ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ V ೨ ಅ . - 108 - ನಸ್ಯಕರ್ಮ, ಭೋಜನ, ಅಭ್ಯಂಗ, ತಿಕ್ಕುವದು, ಸ್ನಾನ, ಇವೇ ಮೊದಲಾದ ವಾತಹರವಾದ ಉಪಚಾರಗಳನ್ನು ಪ್ರಮಾಣ ಮತ್ತು ಕಾಲ ನೋಡಿಕೊಂಡು ನಡಿಸತಕ್ಕದ್ದು. ಎಲ್ಲಾ ಕ್ರಮ ಗಳೊಳಗೆ, ಆಸ್ಥಾಪನಾ ಮತ್ತು ಅನುವಾಸನ ಮಾಡುವದು ಅತಿ ಪ್ರಧಾನವಾದದ್ದೆಂತ ವೈದ್ಯರು ತಿಳಕೊಳ್ಳುತ್ತಾರ.

  • ಷರಾ ಆಸ್ಥಾಪನಾನುವಾಸನ ಕ್ರಮಗಳು ಆ XXII ನೇ ವಸ್ತಿವಿಧಿಯಲ್ಲಿ ವರ್ಣಿಸಲ್ಪಟ್ಟಿವೆ 12. ತದ್ವ್ಯಾದಿತ ಏವ ಪಕ್ವಾಶಯವನುಪ್ರವಿಶ್ಯ ಕೇವಲಂ ವೈಕಾರಿಕ ವಾತ ಮೂಲಂ ಛಿನ ತತ್ರಾವಜಿತ್ತೇ ವಾತೇsಪಿ ಶರೀರಾಂತರ್ಗತಾ ವಾತವಿಕಾರಾಃ ವಾಸನಗಳ ಪ್ರಶಾಂತಿಮಾಪದ್ಯಂತೇ | ಯಧಾ ವನಸ್ಪತೇರ್ಮೂಲೇ ಛಿನ್ನೇಸ್ಕಂಧಶಾಖಾವ

ಪ್ರಶಸ್ಸತೆ ರೋಹಕುಸುಮಫಲಪಲಾಶಾದೀನಾಂ ನಿಯತೋ ವಿನಾಶದ್ವತ್ | (ಚ. 111-12 ) ಹಾಗೆ ಆಸ್ಥಾಪನ ಮತ್ತು ಅನುವಾಸನರೂಪವಾಗಿ ಉಪಯೋಗಿಸಲ್ಪಟ್ಟ ಔಷಧವು, ಮೊದಲಾಗಿಯೇ ಪಕ್ಷಾಶಯವನ್ನು ಹೊಕ್ಕು ವಾತವಿಕಾರದ ಮೂಲವನ್ನೇ ಛೇದಿಸುತ್ತದೆ. ಮತ್ತು ಅಲ್ಲಿ ವಾತವು ಜಯಿಸಲ್ಪಟ್ಟಲ್ಲಿ, ಇಡೀ ಶರೀರದೊಳಗಿರುವ ವಾತವಿಕಾರಗಳೆಲ್ಲಾ ಶಾಂತವಾಗುತ್ತವೆ. ಒಂದು ವೃಕ್ಷದ ಬೇರನ್ನೇ ಕಡದ್ದಲ್ಲಿ, ಆ ವೃಕ್ಷದ ಮುಂಡ, ಗೆಲ್ಲು, ಚಿಗುರು, ಪುಪ್ಪ, ಫಲ, ಎಲೆ ಮುಂತಾದವುಗಳೆಲ್ಲಾ ಹ್ಯಾಗೆ ನಾಶವಾಗುತ್ತವೋ ಹಾಗೆ. 14. 13. ಪಿತ್ತ ಕಫಾದಿ ಪಿತ್ತಂ ಪಂಗುಃ ಕಫಃ ಪಂಗುಃ ಪಂಗವೋ ಮಲಧಾತವಃ | ಗಳ ಚಲನೆಗೆ ವಾಯುನಾ ಯತ್ರ ನೀಯಂತೇ ತತ್ರ ಗಚ್ಛಂತಿ ಮೇಘನತ್ || ವಾಯುವು | ಕಾರಣ (ಶಾ. 15 ) ಪಿತ್ತ, ಕಫ ಮತ್ತು ಮಲಧಾತುಗಳು ಪಂಗುಗಳು (ಚಲನಾಶಕ್ತಿ ಇಲ್ಲದವು). ವಾಯುವು ಅವುಗಳನ್ನು ಎಲ್ಲಿಗೆ ನಡಿಸುತ್ತದೋ, ಅಲ್ಲಿಗೆ ಅವುಗಳು ಮೋಡದಂತೆ ಹೋಗು ಇವೆ. ತತ್ರ ಬಲವದ್ವಿಗ್ರಹಾತಿವ್ಯಾಯಾಮ-ವ್ಯವಾಯಾಧ್ಯಯನ-ಪ್ರಪತನ-ಪ್ರಧಾವನ-ಪ್ರಪೀಡನಾಭಿಘಾತ - ಲಂಘನ - ಪ್ಲವನ - ತರಣ - ರಾತ್ರಿ ಜಾಗರಣ-ಭಾ ರಹರಣ - ಗಜ - ತುರಂಗ-ರಧ - ಪದಾತಿಚರ್ಯಾ - ಕಟು - ಕಪಾಯ- ತಿಕ್ತ ವಾತಪ್ರಕೋಪದ ರೂಕ್ಷ - ಲಘು - ಶೀತವೀರ್ಯ-ಶುಷ್ಕಶಾಕ - ವಲ್ಲೂರ- ವರಕೊದ್ದಾಲಕ ಕಾರಣಗಳು ಕೊರದೂಷ - ಶ್ಯಾಮಾಕ-ನೀವಾರ- ಮುದ್ದ - ಮಸೂರಾಢಕೀ - ಹರೇಣುಕಲಾಯ - ನಿಷ್ಟಾವಾನಶನ-ವಿಷಮಾಶನಾಧ್ಯಶನ-ವಾತ-ಮೂತ್ರ-ಪುರೀಷ - ಶುಕ್ರ-ಛರ್ದಿ - ಕವಧೂದ್ದಾರ - ಬಾಷ್ಪ - ವೇಗವಿಘಾತಾದಿಭಿರ್ವಿಶೇಪೈರ್ವಾ ಯುಃ ಪ್ರಕೋಪಮಾಪದ್ಯತೇ | (ಸು. 84 ) ಬಲವಂತರೊಂದಿಗೆ ಲಡಾಯಿ, ಅತಿಯಾದ ದೇಹದಣಿಕೆ, ಮೈದುನ, ಅಧ್ಯಯನ, ಬೀಳೋಣ, ಓಡೋಣ, ಪೀಡಿಸೋಣ, ಪೆಟ್ಟು, ಹಾರಿ ದಾಟೋಣ, ಹಾರಿ ನಡೆಯೋಣ,