ಪುಟ:ಭವತೀ ಕಾತ್ಯಾಯನೀ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

30

ವದರಿಂದ ಏನೂ ಪ್ರಯೋಜನವಿಲ್ಲೆಂಬದನ್ನು ಚನ್ನಾಗಿ ಲಕ್ಷದಲ್ಲಿಡು . ಭೂತಗಳಲ್ಲಿ ಪ್ರಾಣಿಗಳು , ಪ್ರಾಣಿಗಳಲ್ಲಿ ಬುದ್ಧಿಯುಳ್ಳವು,. ಬುದ್ಧಿಯುಳ್ಳವುಗಳಲ್ಲಿ ಮನುಷ್ಯರು, ಮನುಷ್ಯರಲ್ಲಿ ಬ್ರಾಹ್ಮಣರು, ಬ್ರಾಹ್ಮಣರಲ್ಲಿ ವಿದ್ವಾಂಸರು, ವಿದ್ವಾಂಸರಲ್ಲಿ ಸುಸಂಸ್ಕೃತ ಬುದ್ಧಿಯುಳ್ಳವರು, ಸುಸಂಕೃತಬುದ್ಧಿಯುಳ್ಳವರಲ್ಲಿ ಕರ್ತೃತ್ವಶಾಲಿಗಳು, ಕರ್ತೃತ್ವ ಶಾಲಿಗಳಲ್ಲಿ ಬ್ರಹ್ಮಜ್ಞಾನಿಗಳು ಶ್ರೇಷ್ಥರಿರುವದರಿಂದ, ಕರ್ತೃತ್ವಶಾಲಿಯಾದ ನೀನು ಬ್ರಹ್ಮ ಜ್ಞಾನಕ್ಕೆ ತೀರ ಸಮಿಾಪಿಸಿರುತ್ತೀ. ನೀನು ಯೋಗ್ಯತಾಸಂಪನ್ನಳಾದ್ದರಿಂದಲೇ ನಿನ್ನನ್ನು ನಾನು ಲಗ್ನವಾಗಿರುವೆನು. ವಶಿಷ್ಠರಿಗೆ ಅರುಂಧತಿಯಂತೆ ನೀನು ನನಗೆ ತಕ್ಕ ಹೆಂಡತಿ ಯಾಗಿರುತ್ತೀ! ನಿನ್ನ ಯೋಗ್ಯತೆಯು ಸಾಮಾನ್ಯವೆಂದು ತಿಳಿಯಬೇಡ. ನೀನು ನನ ಶಕ್ತಿಸರ್ವಸ್ವವಾಗಿರುತ್ತೀ. ನಿನ್ನಂಥ ಕಾರ್ಯದಕ್ಷಳ ಸಹಾಯವಿರುವದರಿಂದಲೇ ನಾನು ಗೃಹಸ್ಥಾಶ್ರಮಿಯಾಗಿರುವೆನು. ನಿನ್ನಂಥ ಗೃಹಿಣಿಯ ಸಹಾಯದಿಂದಲೇ ಯೋಗ್ಯವಾದ ಸಂಸಾರದ ಮಾದರಿಯನ್ನು ಲೋಕಕ್ಕೆ ತೋರಿಸಲಿಕ್ಕೆ ನಾನು ಸಮರ್ಥನಾಗಿರುತ್ತೇನೆ. ದೇಹವಿರುವದರೊಳಗಾಗಿ ಅಭಿಮಾನಬಿಡುವದು ಮಹತ್ವವಾಗಿರುವಂತೆ, ಸಂಸಾರದಲ್ಲಿದ್ದು ಸಂಸಾರಪರಿತ್ಯಾಗ ಮಾಡುವದು ಮಹತ್ವದ್ದಾಗಿರುತ್ತದೆ.

ಕಾತ್ಯಾಯನಿ--ಭಗವನ್, ಪತಿತರನ್ನು ಕ್ಷಣದಲ್ಲಿ ಉದ‍್ಧರಿಸಲು ಸಮರ್ಥರಾದ

ತಮಗೆ ಯಾವದು ತಾನೆ ಅಸಾಧ್ಯವು! ಸಂಸಾರದಲ್ಲಿದ್ದೂ ತಾವು ಸಂಸಾರ ಪರಿತ್ಯಾಗ ವನ್ನು ಮಾಡಿರಬಹುದು; ಆದರೆ ಸಂಸಾರವು ಅಸಾರವಾದದ್ಧೂ, ತಿರಸ್ಕರಣೀಯವಾ ದದ್ದೂ ಎಂದು ಜ್ಞಾನಿಗಳು ಹೇಳುವರಲ್ಲ! ಅದರ ಮರ್ಮವೇನು?

