ಪುಟ:ಅಜಿತ ಕುಮಾರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

IV

ದಾರಕನೂ ಕ್ಷಾಲಕನೂ

ಜಿತನು ಕುರುಬರನ್ನು ಬಿಟ್ಟು ಬಹಳ ದೂರ ಹೋದನು. ಆಗ
ಎಡಗಡೆ ಎತ್ತರವಾದ ಗಿರಿಗಳೂ ಬಲಗಡೆ ಸಮುದ್ರವೂ ಕಾಣಿಸಿದುವು.
ಕೂಡಲೆ ಕುರುಬರ ಮಾತುಗಳು ನೆನಪಿಗೆ ಬಂದು, ದಾರಕನು ಎಂದು
ಬರುವನೋ ಅವನ ದಾರಿಯನ್ನು ಎಂದು ನೋಡುವೆನೋ ಎಂದು ಹಳಹಳಿಸು
ತ್ತಿದ್ದನು. ಸ್ವಲ್ಪ ದೂರ ಹೋದ ಮೇಲೆ ದೇವದಾರು ವೃಕ್ಷಗಳ ನಡುವೆ
ಮಾರ್ಗವು ತುಂಬ ಅಗಲಕಿರಿದಾಗಿದ್ದಲ್ಲಿ, ಯಾರೋ ಒಬ್ಬನು ಒಂದು
ಕಲ್ಲಿನ ಮೇಲೆ ಕುಳಿತಿದ್ದುದನ್ನು ಕಂಡನು. ಆತನ ತೊಡೆಯ ಮೇಲೆ
ತಾಳೆಯ ಮರದ ಗದೆಯೊಂದಿತ್ತು. ಹಿಂದುಗಡೆ ಮರಗಳ ತುದಿಗಳಲ್ಲಿ
ಮನುಷ್ಯರ ಅಟ್ಟೆಗಳು ಜೋಲಾಡುತಿದ್ದುವು.

ಆತನ ಹತ್ತಿರ ಹೋಗಿ ಅಜಿತನು, “ಎಲಾ, ದಾರಕ, ಈ ಎರಡು
ದೇವದಾರು ಮರಗಳನ್ನು ನನಗಾಗಿ ಸಿದ್ಧ ಮಾಡಿಟ್ಟಿರುವೆಯಾ ?” ಎಂದು
ಕೇಳಿದನು.

ದಾರಕನು ತಟ್ಟನೆ ಎದ್ದು ನಿಂತು, ಮರಗಳನ್ನು ಬೆರಳಿನಿಂದ ತೋರಿ
ಸುತ್ತ, “ನನ್ನ ಜಿಂದಿಗೆಯು ಬರಿದಾಗುತ್ತ ಬಂದಿದೆ. ಆದುದರಿಂದ ನಿನ
ಗಾಗಿಯೇ ಈ ಎರಡು ಮರಗಳನ್ನು ಸಿದ್ಧ ಮಾಡಿಟ್ಟಿದ್ದೇನೆ” ಎಂದು ಹೇಳಿ,
ಗದೆಯನ್ನು ಎತ್ತಿಕೊಂಡು ಬಡೆಯುವುದಕ್ಕೆ ಬಂದನು.

ಇಬ್ಬರೂ ಕಾಳಗಕ್ಕೆ ಅನುವಾಗಿ, ಅವರ ಆರ್ಭಟವು ಕಾಡುಗುಡ್ಡ
ಗಳಲ್ಲಿ ಪ್ರತಿಧ್ವನಿಸಿತು. ಮರಕ್ಕಿಂತ ಲೋಹವೆ ಗಟ್ಟಿಯಷ್ಟೆ ; ಕಂಚಿನ
ಪೆಟ್ಟನ್ನು ತಾಳಲಾರದೆ ಮರದ ದೊಣ್ಣೆಯು ನುಚ್ಚು ನೂರಾಗಿ ಹೋಯಿತು!