ಪುಟ:ಅಜಿತ ಕುಮಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾರಕನೂ ಕ್ಷಾಲಕನೂ,

ಕೂಡಲೆ ಅಜಿತನು ಮತ್ತೊಂದು ಬಲವಾದ ಏಟನ್ನು ಇಟ್ಟನು. ದಾರಕನು
ಬೋರ್ಲ ಬಿದ್ದು ಬಿಟ್ಟನು! ಅಜಿತನು ಅವನ ಬೆನ್ನಿನ ಮೇಲೆ ಮೊಳ
ಕಾಲೂರಿ, ಅವನ ಹಗ್ಗದಿಂದಲೇ ಅವನನ್ನು ಬಿಗಿದು, ಇತರರಿಗೆ ಯಾವ
ಗತಿಯನ್ನು ಕಾಣಿಸಿರುವೆಯೊ ಆ ದಶೆಯೇ ನಿನಗೂ ಸಂಭವಿಸಲಿ' ಎಂದು
ಹೇಳಿ, ಹತ್ತಿರವಿದ್ದ ಎರಡು ದೇವದಾರು ಮರಗಳನ್ನು ಬಗ್ಗಿಸಿ, ಅವನನ್ನು
ಅವುಗಳಿಗೆ ಕಟ್ಟಿದನು. ದಾರಕನು ಬಹಳವಾಗಿ ಬೇಡಿಕೊಂಡನು; ಅಜಿತ
ನಿಗೆ ಕರುಣೆ ಹುಟ್ಟಲಿಲ್ಲ. ಬಾಗಿಸಿದ ಮರಗಳು ನೆಟ್ಟಗಾದುವು ; ದಾರ
ಕನ ಜೀವನವು ಸಮಾಪ್ತವಾಯಿತು. ಅವನ ಅವಸ್ಥೆಯು ತೀರಿದಂತಾ
ಯಿತು. ಆ ಮೇಲೆ ಅಜಿತನು ಆ ಹೆಣವನ್ನು ಕಾಗೆಗಳ ಪಾಲುಮಾಡಿ,
ಮುಂದಕ್ಕೆ ನಡೆದನು.

ತರುವಾಯ ಅಜಿತನು ಅನೇಕ ಗಿರಿಗಹ್ವರಗಳನ್ನು ದಾಟಿ, ಅಗಲ
ಕಿರಿದಾದ ಇನ್ನೊಂದು ಸ್ಥಳಕ್ಕೆ ಬಂದನು. ಬಲಗಡೆ ಇದ್ದ ಅಗಾಧವಾದ
ಸಮುದ್ರವನ್ನು ನೋಡಲಾಗಿ, ಜಮ್ಮೆಂದು ಕಣ್ಣು ಕತ್ತಲೆ ಬರುತಿತ್ತು.

ಈ ಮಾರ್ಗವಾಗಿ ಸ್ವಲ್ಪ ದೂರ ಹೋದ ತರುವಾಯ ಒಂದು
ಬುಗ್ಗೆಯು ಕಾಣಿಸಿತು. ಅದರ ಹತ್ತಿರವೇ ಒಂದು ದೊಡ್ಡ ಒನಕೆಯನ್ನು
ಹಿಡಿದುಕೊಂಡು ಕಾಲಕಾಸುರನು ಕುಳಿತಿದ್ದನು ; ಪ್ರಯಾಣಿಕರನ್ನು
ಅಡ್ಡಯಿಸಬೇಕೆಂದು ದಾರಿಗೆ ಅಡ್ಡವಾಗಿ ಕಲ್ಲುಗಳನ್ನು ಒಟ್ಟಿದ್ದನು.

ಆತನನ್ನು ಕಂಡೊಡನೆ ಅಜಿತನು ಆರ್ಭಟಿಸುತ್ತ, “ಎಲಾ, ಕೂರ್ಮ
ಪೋಷಕ, ಇಂದು ಕೂಡ ಪಾದಪ್ರಕ್ಷಾಲನ ಆಗಬೇಕೆಂದಿರುವೆಯಾ?”
ಎಂದು ಕೇಳಿದನು.

ತತ್‌ಕ್ಷಣವೆ ಕಾಲಕನು ಎದ್ದು ನಿಂತು, “ಹೌದು, ನನ್ನ ಕೂರ್ಮ
ನಿಗೆ ಬಲು ಹಸಿವೆಯಾಗಿದೆ; ನನ್ನ ಪಾದಗಳಿಗೂ ಕ್ಷಾಲನವು ಆವಶ್ಯಕ”
ಎಂದು ಹೇಳುತ್ತ, ಕಲ್ಲಿನ ರಾಶಿಗೆ ಬೆನ್ನು ಮಾಡಿ ನಿಂತುಕೊಂಡು, ಮುಸಲ
ವನ್ನು ಎತ್ತಿದನು.