ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು

ವಿಕಿಸೋರ್ಸ್ದಿಂದ



Pages   (key to Page Status)   


ಕೆಳಗೇಳು ಭುವನಂಗಳಿಲ್ಲದಂದು
ಮೇಲೇಳು ಭುವನಂಗಳಿಲ್ಲದಂದು
_ ಅಂದು ಆದ ಗುರು
ಅಂದು ಆದ ಲಿಂಗ
ಅಂದು ಆದ ಜಂಗಮ
ಅಂದು ಆದ ಪ್ರಸಾದ
ಅಂದು ಆದ ಪಾದೋದಕ. ಇಂದಿನದಾವುದೂ ಹೊಸತಿಲ್ಲಯ್ಯಾ. ಶಶಿಧರಂಗೆ ವೃಷಭನಾಗಿದ್ದಂದು ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.