ಪುಟ:ಭವತೀ ಕಾತ್ಯಾಯನೀ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



21

ಮೈತ್ರೇಯಿ--ನಾನು ಹೇಳುವದು ಕಥೆಯಂತೂ ಸರಿಯೆ; ಆದರೆ ಅದು ಬಹು

ಮಹತ್ವದ್ದಾಗಿರುವದು. ಆ ಕಥೆಯು ಕೇವಲ ಮನೋರಂಜನಕ್ಕಾಗಿ ಕೇಳತಕ್ಕದ್ದಲ್ಲ. ಅದರ ರಹಸ್ಯವನ್ನು ಚನ್ನಾಗಿ ವಿಚಾರಿಸತಕ್ಕದು . ಇಂಥ ಕಥೆಗಳನ್ನು ಕೇಳಿ ಆನಂ ದಪಡುವದಕ್ಕಿಂತ, ಅವುಗಳೊಳಗಿನ ಮೂಲತತ್ವವನ್ನು ನೆನಪಿನಲ್ಲಿಟ್ಟು ಅದರಂತೆ ನಡೆ ಯುವದು ಹಿತಕರವಾಗಿರುವದು.

ಕಾತ್ಯಾಯನಿ -ದಾಗಿಯೇ ಆಗಲಿ, ನಿನ್ನ ಕಥೆಯು ಬೋಧಪ್ರದವಾಗಿದರೂ

'ಚಿಂತೆಯಿಲ್ಲ. ಹೇಳು, ನಾನು ಮನಸ್ಸುಗೊಟ್ಟು ಕೇಳುವೆನು . ಮೈತ್ರೇಯಿ, ನನಗೆ ಎಷ್ಟು ಕಥೆ ಕೇಳಿದರೂ ಬೇಸರವಿಲ್ಲ ನೋಡು ! ಕಥೆ ದೊಡ್ಡದಿದ್ದಷ್ಟುಟ ಸಂತೋಷ !

ಮೈತ್ರೇಯಿ-ಒಳ್ಳೆದು, ಬೀಳುತ್ತೇನೆ ಕೇಳು. ಒಂದು ಪೂರ್ಣ ಗರ್ಭಿಣಿ

ಯಾದ ಸಿಂಹವು ಹಸಿವೆಯಿಂದ ವ್ಯಾಕುಲವಾಗಿ ಆಹಾರ ಹುಡುಕಲಿಕ್ಕೆ ತನ್ನ ಗವಿಯಿಂದ ಹೊರಬಿದ್ದಿತು. ಅದು ದೂರ ಹೋಗುವದರೊಳಗೆ ಒಂದು ಕುರಿಯ ಹಿಂಡು ಮೇಯುತ್ತಿ ರುವದು ಅವರ ಕಣ್ಣಿಗೆ ಬಿದ್ದಿತು. ಸಿಂಹವು ಸರಾಸರಿ ಹಿಂಡಿನ ಸನಿಯಕ್ಕೆ ಹೋಗಿ ಒಂದು ಕುರಿಯ ಮೇಲೆ ಜಿಗಿಯಲು ಜಪ್ಪುಹಾಕಿತು. ಹಸಿವೆಯು ಬಹಳವಾದದ್ದರಿಂದಲೂ, ತನ್ನ ಮಾಕ್ರಮದ ವಿಷಯವಾಗಿ ಅದಕ್ಕೆ ನಂದಿಗೆಯು ವಿಶೇಷವಾಗಿದ್ದ್ದದರಿಂದಲೂ ಆ ಸಿಂಹವು ಅಷ್ಟು ದೂರದಿಂದಲೇ ಕುರಿಯ ಮೇಲೆ ಹಾರಿತು; ಆದರೆ ಪೂರ್ಣ ಗರ್ಭಿಣಿ ಯಿದ್ದದ್ದರಿಂದ ಜಿಗಿತವು ತಪ್ಪಿ ಅದು ಕಸುವಿನಿಂದ ನೆಲಕ್ಕೆ ಅಪ್ಪಳಿಸಿತು. ಆದ್ದರಿಂದ ಹೊಟ್ಟೆಯೊಳಗಿನ ಗಂಡುಮುರಿಯು ಹೊರಬಿದ್ದು, ಸಿಂಹವು ಮರಣಹೊಂದಿತು. ತನ್ನ ಮರಿಯ ಮೋಹಪಾಶದಲ್ಲಿ ಸಿಕ್ಕಿಕೊಳ್ಳಲಿಕ್ಕೆ ಆ ಸಿಂಹವು ಬದುಕಿಉಳಿಯಲಿಲ್ಲ.

