ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

L8 ಯವನ ಯಾಮಿನೀ ವಿನೋದ, ಎಂಟು ತೊರೆದು ಬಿಟ್ಟುದು, ಆಶ್ಚರ್ಯವಾಗಿದೆಯಲ್ಲಾ ! ಬಿಲ್ಲುಬಾಣಗಳನ್ನು ಬಿಸುಟು, ಇಲ್ಲಿಗೆ ಬಂದುದಕ್ಕೆ ಕಾರಣವೇನು ? ನೀನು ನೆಲದಮೇಲೆ ಬಿ ದು ಕೈ ಕಾಲುಗಳನ್ನು ಮೈ ಮಾರುಗಳನ್ನು ಮಣ್ಣು ಮಾಡಿಕೊಂಡು, ಇಂತಹ ದುರವಸ್ಥೆಯಲ್ಲಿ ಬಂದಿರುವೆಯಲ್ಲಾ ! ಎಂದು ಅಂಗಲಾಚಿದ ನು. ನಾನಾದರೆ, ನಡೆದ ಸಂಗತಿಯನ್ನೆಲ್ಲಾ ಹೇಳಿದ ಕೂಡಲೆ, ಆತನು ನನ್ನ ಪ್ರಾಣವು ಉಳಿದು ನಾನು ಸುರಕ್ಷಿತವಾಗಿ ಮನೆಗೆ ಬಂದುದಕ್ಕಾಗಿ, ಸಂತೊಸಿಸಿ, ಭಗವಂತನನ್ನು ಪ್ರಾರ್ಥಿಸಿ, ನನ್ನನ್ನು ಆಲಿಂಗಿಸಿಕೊಂಡು ಸವಧಾನಮಾಡಿ, ಮಾರನೆಯ ದಿನ ಬೆಳಿಗ್ಗೆ ಆನೆಯನ್ನು ಹತ್ತಿ ನನ್ನನ್ನು ಸಂಗಡ ಕರೆದುಕೊಂಡು, ಅರಣ್ಯಕ್ಕೆ ಹೋಗಿ, ಅಲ್ಲಿ ನಡೆದಿರುವ ಸಂಗತಿ ಯನ್ನು ಕಣ್ಣಾರೆ ನೋಡಿ, ಆಶ್ಚರ್ಯಯುಕ್ತನಾಗಿ, ನಾವು ಮೊದಲು ಹೂಳಿದ್ದ ಆನೆಯ ಕೊಂಬುಗಳನ್ನೆಲ್ಲಾ ಕಿತ್ತು ತೆಗೆದುಕೊಂಡು, ನನ್ನನ್ನು ನೋಡಿ ಅಯ್ಯಾ ! ಶರನಾದ ಸಿಂದುಬಾದನೇ ! ನೀನು ನನ್ನ ಐಶ್ವರ್ಯ ವನ್ನು ವೃದ್ಧಿಮಾಡುವುದಕ್ಕೆ ಭಗವಂತನಿಂದ ಕಳುಹಿಸಲ್ಪಟ್ಟ ಮಾನವ ನಾದುದರಿಂದ, ನಾನು ನಿನ್ನನ್ನು ಬಹಳವಾಗಿ ವಂದಿಸುವೆನಲ್ಲದೆ, ನಿನ್ನ ಆಯುರಾರೋಗ್ಯ ಐಶ್ವರ್ಯಗಳು ವೃದ್ಧಿಯಾಗಲೆಂದು, ಭಗವಂತನಲ್ಲಿ ಪ್ರಾರ್ಥಿಸುವೆನು. ಇನ್ನು ಮೇಲೆ ನಿನ್ನನ್ನು ಸೇವಕನಂತೆ ಭಾವಿಸದ್ರನನ್ನ ಯಜಮಾನನಂತೆ ತಿಳಿದುಕೊಂಡಿರುವೆನೆಂದು ಹೇಳಿ, ತನ್ನ ಗೃಹಕೃತ್ಯದ ವಿಚಾರವನ್ನೆಲ್ಲಾ ನನಗೆ ತಿಳಿಯಹೇಳಿದನು. ಅಯಾ ! ನಾನಿದುವರೆಗೂ, ಆನೆಯದಂತಗಳನ್ನು ಸಂಪಾದಿಸಿ ಕೊಳ್ಳುವುದಕ್ಕಾಗಿ, ಅನೇಕ ಜನ ಚಾರಕರನ್ನು ಕಳುಹಿಸಿ, ಅವರ ಖಾ ಣಗಳನ್ನು ಕಳೆದುಕೊಂಡುದನ್ನು ಕಂಡನೇ ಹೊರತು, ಅವರು ಒಂದಾನೆ ಯನ್ನಾದರೂ ಹಿಡಿದುದನ್ನು ನಾನು ನೋಡಲಿಲ್ಲ. ಭಗವಂತನ ದಯದಿಂ ದ ಈ ಸಂವತ್ಸರದಲ್ಲಿ ನೀನು ಮಾಡಿದ ಉಪಕಾರದಿಂದ, ನನಗೆ ತುಂಬ ಹಣವು ದೊರಕುವಂತಾಯಿತು. ಇದಕ್ಕಾಗಿ ನಾನು ತುಂಬ ಕೃತಜ್ಞ ನಾಗಿರುವನಲ್ಲದೆ, ನಿನ್ನಿಷ್ಟಾನುಸಾರವಾಗಿ ನಡೆದುಕೊಳ್ಳುವನು, ನೀನೇ ನನಗೆ ಇಲ್ಲಿಂದ ಮುಂದೆ ಯಜಮಾನನಾಗಿರುವೆ, ದಯಮಾಡಿ ನಿನ್ನಿಷ್ಟ ರ್ಥವನ್ನು ತಿಳಿಸೆಂದು ಬೇಡಿಕೊಂಡನು. ಆತನ ದಯಾಗುಣವನ್ನು ಕಂ ಡಾಣ, ಸಾವಾ ! ನನ್ನ ಸೆರೆಯನ್ನು ಬಿಡಿಸಿ, ನಾನು ಸ್ಥಳವನ್ನು ಸೇ