ಪುಟ:ಇಂದ್ರವಜ್ರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ಇಪ್ಪತ್ತೆರಡನೆಯ ಸಾಲಭಂಜಿಕೆಯು ಕೀರ್ತಿಸಿದ - ರೀತಿಯು ಹೇಗೆಂದರೆ; ('ಒಂದು ಸಾರಿ ವಿಕ್ರವರಾದನು ಕೃಶನೂ ಚಿಂತಾಕ್ರಾಂತ ನೂ ಆಗಿದ್ದ ಒಬ್ಬ ಪುರುಷನನ್ನು ಕಾಣಲು, ಅವನ ಅವಸ್ಥೆಗೆ ಕಾರಣವೇನೆಂದು ಪ್ರಶ್ನಿಸಿದನು, ಅವನು ಎಲೈ, ನೀನು ಯಾ ರೋ ಮಹನೀಯನಂತೆ ಕಾಣುವಿ, ಇಲ್ಲಿಗೆ ಕೊಂಚ ದೂರದಲ್ಲಿ ನಿ॰ಲಪರ್ವತವಿರುವುದು, ಅದರ ತುದಿಯಲ್ಲಿ ಬಂದು ಗವಿಯಿದೆ, ಅದರ ನಡುವೆ ಶ್ರೀ ಕಾಮಾಕ್ಷಿ ದೇವಿಯ ಮೂರ್ತಿಯಿದೆ, ಅದರ ಹಿಂಭಾಗದಲ್ಲಿ ಇನ್ನೊಂದು ಗಹುಯಿದೆ, ಅದರ ಬಾಗಲು ಮುಚ್ಚ ಲ್ಪಟ್ಟಿದೆ, ಅದರ ಒಳಗಡೆ ಒಂದು ಬಗೆಯರಸದ ಮಡಕೆಯಿದೆ ಆ ರಸವು ಯಾವವಸ ವಿಗೆ ತಗುಲ ವುದೊ ಆವಸ್ತುವು ಚಿ « ವಾಗುವುದು. ಆ ರಸವನ್ನಪೇಕ್ಷಿಸಿ, ನಾನು ಹನ್ನೆರಡು ವರ್ಷ ಗಳಿ೦ದಲೂ ಕಾಮಾಕ್ಷಿಯನ್ನು ಕುರಿತು ತಪಸ್ಸಮಾಡುತ್ತಿರುವೆ ನು; ಆದರೂ ಆಳಗಿನ ಗುಹೆಯ ಬಾಗಿಲು ಮುಚ್ಚಿಕೊಂಡೆ ಇದೆ, ತೆಗೆಯ ಲಾಗದ , ಎಂದನು. ಕೂಡಲೆ ವಿಕ್ರಮನು ೩ನೇ ಆ ಗವಿಯೊಳಕ್ಕೆ ಹೋಗಿ ಒಳಗಿನ ಗುಹೆಯಮುಂದೆನಿಂ ತು ತನ್ನ ಕಂಠರಕ್ಕವನ್ನೇ ದೇವತೆಗೆ ಆಹುತಿಕೊಡಲು ಉದ್ದು ಕಪಟ್ಟನು. ಆಗ ದೇವತೆಯು ಆತನ ಸಾಹಸಕ್ಕೂ, ಚಿತ್ತ ಸೈರ್ಯ ಮೆಚ್ಚಿ ಆತನಲ್ಲಿ ಪ್ರಸನ್ನಳಾಗಿ ಆತನು ಬೇಡಿ ದಂತೆ ರಸಕುಂಭವನ್ನು ದೀನನಾದ ಪುರುಷನಿಗೆ ಕೊಟ್ಟು, ವಿಕ ಮನಿಗೆ ಅನೇಕ ವರಗಳನ್ನಿತಳು.ಭೋಜನು ಇಂತಹ ಕಾರ್ಯ ಗಳನ್ನಷ್ಟು ಮಾಡಿರುವನು ? ? ಪ್ರತ್ಯುತ್ತರವಿಲ್ಲ.