ಕಾಯಗೊಂಡ ಮಾನವರಂತೆ ಕೈಗೆ

ವಿಕಿಸೋರ್ಸ್ದಿಂದ



Pages   (key to Page Status)   


ಕಾಯಗೊಂಡ ಮಾನವರಂತೆ ಕೈಗೆ ಸಿಲುಕ. ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ. ಕಾಂಬಡೆ ಕಂಗಳತೆಯಲ್ಲ
ಕೇಳುವಡೆ ಕಿವಿಗಳತೆಯಲ್ಲ. ಗುಹೇಶ್ವರನ ನಿಲುವು ಬರಿಯ ಸ್ತೋತ್ರಕ್ಕೆ ನಿಲುಕದು. ಕಾಣಾ ಸಿದ್ಧರಾಮಯ್ಯಾ.