ಈ ಪುಟವನ್ನು ಪ್ರಕಟಿಸಲಾಗಿದೆ
ನಾನು ಕಂಡ ಗೌರಮ್ಮನವರು
೧೯
ಇಷ್ಟೆಲ್ಲ ಆಟವಾಡಿದ ಗೌರಮ್ಮನವರು ಇನ್ನಿಲ್ಲ. 'ಓ' ಕೊಡದ ನಾಡಿಗೆ ನಡೆದಬಿಟ್ಟರವರು. ಈ ಎಲ್ಲ ಸವಿ ನೆನಪುಗಳು ಹಿಂದೆ ಒಂದು ಕರಾಳಸತ್ಯವು ತಾಂಡವವಾಡಿ ಅವರ ಬಳಗವನ್ನೂ-ಕನ್ನಡ ನಾಡನ್ನೂ ಅಪಾರ ಶೋಕಕ್ಕೀಡುಮಾಡಿದೆ. ನುಗ್ಗಿ ಬರುವ ಇಂತಹ ನೆನಪುಗಳೊಡನೆ 'ಇನ್ನು ಅವರಿಲ್ಲವಲ್ಲಾ' ಎಂಬ ನೆನಪು ದುಃಖವನ್ನು ನೂರ್ಮಡಿಸುತ್ತದೆ. ಅವರಿಲ್ಲವೆಂಬ ದುಃಖ, ಈ ನೆನಪುಗಳಲ್ಲಿ ಒಂದು ನಿಮಿಷವಾದರೂ ಮರೆತರೆ ಅದೇ ರಸನಿಮಿಷ! ಇಂಥ ಪವಿತ್ರ ಆತ್ಮಗಗಳೂ ಇಲ್ಲದಾಗುತ್ತಿರಬಹುದೇ ?
ಧಾರವಾಡ
೨೦-೪-೧೯೩೯
ದತ್ತಾತ್ರೇಯ ಕುಲಕರ್ಣಿ