ಪುಟ:ಇಂದ್ರವಜ್ರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸನದ ಒಂಬತ್ತನೆಯ ಪುಲಿಕೆಯು ಆತನೊಡನೆ ಹೀಗೆಂದಿತು. (• ಕಾಂಚೀನಗರದಲ್ಲಿ ಬಲುರೂಪವತಿಯಾದ ತರುಣಿಯೊ ಬೃಳು, ರಾತ್ರಿ ಕಾಲದಲ್ಲಿ ಆಕೆಯು ನಿದ್ರೆಯಲ್ಲಿರುವಾಗ ಒಬ್ಬಾ ನೊಬ್ಬ ರಾಕ್ಷಸನು ಖಂದು ಆಕೆಯ ಮೈರಕ್ತವನ್ನ ಹೀರಿಹೋ? ಗುತ್ತಿದ್ದನು. ವಿಕ್ರಮನು ಈಸಮಾಚಾರವನ್ನರಿತು, ಅಲ್ಲಿಗೆ ಹೋಗಿ, ಆರಾಕ್ಷಸನ ಸಮಯವನ್ನು ಕಾದಿದ್ದು, ಅವನು ಬಂದೊಡನೆಯೆ ಅವನನ್ನು ಕೊಂದು, ಆಕೆಯ ವೀಣೆಯನ್ನು ತೊಲಗಿಸಿ, ಆಕೆಯನ್ನು ಅನುರೂಪನಾದ ವರನಿಗೆ ಕೊಡಿಸಿ ಮದುವೆ ಮಾಡಿಸಿ, ಅವರ ಸುಖಕ್ಕೆ ಕಾರಣನಾದನು. ಇಂ ತಹಸಂದರ್ಭವು ತಮ್ಮ ದೇನಾದರೂ ಇದ್ದರೆ ತಿಳಿಸಿರಿ. 2) ಭೋಜನು ಮುಖವನ್ನು ಹಿಂದಿರುಗಿಸಿದನು. ಹತ್ತನೆಯ ಸಾಲಭಂಜಿಕೆಯು ಹೀಗೆಂದಿತು, “ಒಬ್ಬಾನೊಬ್ಬ ಮಹಾಯೋಗಿಯು ವಿಕ್ರಮಾದಿತ್ಯನ ಬಳಿಗೆ ಬಂದು ಆತನಿಗೊಂದು ರಹಸ್ಯವಾದ ಮಂತ್ರವನ್ನು ಉಪದೇಶಿಸಿ ದನು. ಆತನು ಬಹುನಿಯಮದಿಂದ ಒಂದು ವರ್ಷ ಆಮಂತ್ರ ವನ್ನು ಜಪಿಸಿ ಹೋಮಮಾಡಲು, ಒಬ್ಬ ಪುರುಷನು ಯಜ್ಞ ಕುಂಡದಲ್ಲಿ ಹುಟ್ಟಿ, ಒಂದು ದಿವ್ಯವಾದ ಫಲವನ್ನು ರಾಜನಿ ಗಿತ್ತು ಎಲೈ ರಾಜನೆ, ಈಹಣ್ಣನ್ನು ತಿಂದವರಿಗೆ ಮುಪ್ಪುರೋ ಗ ಸಾವುಗಳಿಲ್ಲವು ಎಂದುಹೇಳಿ ಅದೃಶ್ಯನಾದನು. ಆಸಮ ಯಕ್ಕೆ ಸರಿದೂಗಿ ಕರೋಗದಿಂ ದ ಪೀಡಿತನಾದವನೋಬ್ಬನು ರಾಜನಿದ್ದೆ ಡೆಗೆ ಬಂದು, ವಿಕ್ರಮನನ್ನು ಕುರಿತು ' ಮಜರು ಜನೆ, ನೀನೇ ನಿನ್ನ ಪ್ರಜೆಗಳಿಗೆ ತಂದೆಯು, ನೀನೇತಾಯಿಯು, ನೀನೇ ಬಂಧುವು, ನೀನೇ ಆಪ್ತ ಮಿತ್ರನು, ನಮ್ಮ ಕಗ