ಪುಟ:ನನ್ನ ಸಂಸಾರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಂಕರಕಥಾಸಾರ

            ೩೯
                        ಅಷ್ವಮವಲ್ಲರೀ 
    
                ಉಗ್ರಭೈರವ ವಧಾದಧೋ ಘೃಣಾಂ |
                ವೀಕ್ಷ್ಯ ಪದ್ಮಚರಣೇ ನೃಸಿಹ್ಮಚಾಮ್ || 
                ಶಂತೋಕ್ಷಿಪಧಗೊ ನೃಕೇಸರೀ |
                ಶಂಕರಸ್ಯ ಪುರತಸ್ತಿರೋದಧೇ |

          ಚಾರ್ಯರು ಶ್ರೀಶೈಲ ಪ್ರಾಂತ್ಯದಲ್ಲಿರುವಾಗ ರಾವಣನಂತೆ ಸಾಧು
          ವೇಷವನ್ನು ಧರಿಸಿಕೊಂಡಿದ್ದಂಧ ಉಗ್ರಭೈರವನೆಂಬ ಕಾಪಾಲಿಯು 
          ಭಾಷ್ಯಪ್ರವಚನಾನಂತರದಲ್ಲಿ ಏಕಾಂತದಲ್ಲಿ ಕುಳಿತಿರತಕ್ಕ ಗುರುಗ
          ಳನ್ನು ನೋಡಿ « ಗುರುಗಳೇ ! ತಮ್ಮ ಸಾರ್ವಜ್ಞ, ಸೌಶಿಲ್ಯ,
          ದಯಾಳುಗುಣಗಳನ್ನು ಕೇಳಿ ತಮ್ಮನ್ನು ನೋಡಬೇಕೆಂದು ಇಲ್ಲಿಗೆ 
          ಬಂದಿದೇನೆ. ನೀವು ಸ್ವದೇಹಾಭಿಮಾನವನ್ನು ಬಿಟ್ಟು 
          ಪರೋಪಕಾರಾರ್ಥವಾಗಿ ಅವತರಿಸಿರುವಿರಿ. ಸಮಸ್ತವಾದ 
          ಕಲ್ಯಾಣಗುಣಗಳಿಗೆ ಸ್ಥಾನಭೂತರೂ, ಪೂರಾಪರವಿವೇಚನಶೀಲರೂ ಆದ 
          ನಿಮ್ಮಂಥಾವರುಗಳಲ್ಲಿ ಬಂದ ಕಾರ್ಯಾರ್ಥಿಗಳ ಕಾರ್ಯವು 
          ಅಸಾಧ್ಯವಾಗಿದ್ದರೂಕೂಡ ಜಯಶಾಲಿಗಳಾಗದೆ ಹಿಂತಿರುಗುವುದಿಲ್ಲ. 
          ನಾನು ಸಶರೀರನಾಗಿ ಕೈಲಾಸಕ್ಕೆ ಹೋಗಬೇಕೆಂದು ಕಪಾಲಿಯನ್ನು 
          ಒಂದುನೂರು ವರುಷ ತಪವಂಗೈಯಲು ರುದ್ರನು ಪ್ರತ್ಯಕ್ಷನಾಗಿ 
          ವಾಂಛಿತವೇನೆಂದನು.
             ಆಗ ನಾನು ನನ್ನಭಿಲಾಷೆಯಂ ತಿಳಿಸಲು ಕಾಪಾಲಿಯು ನೀನು
          ಪಟ್ಟಾಭಿಷಿಕ್ತ ನಾದ ಒಬ್ಬ ಚಕ್ರವರ್ತಿಯ ತಲೆಯನ್ನಾಗಲೀ, ಅಥವಾ 
          ಬ್ರಹ್ಮವೇತ್ತೃವಾದ ಪರಿವ್ರಾಜ ಕನ ತಲೆಯನ್ನಾಗಲೀ, ನನಗೆ ಅಗ್ನಿಮ
          ಖೇನ ಸಮರ್ಪಣೆಮಾಡಿದರೆ ನಿನ್ನ ಅಭಿಲಾಷೆಯು ಪೂರ್ತಿಯಾಗುತ್ತದೆ' 
          ಎಂದನು. ನಾನು ಅದರಂತೆ ಹುಡುಕುತ್ತಾಬಂದೆನು. ಚಕ್ರವರ್ತಿಯ 
          ತಲೆಯು ಸಿಕ್ಕುವುದು ದುರ್ಲಭವು, ದೇಹಾಭಿಮಾನವಿಲ್ಲದ ನಿಮ್ಮಂಥ 
          ವಿರಕ್ತರಿಗೆ ದೇಹದಿಂದ ಪ್ರಯೋಜನವಿಲ್ಲವಷ್ಟೆ? ಆದ್ದರಿಂದ ನೀವು ತಮ್ಮ
          ತಲೆಯನ್ನು ಅನುಗ್ರಹಿಸಬೇಕು. ದಧೀಚಿ ಮುಖ್ಯರಾದ ಕೆಲವರು
          ಕ್ಷಣಿಕವಾದ ಈ ಶರೀರವನ್ನು ಯಶಶ್ಯರೀರಕ್ಕೋಸ್ಕರ ಅರ್ಪಣೆ 
          ಮಾಡಲಿಲ್ಲವೇ ?” ಎಂದನು.
              ಆಗ ಆಚಾರ್ಯರು " ಎಲೈ ಕಾಪಾಲಿಕನೇ ! ನನಗೆ ಈ 
         ದೇಹದಲ್ಲಭಿಮಾನವಿಲ್ಲದಿದ್ದರೂ ನಮ್ಮ ಶಿಷ್ಯರಿಗೆ ಬಹಳ 
         ಭಕ್ಷ್ಯಭಿಮಾನಗಳುಂಟು. ಅವರು ಇದನ್ನು ತಿಳಿ