ಪುಟ:ಭವತೀ ಕಾತ್ಯಾಯನೀ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

82

ಕಾತ್ಯಾಯನಿ--ಭಗವನ್, ಅಜ್ಞಾನದ ಮೂಲಕ ಮತ್ತೆ ಪ್ರಶ್ನೆ ಮಾಡುವದ

ಕ್ಕಾಗಿ ಕ್ಷಮೆ ಬೇಡುವೆನು. ಕಾಲಕ್ಕನುಸರಿಸಿ ಎಲ್ಲ ತಾನೇ ಆಗುತ್ತದೆಂದಬಳಿಕ, ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬೇಕಾಯಿತಲ್ಲ!

ಯಾಜ್ಞವಲ್ಕ್ಯ--ಬಾಹ್ಯಾನುಕೂಲತೆಗಳು ವ್ಯರ್ಥವೆಂದು ಹೇಳಬಹುದೇ ?

ಮಾವಿನ ಸಸೆ ಹಚ್ಚಿ ಅದಕ್ಕೆ ನೀರು-ಗೊಬ್ಬರಗಳನ್ನು ಒದಗಿಸಿಕೊಡದೆ, ತಾನೇ ದೊಡ್ಡದಾಗುವದೆಂದು ಬಿಟ್ಟುಬಿಟ್ಟರೆ ಅದು ದೊಡ್ಡದಾಗಿ ಫಲ ಕೊಡಬಹುದೇ? ಅದರಂತೆ , ಪ್ರಾರಬ್ಧಕರ್ಮಾನುಸಾರಿಯಾಗಿರುವ ಬುದ್ಧಿರೂಪ ವೃಕ್ಷಕ್ಕೆ ಸತ್ಸಮಾಗ ಮವೆಂಬ ದಿವ್ಯಜಲವನ್ನೂ, ತಪಶ್ಚರ್ಯವೆಂಬ ಸಾರಯುಕ್ತ ಗೊಬ್ಬರವನ್ನೂ ಅನು ಕೂಲಿಸಿ ಕೊಡದಿದ್ದರೆ, ಆ ಬುದ್ಧಿರೂಪ ವೃಕ್ಷಕ್ಕೆ ಮೋಕ್ಷರೂಪ ಫಲವು ಹ್ಯಾಗೆ ಬಿಟ್ಟೀತು? ನಿನಗೆ ಇವೆರಡರ ಅನುಕೂಲತೆಯೂ ಪರಿಪೂರ್ಣವಾಗಿರುವದರಿಂದಲೇ ನಿನ್ನ ಬುದ್ಧಿರೂಪ ವೃಕ್ಷವು ಈಗ ಮುಮುಕ್ಷುತ್ವವೆಂಬ ಹೂವು ಬಿಡುತ್ತಿರುವದು.

ಕಾತ್ಯಾಯನಿ--ಅದು ಏನೇ ಇರಲಿ, ಮೈತ್ರೇಯಿಯೆಂಬ ನನ್ನ ಸಖಿಯ ಸಹ

ವಾಸದಿಂದ ಈ ಬುದ್ದಿಯು ನನಗೆ ಹುಟ್ಟಿದ್ದರಿಂದ, ಆಕೆಯ ವಿಯೋಗವು ನನಗೆ ಎಂದೂ ಒದಗದಂತೆ ಮುನಿಗಳು ಅನುಗ್ರಹಿಸಬೇಕು.

ಯಾಜ್ಞವಲ್ಯ್ಕ--ಕಾತ್ಯಾಯನಿ, ಇದೇನು ನಿನ್ನ ಬೇಡಿಕೆಯು! ಮೈತ್ರೇ

ಯಿಯ ವಿಯೋಗವಾಗದಂತೆ ನಾನು ಅನುಗ್ರಹಿಸುವದು ಹ್ಯಾಗೆ? ನಾಳೆ ವಿವಾಹಾ ನಂತರ ಮೈತ್ರೇಯಿಯು ತನ್ನ ಪತಿಯನ್ನು ಹಿಂಬಾಲಿಸಿ ಹೋಗತಕ್ಕವಳಲ್ಲವೆ?