ಯಾಜ್ಞವಲ್ಕ್ಯ----ದೇವಿ, ಇರುವಹಾಗೆಇದ್ದರೆ ಯಾವದೂ ಕೆಡಕಲ್ಲ ನೋಡು.

ನಿಜವಾದ ಸಂಸಾರಕ್ಕೂ, ನಿಜವಾದ ಪಾರಮಾರ್ಥಕ್ಕೂ ಭೇದವಿಲ್ಲೆಂತಲೂ, ಸಂಸಾರವನ್ನು ಬಿಟ್ಟು ಪರಮಾರ್ಥವನ್ನು ಹಿಡಿಯುವವನೂ, ಪರಮಾರ್ಥವನ್ನು ಬಿಟ್ಟು ಸಂಸಾರ ವನ್ನುಹಿಡಿಯುವವನೂ ಜ್ಞಾನಿಯಲ್ಲೆಂತಲೂ ಅದೇ ಜ್ಞಾನಿಗಳೇ ಹೇಳಿರುವರು. ಸಂಸಾ ರವು ಹೇಯವಾಗಿದ್ದರೆ ವಶಿಷ್ಯಾದಿಗಳು ಸಂಸಾರದ ಅವಲಂಬನವನ್ನು ಯಾಕೆ ಮಾಡುತ್ತಿ ದ್ದರು? ಯಾವ ಸಂಸಾರದಲ್ಲಿ ಆಲಸ್ಯ-ದುರಾಚರಣೆಗಳಿಗೆ ಆಸ್ಪದವಿರುವದಿಲ್ಲವೋ, ಯಾವ ಸ೦ ಸಾ ರ ವು ಅತಿಸಂಚಯದಿಂದ ದೂಷಿತವಾಗಿರುವದಿಲ್ಲವೋ, ಯಾವ ಸಂಸಾರವು ಪ್ರೇಮ-ದಯೆಗಳ ಆಗರವಾಗಿರುವದೋ, ಯಾವ ಸಂಸಾರದಲ್ಲಿ ದೇವ,-ಗುರು,-ಪಿತೃ,- ಅತಿಥಿಗಳ ಪೂಜಾ-ಸತ್ಕಾರಗಳು ಯಥಾಸ್ಥಿತವಾಗಿ ಸದಾ ಆಗುತ್ತಿರುವವೋ, ಆ ಸಂಸಾ ರವು ಪರಮಧನ್ಯವೂ, ಅತ್ಯಂತ ಸಾರಯುಕ್ತವೂ, ಶ್ರೇಷ್ಥಗತಿಪ್ರದವೊ ಆಗಿರುವದು. ಭಗವತೀ, ಹೇಳು, ನಿನ್ನಯೋಗದಿಂದ ನಮ್ಮ ಸಂಸಾರದಲ್ಲಿ ಯಾವಮಾತಿನಕೊರತೆಯದೆ? ಸಂಸಾರದ ತಿರಸ್ಕಾರವನ್ನು ನಾನು ಎಂದಾದರೂ ನಿನ್ನ ಮುಂದೆ ಮಾಡಿರುವೆನೆ ?ಯಾಕೆ ಮಾಡಲಿ? ನಿನ್ನಯೋಗದಿಂದ ಸಂಸಾರದಲ್ಲಿ ನನಗೆ ಸ್ವರ್ಗಸುಖವು ಪ್ರಾಪ್ತವಾಗಿರುವದು!

ಕಾತ್ಯಾಯನಿ (ಕೈ ಜೋಡಿಸಿ)--ಋಷಿವರ್ಯರಿಗೆ ಈ ದಾಸಳ ಅನಂತ ಪ್ರಣಾ

ಮಗಳಿರಲಿ! ಭಗವನ್, ಸಂನಾರಧರ್ಮಗಳನ್ನು ನಾನು ಅರಿತವಳಲ್ಲ' ಚರಣಸೇವೆಯ