ಪುಟ:ಅಜಿತ ಕುಮಾರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

ಕನು ಸಂತೋಷದಿಂದ ಆತನನ್ನು ಹರಸಿ, “ಅಯ್ಯಾ ನೀನು ಯಾರು ?
ಈ ಮಾರ್ಗವಾಗಿ ಎಲ್ಲಿಗೆ ಹೋಗುತ್ತಿರುವೆ ?” ಎಂದು ಪ್ರಶ್ನೆ ಮಾಡಿದನು.

ಅದಕ್ಕೆ ಅಜಿತನು, “ನಾನು ಯಾರೆಂಬುದು ನನ್ನ ಹೆತ್ತವರಿಗೆನೇ
ಗೊತ್ತು ; ಈ ಮಾರ್ಗವಾಗಿ ಬರುವುದಕ್ಕೆ ಕಾರಣವೇನೆಂದರೆ, ಒಬ್ಬ
ಶ್ರೀಮಂತನು ನನ್ನನ್ನು ಊಟಕ್ಕೆ ಕರೆದಿದ್ದಾನೆ; ಆತನಲ್ಲಿ ಒಂದು ಅಪೂರ್ವ
ವಾದ ಹಾಸಿಗೆ ಇದೆಯಂತೆ ! ಅದನ್ನು ಅವನು ಇಂದು ನನಗೆ ಕೊಡುವ
ನಂತೆ !' ” ಎಂದು ಹೇಳಿದನು.

ತತ್‌ಕ್ಷಣವೆ ವೃದ್ಧನು ತನ್ನ ಎರಡು ಕೈಗಳನ್ನು ಜೋಡಿಸಿ ಹಿಡಿದು
ಕೊಂಡು, “ಅಯ್ಯಯ್ಯೋ ! ಸಾಯುವುದಕ್ಕೆ ಹೊರಟಿರುವೆ! ಎಲಾ,
ಮಾರಕನೆ ! ನಿನ್ನ ಹೊಟ್ಟೆ ಇನ್ನೂ ತುಂಬಲಾರದೆ ?” ಎಂದು ಅರಚಿ
ಕೊಂಡು, “ಅಯ್ಯಾ, ಯುವಕನೆ, ನೀನು ಚಿತ್ರವಧೆಯನ್ನು ಅನುಭವಿಸಲು
ಹೊರಟಿರುವೆ, ಬಲ್ಲೆಯಾ ? ನಿನ್ನನ್ನು ಕಂಡವನು ಮಾರಕನೆಂಬ ಪಾತಕಿ ;
ಜನರನ್ನು ಕೊಲ್ಲುವವನು! ಅವನ ಕೈಗೆ ಸಿಕ್ಕಿದವರೆಲ್ಲರೂ ಮೃತ್ಯುವಿನ
ಬಾಯಿಗೆ ತುತ್ತಾಗಿರುವರು. ಹಾಸಿಗೆಯು ಎಂಥವರಿಗೂ ಸರಿ
ಯಾಗುವುದು ಎಂಬುದು ನಿಜ! ಆದರೆ ಅದರ ಮೇಲೆ ಮಲಗಿದವನು
ಮತ್ತೆ ಏಳುವುದಿಲ್ಲ !” ಎಂದು ಹೇಳಿದನು.

ಅಜಿತನು ಆಶ್ಚರ್ಯದಿಂದ 'ಅದೇಕೆ ಹಾಗೆ' ಎಂದು ಕೇಳಲು, ಆ
ಮುದುಕನು, “ಏಕಂದರೆ, ಆ ಕ್ರೂರಿಯು ಉದ್ದವಾಗಿದ್ದವರ ಕಾಲು
ಗಳನ್ನು ಕತ್ತರಿಸಿ ಹಾಳಿತಕ್ಕೆ ತರುವನು, ಗಿಡ್ಡಗಿದ್ದವರ ದೇಹವನ್ನು
ಉದ್ದಕ್ಕೆ ಎಳೆದು ಸರಿಮಾಡುವನು ! ಇದುವರೆಗೆ ಬದುಕಿಕೊಂಡವನು
ನಾನೊಬ್ಬನೇ ಸರಿ ! ನನ್ನ ದೇಹವು ಅದಕ್ಕೆ ಸರಿಯಾಗಿ ಎರಕ ಹೊಯಿ
ದಂತಿತ್ತು. ಆದುದರಿಂದ ನನ್ನನ್ನು ಆ ಚಿತ್ರವಧೆಯಿಂದ ಉಳಿಸಿದನು.
ಇಂದಿಗೆ ಏಳು ವರುಷಗಳು ಸಂದುಹೋದುವು. ನಾನು ಕೂಡ ಒಂದು
ಸಲ ಶ್ರೀಮಂತನಾದ ವರ್ತಕನಾಗಿದ್ದೆ ! ಆದರೆ ಈಗ ಮಾತ್ರ ಎಲ್ಲರಿಗೂ