ಪುಟ:ಇಂದ್ರವಜ್ರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

17 ತ್ಮವುಳ ಸಿಂಹಪೀಠವನ್ನು ಪಡೆಯಲು ಆತನೆಂತಹಪು ಇವಂತನೋ, ಗುಣವಂತನೋ ಪಾಠಕರೇ ಊಹಿಸಿ ಕೊಳ್ಳ ಬಹುದು. - ಆ ಸಿಂಹಪೀಠದಮೇಲೆ ಕುಳಿತು, ವಿಕ್ರಮಾದಿತ್ರಾ ಜನು ಬಹುಕಾಲ ಸುಖದಿಂದಲೂ ಧರ್ಮದಿಂದಲೂ ರಾಜ್ಯವನ್ನಾಳಿದನು, ಆತನ ಹೆಸರು ಎಲ್ಲೆಲ್ಲಿಯೂ ಪ್ರಸಿ ದ್ದ ವಾಯಿತು-ಮನೆಮನೆಯಲ್ಲಿನ ಹೆಂಗಸರಿಗೂ ಮಕ್ಕ ೪ಗೂ ಪರಿಚಿತವಾಯಿತು. ನಾಡಿನಲ್ಲೆಲ್ಲಾ ಆ ಹೆಸರನ್ನು ವಿಶಾಸದಿಂದಲೂ ವಯಾt-ದೆಯಿಂದಲೂ ನೆನೆ ಸದವರು ಒಬ್ಬರೂ ಇರಲಿಲ್ಲ ಮನುಷ್ಯನು ಎಷ್ಟು ದೊಡ್ಡವನಾದರೂ ಎಂದಾದ ರೊಂದುದಿನ ಸಾಯಲೇ ಬೇಕಪ್ಪೆ ? ಮಹಾನುಭಾವ ನಾದ ವಿಕ್ರಮಾರ್ಕನೂ ಒಂದು ದಿನ ಕಾಲಾಧೀನನಾ ದನು. ಆ ಶೋಕಮಯವಾದ ಸಮಯದಲ್ಲಿ ಆತನ ಮಂತ್ರಿ7 ,, ಪ್ರಜೆಗಳೂ ಸಭೆಸೇರಿ, ಮುಂದಿನ ಕಾರ್ಯಗಳನ್ನು ಕುರಿತು ಆಲೋಚಿಸುತ್ತಿರುವಲ್ಲಿ, ಆಕಾಶದಲ್ಲಿ ಯಾರೋ ಈರೀತಿ ಹೇಳಿದಂತಾಯಿ,ತು: “ಎಲೈ ಜನರೆ,ವಿಕ್ರಮನ ಪೀಠವನ್ನ ಡರಲು ಆತನಿಗೆ ಸಮನಾದ ರಾಜನಾರೂ ಭೂಮಿಯಮೇಲಿಲ್ಲವು ಆದಕಾ ರಣ ಅದನ್ನು ಒಳ್ಳೆಯ ಕ್ಷೇತ್ರದಲ್ಲಿ ಹೂತಿಡುವುದು,” ಈ ವಾಣಿಯನ್ನು ಕೇಳಿದ ಮಂತ್ರಿಜನರು, ಬಹುವಾಗಿ ಪ್ರ ಲಾವಿಸುತ್ತಾ, ದುಃಖದಲ್ಲಿ ಮುಳುಗಿದ ಮನಸ್ಸುಳ್ಳವರಾ ಗಿವಿಕ್ರಮನೀಠವನ್ನು ಅರಮನೆಯಿಂದೀಚೆಗೆ ಸಾಗಿಸಿ,