ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೪

ಜನಪದ ಕಥೆಗಳು

"ನನ್ನ ಮೇಲೇಕೆ ಸಿಟ್ಟು ದೇವಾ ? ನಾನಾವ ಅಪರಾಧ ಮಾಡಿದೆ ?"

"ನನ್ನ ಸೊಂಟ ನೋವಾಗಿದೆ."

"ಸೋಂಟನೋವು ಏಕಾಯಿತು ?" ಗೌಡನ ಪ್ರಶ್ನೆ.

"ಬಂದಿದ್ದನಲ್ಲ ನಿಮ್ಮ ಫೌಜದಾರ. ತನ್ನೂರಿಗೆ ಹೋಗುವಾಗ ಕುದುರೆ ಹತ್ತುವ ಮುಂದೆ ನನ್ನ ಮೇಲೆ ಕಾಲಿಟ್ಟು ನೆಗೆದು ಕುದುರೆ ಹತ್ತಿದನು. ಆ ಇಸಲಿಗೆ ಸೊಂಟ ನೋವು ಆಗಿದೆ" ಹನುಮಪ್ಪನ ವಿವರನಣೆ.

"ಆ ಫೌಜದಾರನನ್ನು ಬಿಟ್ಟು ನನ್ನನ್ನೇಕೆ ಹಿಡಿದಿರಿ ದೇವಾ ?"

"ಯಾರನ್ನು ಹಿಡಿಯಲಿ ? ಫೌಜದಾರನು ನನ್ನ ಭಕ್ತನೇ ? ಭಕ್ತರನ್ನು ಬಿಟ್ಟು ಅನ್ಯರನ್ನು ನಾನೇಕೆ ಹಿಡಿಯಲಿ" ಹನುಮಂತದೇವರ ಸ್ಪಷ್ಟೀಕರಣ. "ಬೆಳಗಾಗುತ್ತಲೇ ಎಣ್ಣೆ ಮಜ್ಜನ ಮಾಡಿಸುತ್ತೇನೆ. ತಾಳು ದೇವ" ಎಂದು ಗೌಡನು ಕಾಲಿಗೆರಗಲು ಹನುಮಪ್ಪನು ಅವರನ್ನು ಬಿಟ್ಟುಕೊಟ್ಟನು.

ಕನಸಿನಲ್ಲಿ ಮಾತುಕೊಟ್ಟ ಪ್ರಕಾರ ಗೌಡನು, ಮಗಿ ಎಣ್ನೆ ತರಿಸಿ ಹನುಮಪ್ಪ ದೇವರಿಗೆ ಎಣ್ನೆ ಮಜ್ಜನ ಮಾದಿಸಿದನು.

 •