ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಆತನು ಶ್ರೀ ಗುರುವಿನ ಬಳಿಗೆ ಹೋದಾಗ ಆತನ ಹತ್ತಿರ ಕುಳಿತು ತನ್ನ ಈ ಶಂಕ ಯನ್ನು ಕುರಿತು ಆಲೋಚಿಸತೊಡಗುವನು. ಹೀಗಿರುವಾಗ ಲೇಖಕನು ಹಿಂದ ಮೈ ಶ್ರೀ ಗುರುವಿನಮು೦ದೆ-ಭಕ್ತರ ಕರ್ವಗಳು ದೇವರಿಗಾ, ಶಿಷ್ಯರ ಕರ್ವಗಳು ಗುರುಗಳಿಗೂ, ಲೋಕದ ಕರ್ಮಗಳು ಲೋಕೋದ್ದಾರಕರಿಗ ಪ್ರಾರಬ್ದ ರೂಪದಿಂದ ಪರಿಣವಿ.ಸುತ್ತಿರಬಹುದೆಂದು ನುಡಿದದ್ದಕ್ಕೆ ಶ್ರೀ ಗುರುವು ಒಪ್ಪಿಕೊಂಡದ್ದು ಪಕ್ಕನೆ ನೆನಪಾಯಿತು, ಆಗ ಲೇಖಕನಿಗೆ ಸಮಧಾನವಾ ದ೦ತಾಗಿ, ಆತನು ಸದ್ದು ರುವಿನ ರೋಗಾನುಭವದ ಉಪಪತ್ತಿಯನ್ನು ಕುರಿತು ಶೋಧಿಸಹತ್ತಿದನು, ಆಗ ಆತನಿಗೆ ಸಮರ್ಪಕವಾದ ಹಲವು ಉದಾಹರಣಗಳು ನೆನಪಾಗಿ ಶ್ರೀ ಗುರುವಿನ ರೋಗಾನುಭವದ ಒಂದೊಂದೇ ಕಾರಣಗಳು ಆತನ ಮನಸ್ಸಿಗೆ ಹಾಳೆಯಹತ್ತಿದವು, ಸಂಸಾರದಲ್ಲಿ ಯಾದರೂ ಒಬ್ಬರ ಕರ್ಮಗಳು ಇನ್ನೊ ಬ್ಬ ರಿಗ ಬಾಧಿಸುತ್ತಿವೆಂಬದನ್ನು ಸುಲಭವಾಗಿ ದುಗಾಣಬಹುದು ಧರ್ಮರಾಜನು ಯಕ್ಷನನ್ನು ಕುರಿತು-11 ಸದಾ ದುಃಖಿಯು ಯಾರು” ಎಂದು ಪ್ರಶ್ನೆ ಮೂಡಿದಾಗ 'ಯಾವನ ಕುಟುಂಬವು ದೊಡ್ಡ ದೊ ಅವನು” ಎಂದು ಯಕ್ಷನು ಕಾಟ್ಟ ಉತ್ತರವು ವಿಚಾರಮಡ ಶಕ್ಕದ್ದಾಗಿದೆ, ದೊಡ್ಡ ಕುಟುಂಬದ ವನು ಹಲವು ಜನರಿಗೆ ಸಂಬಂಧಪಟ್ಟ ವನಾದ್ದರಿಂದ, ಆ ಸಂಬಂಧಿಕರೊಡನೆ ಅವ ರೆಲ್ಲರ ಕರ್ಮದ ಸಂಬಂಧವೂ ಅವನಿಗಾಗಿ ಆತನು ಅವರವರ ಕರ್ಮಗಳ ಫಲ ಗಳನ್ನು ಭೋಗಿಸಬೇಕಾಗುವದು, ನಯ-ಭಯಗಳಿಲ್ಲದೆ ಮನಬಂದಂತೆ ನಡ ಯುವ ಹಂಡಿರುವ ಮಕ್ಕಳು-ಬಂಧುಬಳಗದವರು ಉಳ್ಳ ಕುಟುಂಬದ ಯಜಮೋನನಿಗೆ ಈ ಮಾತಿನ ಅನುಭವವು ಚೆನ್ನಾಗಿ ಬರಬಹುದಾಗಿ ತೋರದೆ, ನಿನ್ನ ಕಾಲಲ್ಲಿ ಇಷ್ಟೆಲ್ಲ ಭೋಗಿಸಬೇಕಾಯಿತು,” ಎಂಬ ಅಕ್ಕಸದ ನುಡಿಯು, ಸಾಂಸಾರಿಕರಂದ ನಮ್ಮಲ್ಲಿ ಬಹುರೂಢವಾಗಿರುವದು ಇದಕ್ಕೆ ಸಾಕ್ಷಿಯಾಗಿರುತ್ತದೆ. ಈ ಮೇರೆಗೆ ಸಂಸಾರದಲ್ಲಿ ಕುಟುಂಬದವರ ಕರ್ಮಗಳೂ, ಸಮಾಜದವರ ಕರ್ಮಗಳೂ, ದೇಶದವರ ಕರ್ಮಗಳೂ ಹೆಚ್ಚು ಕಡಿಮೆ ಪ್ರಮಾಣದಿಂದ ಪರಸ್ಪರ ಬಾಧಿಸುವಂತೆ, ಭಕ್ತರ, ಹಾಗು ಲೋಕದ ಕರ್ಮಗಳು ದೇವರನ್ನೂ, ಶಿಷ್ಟರ ಹಾಗು ಲೋಕದ ಕರ್ಮಗಳು ಲೋಕೋದ್ಧಾರಕ ಗುರುಗಳನ್ನೂ ಬಾಧಿಸುತ್ತವೆ. ಯಾದವರ ಉತತನದಿಂದ ಒಬ್ಬ ಸತ್ಪುರುಷನು ಅವರಿಗೆ--ನಿಮ್ಮ ವಂಶ ಕ್ಷಯವಾಗಲೆಂದು ಶಾಪ ಕೊಡಲು, ನಿರಪರಾಧಿಯಾದ ಶ್ರೀ ಕೃಷ್ಣನು ಅವತಾಂ ಕನಾದರೂ ಗಿಡದ ಬುಡದಲ್ಲಿ ಬಿದ್ದು ಬಾಣ ತಾಕಿ ಪ್ರಾಣಬಿಡಬೇಕಾಯಿತು !