ಪುಟ:ಕಥಾವಳಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಯಾಗಿ, ' ಹಲವ ಮಾತೇಕೆ ! ನಾನೇನೋ ಬಡವರ ಆಧಾರಿ, ದೊಡ್ಡವರ ಆಶ್ರಯ ನನಗೆ ನಿಜವಾಗಿಯೂ ಇಲ್ಲ. ರಾಜಾಧಿರಾಜರುಗಳೂ, ಧನಾಧಿ ಕಾರಿಗಳೂ ನನ್ನನ್ನು ಸೇವಿಸುವುದಿಲ್ಲ. ಬಡವರ ಕೂಗು ಗಗನ ಮುಟೀತೆ? ಆದುದರಿಂದ ನನ್ನ ಕೂಗು ಪ್ರಯೋಜನವಿಲ್ಲದಿದ್ದರೂ, ನಾನು ಒಂದೇ ಒಂದು ಮಾತನ್ನು ಹೇಳುವೆನು ಕೇಳಿ, ಯಾವ ಪದಾರ್ಥದ ಯೋಗ್ಯತೆ ಯನ್ನು ಪರೀಕ್ಷಿಸಬೇಕಾದರೂ ಸಾವಕಾಶವಾಗಿ ಪರೀಕ್ಷಿಸಬೇಕು. ನಮ್ಮೆ ಲ್ಲರನ್ನೂ ಒಂದೊಂದು ಕಡೆ ಯಾರಾದರೂ ನಾಲ್ಕಾರು ವರ್ಷ ಇಟ್ಟು ತರು ವಾಯ ತೆಗೆಯಲಿ, ಆಗ ನಮ್ಮ ನಮ್ಮ ಯೋಗ್ಯತೆಯು ಪ್ರಕಾಶವಾಗುವುದು? ಎಂದಿತು, ಇಷ್ಟರಲ್ಲಿಯೇ ಬೆಳಗಾಯಿತು. ರಾತ್ರಿ ನಡೆದ ವಿಚಿತ್ರವನ್ನು ಕಾವಲುಗಾರನು ಅವರಶೇಖರರಾಯ ನಿಗೆ ತಿಳಿಸಿದನು. ಇದನ್ನು ಪರೀಕ್ಷಿಸಬೇಕೆಂದು ಪ್ರತಿಯೊಂದು ಧಾನ್ಯ ವನ್ನೂ ಬೇರೆಬೇರೆ ಹಗೇವುಗಳಲ್ಲಿ ಹಾಕಿ ಮುಚ್ಚಿಡಿಸಿದ್ದು -ಕೆಲವು ವರ್ಷಗಳ ಮೇಲೆ ಒಂದು ದಿನ ರಾಜನು ಓಲಗದಲ್ಲಿ ಜ್ಞಾಪಿಸಿಕೊಂಡು ಹಗೇವುಗಳಲ್ಲಿ ಹೂಳಿದ್ದ ಧಾನ್ಯಗಳನ್ನು ತರಿಸಿದನು. ಅವುಗಳಲ್ಲಿ ರಾಗಿಯೊಂದು ವಿನಾ ಉಳಿದುದೆಲ್ಲವೂ, ಹುಳಿತು, ಕೊಳತು, ಹಾಳಾಗಿ ಹೋಗಿದ್ದು ವು. ಅ೦ದು ಕಾಗಿಯೇ ಶ್ರೇಷ್ಠ ಎಂದು ಜನರೆಲ್ಲರೂ ಗೊತ್ತು ಮಾಡಿದರು. ಇತರ ಧಾನ್ಯ ಗಳೂ ಒಪ್ಪಿಕೊಂಡು ವ. ೨೨, ಉತ್ತರನ ಕಥೆ. ಉತ್ತರನು ವಿರಾಟರಾಜನ ಮಗನು. ಒಂದು ದಿನ ವಿರಾಟನರಾಜ್ಯಕ್ಕೆ ಶತ್ರುಗಳು ನುಗ್ಗಿ ದಕ್ಷಿಣದಿಕ್ಕಿನಲ್ಲಿ ಮೇಯುತ್ತಿದ್ದ ರಾ ಜನ ಆಕಳುಗಳನ್ನು ಅಟ್ಟಿಕೊಂಡು ಹೋದರು. ಆ ಶತ್ರುಗಳನ್ನು ಓಡಿಸಿ ಹಸುಗಳನ್ನು ಬಿಡಿಸಿ ಕೊಂಡು ಬರಲು, ಪರಾಟನು ದೊಡ್ಡ ಸೇನೆಯೊಡನೆ ಹೊರ ತನು, ಮರು ದಿನ ಕುಯ್ಯೋ, ಮರೆ ಎಂದು ಉತ್ತರದಿಕ್ಕಿನಿಂದ ಗೋಪಾಲಕರು ಓದಿ ಬಂದು ಹಸುಗಳನ್ನೆಲ್ಲಾ ಶತ್ರುಗಳು ಅಟ್ಟಿ ಕೊಂಡು ಹೋದರೆಂದು ಕೂಗಿ