ಕಾತ್ಯಾಯನಿ--ಭಗವನ್, ನನ್ನ ಅತಿಪ್ರಸಂಗದೋಷವನ್ನು ಎಣಿಸಬಾರದು.

ಮೈತ್ರೇಯಿಯು “ಮಾಡಿದರೆ ತಮ್ಮ ಪಾಣಿಗ್ರಹಣವನ್ನೇ ಮಾಡಬೇಕು, ಇಲ್ಲದಿದ್ದರೆ ಆಜನ್ಮಬ್ರಹ್ಮಚರ್ಯದಿಂದ ಇರಬೇಕು” ಎಂದು ನಿಶ್ಚಯಿಸಿರುವಂತೆ ನಾನು ಅನ್ಯಮುಖ ದಿಂದ ಕೇಳಿದ್ದೇನೆ; ಯೋಗ್ಯಪತಿಯು ದೊರೆಯದಿದ್ದರೆ, ನಾನು ನನ್ನ ಅಬಚಿಯಾದ ಗಾರ್ಗಿಯಂತೆ ಬ್ರಹ್ಮಚರ್ಯದಿಂದಲೇ ಇರುವೆನೆಂದು ಸ್ವತಃ ಮೈತ್ರೇಯಿಯೇ ನನ್ನ ಮುಂದೆ ಹೇಳಿದ್ದಾಳೆ. ಅಂದಬಳಿಕ ತಾವು ಮೈತ್ರೇಯಿಯ ಪಾಣಿಗ್ರಹಣವನ್ನು ಮಾಡಿ ನನಗೆ ಆಕೆಯ ಚಿರಸಹವಾಸವನ್ನು ಯಾಕೆ ಒದಗಿಸಿಕೊಡಬಾರದು?

ಯಾಜ್ಞವಲ್ಕ್ಯ(ಆಶ್ಚರ್ಯದಿಂದ)--ಇದೊಂದು ನಿನ್ನ ವಿಲಕ್ಷಣಬೇಡಿಕೆಯು!

ನೀನು ಜಾಲಿಯಬಿತ್ತಿಕಾಲಿಗೆಮೂಲಮಾಡಿಕೊಳ್ಳುತ್ತಿರುವಂತೆ ನನಗೆ ತೋರುತ್ತದೆ, ಇಬ್ಬರು ಹೆಂಡಿರಿಂದ ಸಂಸಾರದ ಸವಿಯೇ ಕೆಟ್ಟು ಹೋಗುವದೆಂಬುದು ನಿನಗೆ ಗೊತ್ತಿಲ್ಲವೆ? ಕಾತ್ಯಾ ಯನೀ, ನಾನು ಮೈತ್ರೇಯಿಯ ಪಾಣಿಗ್ರಹಣ ಮಾಡಿದರೆ ನಿನಗೆ ಸಮ್ಮತವಾಗುವದೆ?

ಕಾತ್ಯಾಯನಿ--ಸಮ್ಮತವಾಗದೇನುಮಾಡುವದುಮಹಾರಾಜ, ಈ ಸುಯೋ

ಗವು ಒದಗಿದರೆ ನನ್ನ ಸಖಿಯ ಮನೋದಯವು ಪೂರ್ಣವಾದಂತಾಗಿ, ನನಗೆ ಆಕೆಯ ಚಿರಸಹವಾಸವು ಒದಗಿದಹಾಗಾಗುವದು. ಈ ಯೋಗವು ಒದಗದಿದ್ದರೆಮಾತ್ರ ನನಗೆ ಒಂದು ಬಗೆಯ ವ್ಯಸನವಾಗುವದು.