Pages (key to Page Status)
ಕೆಳಗೇಳು ಭುವನಂಗಳಿಲ್ಲದಂದು ಮೇಲೇಳು ಭುವನಂಗಳಿಲ್ಲದಂದು_ ಅಂದು ಆದ ಗುರು ಅಂದು ಆದ ಲಿಂಗ ಅಂದು ಆದ ಜಂಗಮ ಅಂದು ಆದ ಪ್ರಸಾದ ಅಂದು ಆದ ಪಾದೋದಕ. ಇಂದಿನದಾವುದೂ ಹೊಸತಿಲ್ಲಯ್ಯಾ. ಶಶಿಧರಂಗೆ ವೃಷಭನಾಗಿದ್ದಂದು ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.