ವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಬರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದಲ್ಲವು, ಈ ಮನುಷ್ಯರಲ್ಲಿ ನಿನಗೆ ಎದುರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲವು, ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ರ ವುಂಟಾದೀತೇ ? ಎಂದಿಗೂ ಇಲ್ಲ ವು. ಈ ನರರು ಅಲ್ಪಾಯುಷ್ಕರು ಮತ್ತು ರೋಗ ಶೋಕ ಕು ತ ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶ ರಾಗುವವರು, ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಟ ರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ದ ದಲ್ಲಿ ಅವರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು, ಅವರೊ ಳಗೆ ತೆಂಕಣದೆಸೆಗೊಡೆಯನಾದ ಯಮನೆಂಬವನು ಕಾಲದಂಡವನ್ನು ಧರಿಸಿದವ ನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳ ಕ್ಷೇಮದಿಂದಿರು ವುವು ಎನ್ನಲು ; ರಾವಣನು--ಎಲೈ ಮುನೀಂದ್ರನೇ, ನೀನು ಹೇಳಿದ ಮಾತು ಯು ಕ್ರವೇ ಸರಿ, ನಾನು ಹೀಗೆಯೇ ಯೋಚಿಸುತ್ತಿದ್ದೆನು, ನೀನು ಹೇಳಿದಂತೆ ದಿಕ್ಕಾಲಕ * ರಲ್ಲಿ ಒಬ್ಬನಾದ ಕುಬೇರನನ್ನು ಮೊದಲೇ ಜಯಿಸಿದ್ದೇನೆ, ಇನ್ನು ಯಮವರುಣೇಂ ದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನ ಗರೇ ಮೊದಲಾದವರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರ ಡಲು ; ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ತನಾಗಿ ಅವನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು, ಅವನನ್ನು ಕಾಲದಂಡದಿಂದ ಬಡಿದು ಕೊಂದುಹಾಕು. ಲೋಕಕ್ಕೆಲ್ಲಾ ಕ್ಷೇಮವುಂಟಾಗುವದೆಂದು ಹೇಳಿ ಹೊರಟುಹೋದನು. ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ; ನರಕಗಳಲ್ಲಿ ಯಮದೂತರು ಪಾಪಾತ್ಮರನ್ನು ಹಿಡಿದು ಕಾಯ್ದ ಮಳಲಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿಂದ