ಪುಟ:ಕಥಾವಳಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಕಾದುದಿಲ್ಲ, ಕಥೆಯನ್ನು ಹೇಳುವದೇ ಆಗಲಿ ಕೇಳುವದೇ ಆಗಲಿ, ಅದೂ ಒಂದು 'ಪಾಠ' ವೆಂಬ ಬೇಸರವ ಯಾರಲ್ಲಣ ಉಂಟಾಗಬಾರದು. ಕಥೆಯನ್ನು ಹೇಳುವಾಗ ಉಪಾಧ್ಯಾಯರು ಮಕ್ಕಳ ಚಿತ್ತವೃತ್ತಿಯನ್ನು ಪರೀಕ್ಷಿಸುತ್ತಿರಬೇಕು, ಒಂದೇ ಮನಸ್ಸಿನಿಂದ ಮಕ್ಕಳು ಕೇಳುತ್ತಿದ್ದಾರೆಂಬು ದನ್ನು ತಿಳಿಯಲು ಮಧ್ಯೆಮಧ್ಯೆ ಪ್ರಶ್ನೆಯನ್ನು ಹಾಕುತ್ತಿರಬೇಕು, ವಿಷಯ ವನ್ನು ಮಕ್ಕಳು ಚೆನ್ನಾಗಿ ಗ್ರಹಿಸಿದರೆಂದು ದೃಢಪಡಿಸಿಕೊಂಡಲ್ಲದೆ ಕಥೆಯ ನ್ನು ಮುಂದಕ್ಕೆ ಸಾಗಿಸಬಾರದು, ಮಕ್ಕಳಿಗೆ ತಿಳಿಯಲಿ, ತಿಳಿಯದಿರಲಿ, ಮುಗಿಸಿದರೆ ಆಯಿತೆಂದು ಭಾವಿಸಿ ಕಥೆಯನ್ನು ಮುಂದೆ ಮುಂದೆ ಸಾಗಿಸಿದ ಮಾತ್ರದಿಂದಲೇ ಪ್ರಯೋಜನವಿಲ್ಲ. ತಿಳಿಯದುದನ್ನು ಕೇಳಲು ಮಕ್ಕಳಿಗೆ ಅವ ಕಾಶಕೊಡಬೇಕು, ಅವರಿಗೆ ಅನುಭವವಿಲ್ಲದ ವಿಷಯಗಳನ್ನೂ (ಯುದ್ಧ ವಿಚಾರ, ಸೃಷ್ಟಿ ಯಚಮತ್ಕಾರ) ತಿಳಿಯದ ಶಬ್ದಗಳನ್ನೂ ವಿವರಿಸಿ ಮುಂದಕ್ಕೆ ಕಥೆಯನ್ನು ಸಾಗಿಸಬೇಕು, ಸಾಧ್ಯವಾದೆಡೆಯಲ್ಲೆಲ್ಲಾ ದೇವರ ಮಾಹಾತ್ಮ ವನ್ನೂ, ಸೃಷ್ಟಿಯ ವೈಚಿತ್ರವನ್ನೂ, ಸಸ್ಯ ಮೃಗಾದಿಗಳ ಸ್ವಭಾವವನ್ನೂ ವ್ಯಕ್ತಗೊಳಿಸುತ್ತಿರಬೇಕು, ತಿರಗ್ಟಂತುಗಳಲ್ಲಿ ದಯೆಯ, ದುಃಖೆಗಳಲ್ಲಿ ಅನುತಾಪವೂ, ಸದ್ವತ್ತಿಯಲ್ಲಿ ಅಭಿಲಾಷೆಯ, ನೃಸಜನರಲ್ಲಿ ನಯವೂ, ಸಾಧುಜನರಲ್ಲಿ ಪ್ರೀತಿಯ, ಶೂರರಲ್ಲಿ ಸ್ನೇಹವೂ, ದೀನರಲ್ಲಿ ಕ್ಷಮೆಯ ಉಂಟಾಗುವ ಕಥಾಸಂದರ್ಭಗಳನ್ನು ಮಕ್ಕಳ ಲಕ್ಷಕ್ಕೆ ಅವಶ್ಯವಾಗಿ ತರ ಬೇಕು. ಕಥೆಯನ್ನು ಹೇಳಿ ಪೂರೈಸಿದ ಅನಂತರ, ಅದರಿಂದ ತಿಳಿಯಬೇಕಾದ ಅ೦ಶಗಳನ್ನು ಮಕ್ಕಳಿಂದಲೇ ಹೇಳಿಸಬೇಕು. ಮೇಲಣ ತರಗತಿಗಳಲ್ಲಿ ಕಥೆಯ ಛಾಯೆಯನ್ನು ಪಾತ್ರ ಕೊಟ್ಟು ಕಥಾ ಸಂದರ್ಭವನ್ನೆಲ್ಲಾ ಪ್ರಮೀಕರಿಸಿ ವಿವರಿ ಸುವಂತೆ ಬಾಲಕರಿಗೆ ಹೇಳಬೇಕು. ಕಥಾವಳಿಯ ಮೊದಲನೆಯ ಭಾಗದಲ್ಲಿ ಬಾಲಕರು ಸಾಮಾನ್ಯವಾಗಿ ನೋಡಿರುವ ಜೀವಜಂತು, ಸಸಿ, ಹಿಂದೂ ಜನರು ಆಚರಿಸುವ ಮುಖ್ಯವಾದ ಹಬ್ಬ ಹಾಡಿಯ, ಇವುಗಳ ವಿಚಾರವಾದ ಕಥೆಗಳೂ, ಕಲ್ಪಿತ ಕಥೆಗಳೂ, ನೀತಿ ಕಥೆಗಳು, ಇತಿಹಾಸಗಳೂ, ಜೀವಿತಚರಿತ್ರೆಗಳೂ ಕೆಲಕೆಲವ್ರು ಇರು ವುವು, ಇವುಗಳನ್ನು ಇಲ್ಲಿ ಕೊಟ್ಟಿರುವ ಕ್ರಮದಲ್ಲಿಯೇ ಹೇಳಬೇಕಾದ ಆವಶ್ಯಕತೆ ಏನೂ ಇಲ್ಲ. ಒಂದೊಂದು ದಿನ ಒಂದೊಂದರ ಮೇರೆ, ಬಾಲಕರ ಯೋಗ್ಯತೆಯನ್ನರಿತು, ಪುಸ್ತಕಭಾಷೆಯನ್ನು ಮರೆತು, ಸಾಧಾರಣವಾಗಿ