ಪುಟ:ಕಥಾವಳಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣ್ಣು ಬಿಟ್ಟು ನೋಡಲು ಮರುದಿನ ಸರನು ಪಶ್ಚಿಮದಿಕ್ಕಿನಲ್ಲಿ ಸೌಮ್ಯವಾಗಿ ಕಾಣುತ್ತಿದ್ದನು, ಅವಳು ಆಯಾ ಸದಿಂದ, ಎಷ್ಟೊಂದುಹೊತ್ತು ಮೈ ಮರೆತು ಮಲಗಿರಬಹುದು! ನೀವೇ ಯೋಚಿಸಿ, ಎಚ್ಚರಗೊಂಡ ಮೇಲೆ ತಿರುಗಿ ಶ್ರದುವು ತೋರುವುದಕ್ಕೆ ಮೊದಲಾಯಿತು, ತಡೆಯಲಾರದಷ್ಟು ಹಸಿವು, ಬಾಯಾರಿಕೆ, ಎಲ್ಲಾದರೂ ಹೋಗಿ ಅಲ್ಲಲ್ಲಿ ಉದುರಿರುವ ಹಣ್ಣ ನಾ ದರೂ ತಿನ್ನ ಬೇಕೆಂದರೆ ಹಜ್ಜೆ ಇಡುವುದಕ್ಕೆ ಆಗದು. ಆದರೂ ಅವಳು ಹಾಗೆಯೆ ಸ್ವಲ್ಪ ಚೇತರಿಸಿಕೊಂಡು ಮೆಲ್ಲಮೆಲ್ಲನೆ ಹೊರಟಳು. ಅಷ್ಟರಲ್ಲಿಯೇ ಸೂರನು ಮುಳುಗಿದನು. ಕತ್ತಲೂ ಆಯಿತು. ಹುಲಿಗಳ ಆರ್ಭಟ, ನರಿಯ ಕೂಗು, ಹೆದರಿಕೆ, ಹಾಗೆಯೇ ಅವಳು ಮು೦ದೆ ಮುಂದೆ ಹೋಗುತ್ತಿರಲು, ನಕ್ಷತ್ರಗಳಂತೆ ಥಳಥಳಿಸುವ ಮಿಣಕು ಹುಳುಗ ಗಳಿಂದ ಬೆಳಕಾಗಿದ ಒಂದು ಪ್ರದೇಶವು ಕಾಣಬಂದಿತು, ಅಲ್ಲಿಗೆ ಹೋಗಿ ನೋಡಿದಳು. ಅಲ್ಲಿ ಒಂದು ದೊಡ್ಕ ಹುತ್ತವ ಇದ್ದಿತು. ಹುತ್ತವನ್ನು ನೋಡಿದೊಡನೆ ತನ್ನ ಸ್ವಪ್ಪ ವ ಜ್ಞಾಪಕಕ್ಕೆ ಬಂದಿತು. “ ಇದೇನು ! ಆಶ್ಚ ರ್ಯವಾಗಿರುವುದು, ಒಳ್ಳೆಯದು ! ಈ ಹುತ್ತದಲ್ಲಿ ಯಾವ ರಾಜಕುಮಾ ರನಾದರೂ ಇರುತ್ತಾನೆಯೋ ನೋಡೋಣ ' ಎಂದು, ಆ ಹುತ್ತದ ಹತ್ತಿರ ಹೋಗಿ ; ' ಹಾ ! ದೈವವೆ ! ಮುದುಕರಾದ ತಂದೆ ತಾಯಿಗಳನ್ನು ಬಿಟ್ಟು ನನ್ನ ಇಷ್ಟಜನರಿಂದ ಅಗಲಿ ಕಾಡುಪಾಲಾಗಿ ಹಸಿದು ಬಾಯಾರಿಕೆ ಸಂಕಟ ಪಡುತ್ತಾ, ದುಷ್ಯ ಮೃಗಗಳ ಬಾಯಿಗೆ ತುತ್ತಾಗಿರುವ ನನ್ನನ್ನು ಕಾಪಾ ಡುವ ಮಹಾತ್ಮರು ಯಾರಾದರೂ ಇಲ್ಲಿ ಇರುವರೆ ?” ಎಂದು ಬೇಡಿದಳು. ಕೂಡಲೆ ಆ ಹುತ್ತದೊಳಗಿನಿಂದ ಒಂದು ಧ್ವನಿಯು ಕೇಳಿಸಿತು. ಆ ಧ್ವನಿಯನ್ನು ಕಿವಿಗೊಟ್ಟು ಕೇಳಿ, “ ಏನು ! ನಾನು ನಾಗರಾಜನ ಮಗನು. ಭೂಲೋಕವನ್ನು ನೋಡುವುದಕ್ಕೆ ಬಂದಿರುವೆನು. ನೀನು ನನ್ನನ್ನು ಮದುವೆಯಾಗುವುದಾದರೆ ನಾನು ನಿನಗೆ ಸಹಾಯ ಮಾಡು ವೆನು ” ಎಂದೆ, ಚೆನ್ನಾಯಿತು ? ಈ ಹುತ್ತದಲ್ಲಿ ಹಾವಿರುವುದೋ ಚೇಳೇ ಇರುವುದೊ ? ಕ೦ಡವರಾರು ? ನಾನೇನುಮಾಡಲಿ ? ಕಾಣದವರನನ್ನು ನಾನು ಮದುವೆಯಾಗುವುದು ಹೇಗೆ ? ಅಯ್ಯೋ ? ಈಸಲಹೆಗೆ ಒಪ್ಪದಿದ್ದರೆ ನಾನು ಭಯಂಕರವಾದ ಈ ಕಾಡನ್ನು ಬಿಟ್ಟು ಊರು ಸೇರುವ ಬಗೆ ಹೇಗೆ?