ಪುಟ:ಅಜಿತ ಕುಮಾರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ದಾರಕನೂ ಕ್ಷಾಲಕನೂ.


ಆದರೆ ಕೂರ್ಮನು ಅವನನ್ನು ತಿಂದಿತೊ ಇಲ್ಲವೊ ಹೇಳಬರುವುದಿಲ್ಲ. ನೆಲವೂ ಜಲವೂ ಆತನ ದೇಹವನ್ನು ಮುಟ್ಟಲೊಲ್ಲವು. ಅದು ಅಷ್ಟು ತುಚ್ಛವಾದುದು ! ಆದುದರಿಂದ ಸಮುದ್ರವು ಅದನ್ನು ದಡಕ್ಕೆ ಎತ್ತಿಹಾಕಿತಂತೆ ; ದಡವು ಪುನಃ ಸಮುದ್ರಕ್ಕೆ ತಳ್ಳಿಬಿಟ್ಟಿತಂತೆ ! ಹೀಗೆಯೆ ನಡೆಯುತ್ತಿರಲು ಕೊನೆಗೆ ಕಡಲ ಅಲೆಗಳು ಸಿಟ್ಟಿನಿಂದ ಅದನ್ನು ಆಕಾಶಕ್ಕೆ ಹಾರಿಸಲು, ಅಲ್ಲಿಯೇ ಅದು ಯಾವುದೊಂದೂ ಸಂಸ್ಕಾರವು ಇಲ್ಲದೆ, ಬಹಳ ಕಾಲದ ವರೆಗೆ ಹಾಗೆಯೇ ಇದ್ದು, ಕೊನೆಗೆ ದೊಡ್ಡದೊಂದು ಶಿಲೆಯಾಗಿ ಹೋಯಿತಂತೆ, ಆ ಬಂಡೆಯು ಮಾತ್ರ ಈಗಲೂ ಆ ಸ್ಥಳದಲ್ಲಿ ಕಾಣಿಸುತ್ತಿದೆ.