ಕಾತ್ಯಾಯನಿ--ಇದೇನೇ ಮೈತ್ರೇಯಿ, ಮಕ್ಕಳ ಮೋಹವು ನಿನಗೆ ಪಾಶವಾಗಿ

ತೋರುವದೆ? ತಮ್ಮ ಮಕಳು ತಮ್ಮ ಸುತ್ತು ಮುತ್ತು ಆಡುತ್ತಿರುವಾಗ ಆಗುವ ಆನಂ ದವು ಸ್ವರ್ಗದಲ್ಲಿಯಾದರೂ ದೊರೆಯಬಹುದೆ? ತಾಯಿಯ ಕರಳು ಹ್ಯಾಗಿರುತ್ತದೆಂಬುದು ಮಕ್ಕಳ ತಾಯಂದಿರಾದವರಿಗಲ್ಲದೆ ಅನ್ಯರಿಗೆ ತಿಳಿಯುವದಿಲ್ಲೆಂಬ ಮಾತು ಸುಳ್ಳಲ್ಲ. ಹಾಗ ಲ್ಲದಿದ್ದರೆ ಹುಚ್ಚಿಯ ಹಾಗೆ ನೀನು ಹೀಗೆ ಅನ್ನುತ್ತಿದಿಲ್ಲ. ಮಕ್ಕಳನ್ನು ಹೀಗೆ ನಿರಾ ಕರಿಸಬಾರದಮ್ಮಾ! ಮಕ್ಕಳ ತಾಯಂದಿರಾಗಲಿಕ್ಕೆ ಪುಣ್ಯಬೇಕು !

ಮೈತ್ರೇಯಿ -- ಅದೇನೇ ಇರಲಿ ; ಮಕ್ಕಳೇನು ಜೀವಕ್ಕೆ ಮುಕ್ಕಳೋ, ಅವು

ಮೊಹಪಾಶವಾಗಿರುವವೋ, ಅವುಗಳಿಂದ ಮೋಕ್ಷವು ಸಾಧಿಸುವದೋ? ಎಂಬದನ್ನು ಹಿಂದುಗಡೆ ನೋಡೋಣವಂತೆ ; ಸದ್ಯಕ್ಕೆ ಕಥೆಯನ್ನಂಶು ಕೇಳು.

ಕಾತ್ಯಾಯನಿ -- ಹಾಗೆ ಆಗಲಿ ಹೇಳು , ದುರ್ದೈವಿಯಾದ ಆ ಹೆಣ್ಣು ಸಿಂಹವು

ತನ್ನ ಮರಿಯ ಲಾಲನ-ಪಾನವ, ಹಾಗು ಬಾಲಕ್ರೀಡೆಯ ಸುಖವನ್ನು ಅನುಭವಿಸು ಪದಕ್ಕಾಗಿ ಬದುಕಿ ಉಳಿಯಲಿಲ್ಲ. ಹು ಮುಂದೇನಾಯಿತು ?

ಮೈತ್ರೇಯಿ (ನಕ್ಕು) – ಒಳ್ಳೇದು , ನೀನುದಂತೆಯೇ ಆಗಲಿ, ಆ ಹಿಂದಿ