ಪುಟ:ಅಜಿತ ಕುಮಾರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ. ೨೭

ಹೊತ್ತು ಮುಳುಗಿದ ಮೇಲೆ ಹೋಗುವುದೂ ಸರಿಯಲ್ಲ. ತಾವು ಸಿಕ್ಕಿ
ದುದು ಒಳ್ಳೆಯದಾಯಿತು. ಅದರಲ್ಲಿಯೂ, ನನಗೆ ಪರಸ್ಥಳದವರನ್ನು
ಕರೆದುಕೊಂಡು ಹೋಗಿ ಊಟ ಉಪಚಾರಗಳನ್ನು ಮಾಡಿಸಿ, ಅವ
ರಿಂದ ಇತರ ದೇಶಗಳ ವೃತ್ತಾಂತವನ್ನು ಕೇಳುವುದೆಂದರೆ ತುಂಬ ಇಷ್ಟ,
ಈಗ ನಮ್ಮ ಅರಮನೆಗೆ ಹೋಗೋಣ ; ತಾವು ಒಂದಿಷ್ಟು ಉಂಡುಕೊಂಡು
ಸುಖವಾಗಿ ನಿದ್ದೆ ಹೋಗಬಹುದು. ನಮ್ಮಲ್ಲಿ ಒಂದು ಹಾಸಿಗೆ ಇದೆ; ಬಂದ
ಬಂದವರು ಅದನ್ನು ಹೊಗಳುತ್ತಾರೆ; ಅಂಥ ಹಾಸನ್ನು ಯಾರೂ ಎಲ್ಲಿ
ಯೂ ನೋಡಲಿಲ್ಲ ವಂತೆ! ಅದರಲ್ಲಿ ಮಲಗುವವನು ನಿಡುಮೈಯವನಾಗಲಿ,
ಗುಜ್ಜಾರಿಯೇ ಆಗಲಿ, ಹಾಸಿಗೆಯು ಅವನಿಗೆ ಹಾಳಿತವಾಗುವುದು ; ಒಂದೆ
ಳ್ಳಿನಷ್ಟು ಕೂಡ ಹೆಚ್ಚು ಕಡಮೆ ಬಾರದು ! ಇನ್ನು ಅದರ ಮೇಲೆ ಒಬ್ಬನು
ಒರಗಿದನೆಂದರೆ, ಅಂಥ ನಿದ್ರೆಯು ಆತನಿಗದು ಮೊದಲು ಎಂದೂ ಹತ್ತಿರ
ಲಾರದು,” ಎಂದು ಹೇಳಿ ಅಜಿತನ ಕೈಯನ್ನು ಹಿಡಿದುಕೊಂಡು, ಆತನನ್ನು
ಮುಂದರಿಸಲೀಸದೆ, ತಂಗುವುದಕ್ಕೆ ಒತ್ತಾಯ ಮಾಡಿದನು.

ಅಜಿತನಿಗೆ ಆ ದಿನ ಅಲ್ಲಿ ಉಳುಕೊಳ್ಳುವುದಕ್ಕೆ ಸಂತೋಷವಿದ್ದಿಲ್ಲವಾ
ದರೂ, ಅಂಥ ದೊಡ್ಡ ಮನಸ್ಸಿನವನ ಮಾತನ್ನು ತೆಗೆದುಹಾಕುವುದು ಸರಿ
ಯಲ್ಲ ಎಂದು ಕಂಡಿತು. ಅದಲ್ಲದೆ ಆ ಅದ್ಭುತವಾದ ಹಾಸಿಗೆಯನ್ನು
ಒಂದು ಸಲ ನೋಡಬೇಕೆಂಬ ಕುತೂಹಲವೂ ಇತ್ತು. ತುಂಬ ಬಳಲಿದ್ದುದ
ರಿಂದ ಹಸಿವೂ ಆಗಿತ್ತು, ಆದರೆ ಆ ಮನುಷ್ಯನನ್ನು ಕಂಡರೆ ಅಜಿತನಿಗೆ
ಏನೂ ಕಾಣುತಿತ್ತು. ಏನೆಂದು ತಿಳಿಯದು. ಅವನ ಸ್ವರವು ಅಷ್ಟೊಂದು
ಕರ್ಕಶವಾಗಿಯೂ ಇರಲಿಲ್ಲ, ಮೃದುವಾಗಿಯೂ ಇರಲಿಲ್ಲ; ಕಪ್ಪೆಯ
ಗೋ೦ಕರಿನಂತಿತ್ತು. ಕಣ್ಣುಗಳಲ್ಲಿ ದಯೆತೋರುತಿದ್ದ ರೂ ರಕ್ತಚ್ಛಾಯೆ
ಇರಲಿಲ್ಲ. ಹೇಗೂ ಇರಲಿ, ತಾನು ಅವನ ಸತ್ಕಾರಗಳನ್ನು ಕೈಕೊಳ್ಳದೆ
ಇರಬಾರದೆಂದು ಅಜಿತನು ಅರಮನೆಗೆ ಹೊರಟನು.

ಅರಮನೆಗೆ ಹೋಗುವ ದಾರಿಯಲ್ಲಿ ಬಂಡೆಗಳೂ ಕಣಿವೆಗಳೂ ಬಹಳ
ವಾಗಿದ್ದುವು. ಒಂದು ಮರವಾಗಲಿ ಪೊದೆಯಾಗಲಿ ಎಲ್ಲಿಯೂ ಕಣ್ಣಿಗೆ