ನಿರಾಕಾರ ಪರವಸ್ತು ತಾನೇ

ವಿಕಿಸೋರ್ಸ್ದಿಂದ



Pages   (key to Page Status)   


ನಿರಾಕಾರ ಪರವಸ್ತು ತಾನೇ ಸದ್ರೂಪು ಚಿದ್ರೂಪು ಆನಂದ ಸ್ವರೂಪವೆಂದಾಯಿತ್ತು ನೋಡಾ. ಸತ್ತೇ ಶರಣಲಿಂಗವೆಂದೆ. ಚಿತ್ತೇ ಶಕ್ತಿಭಕ್ತಿಯೆಂದೆ. ಆನಂದವೇ ಹಸ್ತ ಮುಖ ಪದಾರ್ಥ ಪ್ರಸಾದವೆಂದೆ. ಹೀಂಗೆಂಬುವದು ವೇದ ಪ್ರಮಾಣವಲ್ಲ; ಆಗಮ ಪ್ರಮಾಣವಲ್ಲ; ಸ್ಮ ೃತಿ ಪ್ರಮಾಣವಲ್ಲ. ಅದೇನು ಕಾರಣವೆಂದರೆ
ಇದರಿಂದ ನಾನರಿದುದಿಲ್ಲ. ಮತ್ತೇತರಿಂದರಿದೆನೆಂದರೆ
ಶಿವಪ್ರಸನ್ನೇತಿಪ್ರಸಾದದಿಂದರಿದು ಕಣ್ದೆರೆದು
ಸಚ್ಚಿದಾನಂದ ನಿತ್ಯ ಪರಿಪೂರ್ಣ ಪರಶಿವತತ್ತ್ವ ಸ್ವರೂಪವೇ ಶರಣನೆಂಬ ವಾಕ್ಯ ಸತ್ಯ ನೋಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.