ಪುಟ:ಕನಕಲತಾಪರಿಣಯ ನಾಟಕಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ. ~ ~~ w ww ಪ್ರಮಥಾನಂದಂ-ಚಂ|| ಮಾ| ಶ್ರಿತಜನತಾ ಸುರದ್ರು ಮನೆನಿಪ್ಪ ನೆಗಳ್ಯ ಕಾಲಕಾಲನಂ | ಕ್ಷಿತಿರಥನಾಗಿ ರಕ್ಕಸರನಿಕ್ಕಿದ ಮಸ್ತಕ ಸೋಮ ಸೋಮನಂ | ನುತಮುನಿವೃಂದ ಸಂಸ್ತುತನನೊಪ್ಪುವ ವಿಷ್ಟಪ ನೇತ್ರನೇತ್ರನಂ ನುತಿಸುವೆನೊಲ್ಲು ನನ್ನನದೊಳಾಂತ್ರಿದಶಾಲಯ ನಾಥನಾಥನಂ || i| ೫೪ || (ಎಂದು ಜಪಸರಮುಂ ತಿರುಪುತ್ತೆ) ಇದೇಂ ಸಮಿತ್ತುಗಳಂ ತರ್ಪದರ್ಕ ಪೋದ ವಟುಗಳೊರ್ವರುಂ ಬಾರಲಿಲ್ಲಂ. ಸಮರ್ಥಕಂ-( ಪೊಕ್ಕು ನವನಾಗಿ ) ನಿರ್ಮಲಾ ನದಿಯೊಳಗೊದಕಮಂ ಕೊಂಡುಬರಲೆಂದು ನಾಂ ಪೋಗಿರ್ದಾಗಳೆರ್ನಳ್ ರಾಯಗುವರಿ ಪೊನಲೊಳೊಂದು ಸುಳಿಗೆ ಸಿಕ್ಕಿ ತೊಳಲುತಿರ್ದುದಂ ಕಂಡು ಎಮ್ಮೊ' ದಿಗರ ಸಾಹದಿಂದವಳಂ ಕರೆಗಿಳ್ಳು ತಂದೆ. ಈಗಳೆನಗಾವುದು ಬೆಸನಂ. ಪ್ರಮಥಾನಂದಂ-( ಯೋಗದೃಷ್ಟಿಯಿಂ ನಿಟ್ಟಸಿ) ಅ8 ! ಅವಳಿ ಚಂಡವಿಕ ಮನ ಕುವರಿಯಾದ ಕನಕಲತೆ, ಪತಿವಿರಹಮಂ ಸೈಸಲಾರದೆ ಪೊನ೪' ಬಿಳ್ಳ, ಒಳ್ಳಿತ್ತು. ಎಲೆ ಸಮರ್ಥಕ : ನಡೆ, ನಾ ನುಂ ಬಂದ . ಅವಳನೆನ್ನಾಶ್ರಮಕೆ ಕರೆದುಯ್ದು ಅವಳಿನಿಯ ನೈತರ್ಪನ್ನೆವರ ಮವಳ ಜಾಗರೂಕತೆಯಿಂ ಸಲಪುವಂ. ( ಎಂದಿರ್ದರುಂ ತೆರಳರ.) ಇ೦ತಿ ದು > ಕನಕಲತಾ ದುಃಖದರ್ಶಕವೆಂಬ ನಾಲ್ಲ ನಯಂಕಂ,