ಪುಟ:ಇಂದ್ರವಜ್ರ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ತಲಾಮಲಕದಂತೆ ತಿಳಿಯುವ ದಿವ್ಯದೃಷ್ಟಿಯುಂಟು ಅಂತಹ ಕ ವಿಗಳು ಪ್ರಾಚೀನ ಭರತವರ್ಷದಲ್ಲಿ ಬಹುಮಂದಿಯಿದ್ದರು, ಅವ ರಲ್ಲಿ ಕಾಳಿದಾಸನು ಅತಿ ಮುಖ್ಯನಾ ದೊಬ್ಬನು. ಕಾಳಿದಾಸನು ಭೋಜನಿದಿಗೆ ಕೈಕಟ್ಟಿಕೊಂಡು ನಿಂದಿರುತ್ತಿದ್ದನು. ಆದರೆ ಈಗ ಭೋಜನ ಹೆಸರು ಕಾಳಿದಾಸನಿಂದಲೇ ಪ್ರಸಿದ್ಧವಾಗಿದೆ. ಕಾಳಿದಾಸನ ಹೆಸರು ಆ ಚಂದ್ರಾರ್ಕವಾಗಿ ಜನರ ಜ್ಞಾಪಕದಲ್ಲಿ ರುವುದು, ಭೋಜನ ಕೋಟೆಕೊತ್ತಲುಗಳ, ಸಿಂಹಾಸನ ಕಿರೀಟ ಗಳೂ ಎಲ್ಲಿಹೋದವೋ ಯಾರಿಗೂ ಗೊತ್ತಿಲ್ಲ, ಆದರೂ ಅವನ ಹೆಸರು ಮಾತ್ರ ಅವನ ಸ್ತುತಿಃಾಠಕನಾದ ಕಾಳಿದಾಸನ ಹೆಸ ರನ್ನು ಎಡೆಬಿಡದೆ ಹಿಂಬಾಲಿಸುತ್ತಿರುವುದು ಸಂಪೂರ್ಣ, Printed by K, S. Krishna Iyer B. A., at the Irish Press, Bangalore City.